HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಇಂದು(ಸೋಮವಾರ) ವಿಶ್ವ ಪುಸ್ತಕ ದಿನಾಚರಣೆ
    ಕಾಸರಗೋಡು: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಕಾಸರಗೋಡು ಸಹಯೋಗದೊಂದಿಗೆ ಸುಬ್ಬಯ್ಯಕಟ್ಟೆ ಬಿ.ಎ.ಮುಹಮ್ಮದ್ ಸ್ಮಾರಕ ಗ್ರಂಥಾಲಯ ಮತ್ತು ಕಲಿಕಾ ಕೇಂದ್ರದ ಸಹಕಾರದೊಂದಿಗೆ ವಿಶ್ವ ಪುಸ್ತಕ ದಿನಾಚರಣೆಯು ಎ.23ರಂದು ಅಪರಾಹ್ನ 2ಕ್ಕೆ ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಕಾಯರ್ಾಲಯದಲ್ಲಿ ನಡೆಯಲಿದೆ.
    ಪುಸ್ತಕ ದಿನಾಚರಣೆಯ ಉದ್ಘಾಟನೆಯನ್ನು ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ನಿರ್ವಹಿಸುವರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿರಾಜ್ ಅಡೂರು ಅಧ್ಯಕ್ಷತೆ ವಹಿಸುವರು.  ಇದೇ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ಪುಸ್ತಕೋದ್ಯಮ ಎಂಬ ವಿಷಯದಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ನಿವೃತ್ತ ಉಪನ್ಯಾಸಕ, ಸಾಹಿತಿ ಎಸ್.ಬಿ.ಖಂಡಿಗೆ, ಸರಕಾರಿ ಕಾಲೇಜಿನ ನಿವೃತ್ತ  ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಮಾತನಾಡುವರು.
   ಕಾರ್ಯಕ್ರಮದಲ್ಲಿ ಹಾಸ್ಯ ಸಾಹಿತಿ ಹರೀಶ್ ಪೆರ್ಲ ಅವರನ್ನು ಗೌರವಿಸಲಾಗುವುದು. ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ , ನಿವೃತ್ತ ಪ್ರಾಂಶುಪಾಲ ಡಿ.ಸುನೀತ್ ಕುಮಾರ್, ನಿವೃತ್ತ ಉಪನೋಂದಣಾಧಿಕಾರಿ ಮುಹಮ್ಮದಾಲಿ ಪೆರ್ಲ, ಸಾಹಿತಿ ಸುಂದರ ಬಾರಡ್ಕ, ಕರಿಂಬಿಲ ಲಕ್ಷ್ಮಣ ಪ್ರಭು, ಸಿರಿಗನ್ನಡ ಪುಸ್ತಕ ಮಳಿಗೆ ಸಂಚಾಲಕ ಕೇಳು ಮಾಸ್ತರ್ ಅಗಲ್ಪಾಡಿ, ಬಿ.ಎ. ಮುಹಮ್ಮದ್ ಸ್ಮಾರಕ ಗ್ರಂಥಾಲಯ ಅಧ್ಯಕ್ಷ ಅಶೋಕ ಭಂಡಾರಿ ಮತ್ತಿತರರು ಭಾಗವಹಿಸುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries