HEALTH TIPS

No title

                        " ಶ್ರೀ ಶಂಕರ ಕೃಪಾ "  ವಾಣಿಜ್ಯ ಸಂಕೀರ್ಣ ಉದ್ಘಾಟನೆ
    ಮುಳ್ಳೇರಿಯ :  ಲೋಕಾಃ ಸಮಸ್ತ ಸುಖಿನೋ ಭವಂತು ಎಂಬುದಾಗಿ ಸಾರುತ್ತಾ ಸರ್ವ ಮಾನವ ಕುಲಕ್ಕೆ ಹಿತವನ್ನೇ ಭಯಸುತ್ತದೆ ಬ್ರಾಹ್ಮಣ ಸಮಾಜ.  ಇದೀಗ ಕಾಸರಗೋಡು ದ್ರಾವಿಡ ಬ್ರಾಹ್ಮಣ ಸಂಘ ಇದರ  ಆಶ್ರಯದಲ್ಲಿ ಮುಳಿಯಾರಿನ ಬೋವಿಕ್ಕಾನದಲ್ಲಿ ಕಾರ್ಯಪ್ರವೃತ್ತಗೊಳ್ಳಲಿರುವ ಶ್ರೀ ಶಂಕರ ಕೃಪಾ  ವಾಣಿಜ್ಯ ಸಂಕೀರ್ಣವು ಯಶಸ್ವಿಯಾಗಿ ಬೆಳಗಲಿ. ಸಂಘಟನೆಯು ವಿವಿಧ ಸಮಾಜ ಮುಖೀ ಕಾರ್ಯಗಳನ್ನು ಎಸಗುತ್ತ ಮಾದರಿಯಾಗಲಿ. ಈ ಉದ್ಯಮಕ್ಕೆ ನಮ್ಮ ಪೂರ್ಣ ಅನುಗ್ರಹಗಳಿವೆ ' ಎಂದು ಎಡನೀರು ಮಠಾಧೀಶ  ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ತಮ್ಮ ಅನುಗ್ರಹ ಆಶೀರ್ವಚನದಲ್ಲಿ ನುಡಿದರು.
   ಬೋವಿಕ್ಕಾನದಲ್ಲಿ ಸಂಘದ ವತಿಯಿಂದ ನಿಮರ್ಿಸಲಾದ ವಾಣಿಜ್ಯ ಸಂಕೀರ್ಣದ ಕಟ್ಟಡವನ್ನು ಗುರುವಾರ ದೀಪಜ್ವಲನೆ ಮಾಡಿ ಲೋಕಾರ್ಪಣೆಗೈದು ಅವರು ಆಶೀರ್ವಚನ ನೀಡಿದರು.
    ಸಮಾರಂಭವು ಬೆಳಗ್ಗೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ  ಪ್ರಾರಂಭವಾಯಿತು.  ಅನಂತ ಭಟ್ ಮತ್ತು ವೃಂದದವರ ವೈದಿಕ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಸಂಘದ ಅಧ್ಯಕ್ಷ ಪಾಂಡುರಂಗ ಭಟ್ ಆನೆಮಜಲು ಶ್ರೀಗಳವರಿಗೆ ಹಾರಾರ್ಪಣೆ ಫಲಸಮರ್ಪಣೆ ಮಾಡಿ ಅನುಗ್ರಹ ಪಡೆದುಕೊಂಡರು. ಶಂಕರನಾರಾಯಣ ಹೊಳ್ಳ ಪರಯಂಗೋಡು  ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಸಂಘದ ಗೌರವಾಧ್ಯಕ್ಷ ವಿಷ್ಣು ಭಟ್ ಆನೆಮಜಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದ ಸದಸ್ಯರನ್ನು ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಸಾಂದಭರ್ಿಕ ಸಹಾಯ ಮಾಡಿದ ಬಂಧುಗಳನ್ನು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಸಂಘಟನೆಯ ಆರ್ತತ್ರಾಣ ಸಹಾಯ ನಿಧಿ ಯೋಜನೆಯಂತೆ  ಮುತ್ತು ಬೋವಿಕ್ಕಾನ ಇವರಿಗೆ ಧನ ಸಹಾಯ ನೀಡಿ ಸಹಾಯ ಹಸ್ತವನ್ನು ನೀಡಲಾಯಿತು.  ಮುರಳಿ ಸ್ಕಂದ  ವಂದಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿದರು.
   ಹಿನ್ನೆಲೆ:
    ದಿ. ಶಾಮ ಭಟ್ ಕಾಟಿಪ್ಪಳ್ಳ ಅವರು  ಸಮಾಜದ ಸವರ್ಾಂಗೀಣ ಸಂವರ್ಧನೆಯ  ಉದ್ದೇಶವನ್ನಿಟ್ಟುಕೊಂಡು ಮಾಡಿದ ಪ್ರಯತ್ನದ ಫಲವಾಗಿ ಕಾಸರಗೋಡು ದ್ರಾವಿಡ ಬ್ರಾಹ್ಮಣ ಸಂಘ (ರಿ) ಎಂಬ ಹೆಸರಿನಲ್ಲಿ ಬೋವಿಕ್ಕಾನ ಕೇಂದ್ರೀಕರಿಸಿ 1974 ರಲ್ಲಿ ನಿಯಮಾನುಸಾರವಾಗಿ ಸಂಘನೆಯ ನೊಂದಾವಣೆನೆಯಾಗಿ 1996 ರಲ್ಲಿ ಸರಕಾರದಿಂದ ಸ್ಥಳ ಮಂಜೂರಾಗಿ ದೊರೆಯಿತು. ದಿ. ಸುಬ್ರಾಯ ಭಟ್ ಪಯೋಲ, ದಿ. ಹರಿಕೃಷ್ಣ ಭಟ್ ಸಿದ್ದನಕೆರೆ, ದಿ. ದಾಮೋದರ ಬಳ್ಳುಳ್ಳಾಯ, ಪಾತನಡ್ಕ ಶಂಕರನಾರಾಯಣ ಭಟ್,  ಕೊಳಚಪ್ಪೆ ಮಾಧವ ಭಟ್, ಕಾಟಿಪ್ಪಳ್ಳ  ಗೋಪಾಲಕೃಷ್ಣ ಭಟ್ ಮೊದಲಾದವರು ಅಂದಿನ ಕಾಲದಲ್ಲಿ  ದಿ. ಶಾಮ ಭಟ್ ಕಾಟಿಪ್ಪಳ್ಳ ಅವರೊಂದಿಗೆ ಮುತುವಜರ್ಿಯಿಂದ  ಸಹಕರಿದ್ದರು.  ಡಾ. ಸುಬ್ರಾಯ ಭಟ್  ಕಾಟಿಪ್ಪಳ್ಳ ಹಾಗೂ ಅವರ ತಂದೆ ಮತ್ತು ಹಿರಿಯರು ಮಾಡಿದ ದೀರ್ಘ ದೃಷ್ಥಿ ಯೋಜನೆಯನ್ನು ಸಾಕ್ಷಾತ್ಕರಿಸುವ ಉದ್ದೇಶದಿಂದ ಸಹೃದಯ ಸ್ನೇಹಿತರನ್ನು ಒಡಗೂಡಿಕೊಂಡು ಪ್ರಯತ್ನ ಮುಂದುವರಿಯಲಾಗಿ ' ಶ್ರೀ ಶಂಕರಕೃಪಾ ವಾಣಿಜ್ಯ ಸಂಕೀರ್ಣ ' ವು ಲೋಕಾರ್ಪಣೆಗೊಂಡಿತು. ಆನೆಮಜಲು ವಿಷ್ಣು ಭಟ್ ಅವರ ನೇತೃತ್ವ ಸಂಘಟನೆಯ ಆಶ್ರಯದಲ್ಲಿ ಮುಂದೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದರೊಂದಿಗೆ ಹಲವು ಸಮಾಜಮುಖೀ ಯೋಜನೆಗಳನ್ನು ಕಾರ್ಯಗತಗೊಳಿಸಲು ಉದ್ದೇಶವಿರಿಸಲಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries