HEALTH TIPS

No title

                                       ವಿವಿಧ ಯೋಜನೆಗಳ  ಜಾರಿಗೆ ಮನವಿ
    ಬದಿಯಡ್ಕ : ಹಲವು ವರ್ಷಗಳ ಹಿಂದೆಯೇ ಅಭಿವೃದ್ಧಿಗೊಳ್ಳಬೇಕಾಗಿದ್ದು, ಗ್ರಾಮಸಭೆಗಳಲ್ಲಿ ಆದ್ಯತೆ ನೀಡಿದರೂ 2018-19ರ ಕೆಲವು ಪ್ರಧಾನ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮುತುವಜರ್ಿ ವಹಿಸದಿರುವುದರಿಂದ ಬದಿಯಡ್ಕ ಗ್ರಾಮ ಪಂಚಾಯತಿಗೆ  ನೀಚರ್ಾಲು ಪ್ರದೇಶ ನಿವಾಸಿಯಾಗಿರುವ ಎಂ.ಎಚ್. ಜನಾರ್ಧನ ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
  ಗ್ರಾಮಸಭೆಯಲ್ಲೂ, ಗ್ರಾಮಪಂಚಾಯತಿ ವಕರ್ಿಂಗ್ ಗ್ರೂಪಿನಲ್ಲೂ, ಅಭಿವೃದ್ಧಿ ಸೆಮಿನಾರ್ನಲ್ಲಿಯೂ ಅತ್ಯಂತ ಆದ್ಯತೆಯ ಪ್ರಾತಿನಿಧ್ಯ ನೀಡಿ ಅಭಿವೃದ್ಧಿ ಯೋಜನೆಗೆ ಫಂಡ್ ಕಾಯ್ದಿರಿಸುವಂತೆ ಕೇಳಿಕೊಳ್ಳಲಾಗಿತ್ತು. ಇದರಲ್ಲಿ ಕೆಲವೊಂದು ಯೋಜನೆಗಳಾದ  ನೀಚರ್ಾಲು ಕೆಳಗಿನ ಪೇಟೆಯಲ್ಲಿ ಸಾರ್ವಜನಿಕ ಬಸ್ ಪ್ರಯಾಣಿಕರ ತಂಗುದಾಣ ಹಾಗೂ ಶೌಚಾಲಯ ನಿಮರ್ಾಣ, ಬೇಳ ಗ್ರಾಮಾಧಿಕಾರಿಗಳ ಕಚೇರಿ- ಅಗ್ನಿಶಾಮಕ ಕೇಂದ್ರಕ್ಕೆ ಕಾಯ್ದಿರಿಸಿದ ಸ್ಥಳದ ಮೂಲಕ ಕುಮಾರಸ್ವಾಮಿ ಭಜನಾ ಮಂದಿರಕ್ಕೆ ಸಂಚರಿಸುವ ಸಾರ್ವಜನಿಕ ರಸ್ತೆ ಕಾಂಕ್ರೀಟೀಕರಣಗೊಳಿಸುವಿಕೆ, ಬೇಳ ಕುಮಾರಮಂಗಲ ಕ್ಷೇತ್ರ-ಬೇಳ ಸರಕಾರಿ ಗೋಶಾಲಾ ಕೇಂದ್ರ ರಸ್ತೆ ಕಾಂಕ್ರೀಟೀಕರಣ, ಬದಿಯಡ್ಕ ಜಿಬಿಯುಪಿ ಶಾಲಾ ಮುಂಭಾಗ ಸ್ಥಿರ ಬಸ್ ಪ್ರಯಾಣಿಕರ ತಂಗುದಾಣ ನಿಮರ್ಾಣಕ್ಕೆ ಕೂಡಲೇ ಅಗತ್ಯವುಳ್ಳ ನಿಧಿ ಕಾಯ್ದಿರಿಸಬೇಕೆಂದು ಅವರು ಆಡಳಿತ ಸಮಿತಿಗೆ ತಮ್ಮ ಮನವಿಯಲ್ಲಿ ತಿಳಿಸಿರುವರು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries