HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಆರಿಕ್ಕಾಡಿ ಚಾವಡಿ  ಶ್ರೀಧೂಮಾವತಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ
   ಕುಂಬಳೆ: ಆರಿಕ್ಕಾಡಿ ಚಾವಡಿ ಬಳಿಯ ಶ್ರೀ ಧೂಮಾವತಿ ತರವಾಡು ಭಂಡಾರ ಮನೆಯ ಶ್ರೀಧೂಮಾವತಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಲಶೋತ್ಸವ, ತರವಾಡು ಗೃಹಪ್ರವೇಶ ಹಾಗೂ ನೇಮೋತ್ಸವ ಸೋಮವಾರ ತಾಂತ್ರಿಕ, ವೈಧಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
   ಸೋಮವಾರ ಬೆಳಿಗ್ಗೆ 6ಕ್ಕೆ ಗಣಪತಿಹೋಮ, ಕಲಶಪೂಜೆ, ತರವಾಡು ಗೃಹಪ್ರವೇಶಗಳು ನಡೆದು ಬಳಿಕ  ಬೆಳಿಗ್ಗೆ 10.30ರ ಮಿಥುನ ಲಗ್ನದಲ್ಲಿ ಶ್ರೀದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕಗಳು ಸಾಂಗವಾಗಿ ನೆರವೇರಿದವು. ಬಳಿಕ ಪಾನಕ ಪೂಜೆ, ಮಧ್ಯಾಹ್ನ ಮಹಾಪೂಜೆ, ನಿತ್ಯನೈಮಿತ್ತಿಕ ನಿರ್ಣಯ, ಪ್ರಸಾದ ವಿತರಣೆ, ಅನ್ನದಾನಗಳು ನಡೆಯಿತು.
  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30 ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತ ಸಾಹಿಯ ಸಂಭ್ರಮ ನಡೆಯಿತು. ಸಂಜೆ ಧಾಮರ್ಿಕ ಸಭೆ ನಡೆಯಿತು. ಸಂಜೆ 5.30ಕ್ಕೆ ರಾಹುಗುಳಿಗನಿಗೆ ಬಡಿಸುವುದು, 6 ರಿಂದ ಶ್ರೀಧೂಮಾವತಿ ದೈವದ ಭಂಡಾರ ಇಳಿಯುವುದು, 7ಕ್ಕೆ ತೊಡಂಙಲ್, ರಾತ್ರಿ 7.30 ಕ್ಕೆ ಪರಿವಾರ ದೈವಗಳ ಭಂಡಾರ ಇಳಿದು ಬಳಿಕ ಕಲ್ಲಾಲಗದ ಗುಳಿಗನ ಕೋಲ, ಅನ್ನದಾನ ನಡೆಯಿತು. ರಾತ್ರಿ 10 ರಿಂದ ಕೊರಗತನಿಯ ದೈವಕೋಲ, ಕುಪ್ಪೆ ಪಂಜುಲರ್ಿ, ಕಲ್ಲುಟರ್ಿ ದೈವಗಳ ಕೋಲ ನಡೆಯಿತು.
   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries