HEALTH TIPS

No title

                  ಹಿಂದೂ ಸಮಾಜೋತ್ಸವ-ಬದಿಯಡ್ಕ ಸಮಿತಿ ಸಭೆ
    ಬದಿಯಡ್ಕ : ಏಪ್ರಿಲ್ 27ರಂದು ಬದಿಯಡ್ಕದಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದ ಬದಿಯಡ್ಕ ಪಂಚಾಯತು ಸಮಿತಿ ಸಭೆಯು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಭಾನುವಾರ ನಡೆಯಿತು. ಇದೇ ಸಂದರ್ಭದಲ್ಲಿ ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಅವರು ಸಮಾಜೋತ್ಸವಕ್ಕೆ ನೀಡಿದ ದೇಣಿಗೆಯನ್ನು ಅವರ ಸಂಬಂಧಿ ಪ್ರಮೋದ್ ಕೃಷ್ಣ ಕಿಳಿಂಗಾರು ವಿಶ್ವಹಿಂದೂ ಪರಿಷತ್ ಜಿಲ್ಲಾ ನೇತಾರ ಹಾಗೂ ಪ್ರಧಾನ ಕಛೇರಿಯ ಉಸ್ತುವಾರಿ ಸಂಕಪ್ಪ ಭಂಡಾರಿಯವರಿಗೆ ನೀಡಿ ನಿಧಿ ಸಂಗ್ರಹಕ್ಕೆ ಚಾಲನೆಯನ್ನು ನೀಡಿದರು.
ಬದಿಯಡ್ಕ ಪಂಚಾಯತು ಸಮಿತಿ ಅಧ್ಯಕ್ಷ ಮಹೇಶ್ ವಳಕ್ಕುಂಜ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿಂದೂ ಸಮಾಜೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಹರೀಶ್ ರೈ ಪುತ್ರಕಳ ಕಾರ್ಯಕ್ರಮದ ಕುರಿತು ವಿವರಣೆಯನ್ನು ನೀಡಿ ಮಾತನಾಡುತ್ತಾ ಪ್ರತಿಯೊಂದು ಹಿಂದೂ ಮನೆಯ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕರ್ತರು ಶ್ರಮವಹಿಸಬೇಕೆಂದು ಕರೆನೀಡಿದರು. ಸಮಾಜೋತ್ಸವ ಸಮಿತಿಯ ಕೋಶಾಧಿಕಾರಿ ಭಾಸ್ಕರ ಬದಿಯಡ್ಕ, ಸುನಿಲ್ ಕಿನ್ನಿಮಾಣಿ, ನ್ಯಾಯವಾದಿ ಗಣೇಶ್ ಬದಿಯಡ್ಕ, ರಾಮಕೃಷ್ಣ ಹೆಬ್ಬಾರ್, ಪಂ.ಸಮಿತಿಯ ಕಾರ್ಯದಶರ್ಿ ಹಿತೇಶ್ ಬದಿಯಡ್ಕ, ಜಯಪ್ರಕಾಶ್ ಪಟ್ಟಾಜೆ ಮಾತನಾಡಿದರು. ಮಾಚರ್್ 31ರಂದು ವಾಡರ್ುಮಟ್ಟದಲ್ಲಿ ಧ್ವಜ ದಿನಾಚರಣೆಯನ್ನು ಆಚರಿಸಲು ತೀಮರ್ಾನಿಸಲಾಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries