ಕಾಂಞಂಗಾಡಿನಲ್ಲಿ ಕೈಗಾರಿಕಾ ಪ್ರಾಂಗಣ ಹಸ್ತಾಂತರ ಶೀಘ್ರ : ಸಚಿವ ಎ.ಸಿ.ಮೊದೀನ್
ಕಾಸರಗೋಡು: ಕಾಂಞಂಗಾಡಿನಲ್ಲಿ ಕಂದಾಯ ಇಲಾಖೆಯು ಒದಗಿಸಿದ 130 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣವನ್ನು ನಿಮರ್ಿಸಿ ಉದ್ಯಮಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಈ ಮೂಲಕ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ವೇಗ ದೊರಕುವಂತೆ ಮಾಡಲಾಗುವುದು ಎಂದು ಕೇರಳ ಕೈಗಾರಿಕಾ ಖಾತೆ ಸಚಿವ ಎ.ಸಿ.ಮೊದೀನ್ ತಿಳಿಸಿದರು.
ರಾಜ್ಯ ಸರಕಾರದ ದ್ವಿತೀಯ ವಾಷರ್ಿಕೋತ್ಸವ ಹಾಗೂ ಕಾಸರಗೋಡು ಜಿಲ್ಲೆ ರೂಪೀಕರಣಗೊಂಡು 34ನೇ ವರ್ಷದ ಸಂದರ್ಭದಲ್ಲಿ ಕಾಸರಗೋಡು ಕಲೆಕ್ಟರೇಟ್ನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಕಾಸರಗೋಡು ಜಿಲ್ಲೆಯು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಮೂರು ದಶಕಗಳ ಬಳಿಕವೂ ಅಗತ್ಯದ ಭೂ ಪ್ರದೇಶ ಸಹಿತ ಎಲ್ಲಾ ಸೌಕರ್ಯಗಳಿದ್ದರೂ ಜಿಲ್ಲೆಗೆ ಇನ್ನೂ ಪ್ರಗತಿಯನ್ನು ಸಾಸಲು ಸಾಧ್ಯವಾಗಲಿಲ್ಲ. ಈ ಕಾಯರ್ಾಗಾರದ ಮೂಲಕ ಅದಕ್ಕೊಂದು ಪರಿಹಾರ ಕಾಣಿಸಲು ಸಾಧ್ಯವಾಗಬಹುದು ಎಂದು ಅವರು ನುಡಿದರು.
ವಿವಿಧ ಪ್ರದೇಶಗಳನ್ನು ಸಂಪಕರ್ಿಸಲು ಹೆಚ್ಚಿನ ರಸ್ತೆಗಳು, ಸೇತುವೆಗಳನ್ನು ನಿಮರ್ಿಸಿ ಕೈಗಾರಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಮಲೆನಾಡು ಹೆದ್ದಾರಿ, ಕರಾವಳಿ ಹೆದ್ದಾರಿಗಳಲ್ಲದೇ ಜಲಸಾರಿಗೆಯನ್ನು ಸಹ ಅಭಿವೃದ್ಧಿಪಡಿಸಬೇಕು. ಕೇರಳದಲ್ಲಿ ಇದಕ್ಕಾಗಿ ಕಿಫ್ಬಿ ಮೂಲಕ 50,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು ಎಂದರು.
ಕೈಗಾರಿಕೆ ಪ್ರಗತಿಗೆ ಕಾನೂನು ತಿದ್ದುಪಡಿ: ಕಂದಾಯ ಸಚಿವ
ಗಲಭೆ, ಮುಷ್ಕರ ರಹಿತವಾದ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸಲು ಈಗಾಗಲೇ ಏಳರಷ್ಟು ಕಾನೂನು ತಿದ್ದುಪಡಿಗಳನ್ನು ತರಲಾಗಿದೆ. 30 ದಿನಗಳೊಳಗೆ ಕೈಗಾರಿಕೆಯನ್ನು ಆರಂಭಿಸಲು ಸಾಧ್ಯವಾಗುವ ರೀತಿಯಲ್ಲಿ ನೂತನ ಕಾನೂನು ಜಾರಿಗೆ ಬಂದಿದ್ದು, ಇದು ಉದ್ಯಮವನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿದ ಯೋಜನೆಗಳನ್ನು ಪೂತರ್ಿಗೊಳಿಸಲಾಗುವುದಲ್ಲದೇ ಹೊಸ ಯೋಜನೆಗಳ ಘೋಷಣೆಯನ್ನು ಮಾಡಲಾಗುವುದು ಎಂದು ಕಾಯರ್ಾಗಾರದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಈಗಾಗಲೇ ಕೋಟಿಗಟ್ಟಲೆ ರೂಪಾಯಿ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ಅಭಿವೃದ್ಧಿಯಾಗದ ವಲಯಗಳಿಗೆ ಪ್ರತ್ಯೇಕ ವಿಶೇಷ ಆದ್ಯತೆ ನೀಡಲಾಗುವುದು. ಕೈಗಾರಿಕೆಯನ್ನು ಆರಂಭಿಸಲು ಅಡ್ಡಿಯಾಗುವ ಧೋರಣೆಗಳನ್ನು ನೀಗಿಸಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರಲ್ಲಿ ಚಚರ್ಿಸಿ ಮತ್ತಷ್ಟು ಯೋಜನೆಗಳು ಲಭಿಸುವಂತೆ ಮಾಡಲಾಗುವುದು ಎಂದರು.
ಕಾಸರಗೋಡು ಸಂಸದ ಪಿ.ಕರುಣಾಕರನ್, ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಂತಾದವರು ಶುಭಹಾರೈಸಿದರು. ಕಾಸರಗೋಡಿನ ಅನಿವಾಸಿ ಸಮೂಹ ಅಭಿವೃದ್ಧಿ ಸಾಧ್ಯತೆ ಎಂಬ ವಿಷಯದಲ್ಲಿ ನೋಕರ್ಾ ಮಾಜಿ ಸಿಇಓ ಕೆ.ಟಿ.ಬಾಲಕೃಷ್ಣನ್, ಆಹಾರ ಸಂಸ್ಕರಣಾ ವಲಯದಲ್ಲಿ ಕೈಗಾರಿಕೆಗಳ ಸಾಧ್ಯತೆ ಎಂಬ ವಿಚಾರದಲ್ಲಿ ಕೇರಳ ದಿನೇಶ್ ಬೀಡಿ ಸಂಸ್ಥೆಯ ಅಧ್ಯಕ್ಷ ಸಿ.ರಾಜನ್, ಪ್ರವಾಸೋದ್ಯಮಗಳ ಸಾಧ್ಯತೆಗಳ ಕುರಿತು ಬಿಆರ್ಡಿಸಿ ಎಂಡಿ ಟಿ.ಕೆ.ಮನ್ಸೂರ್, ಉನ್ನತ ಶಿಕ್ಷಣ ವಲಯ ಎಂಬ ವಿಷಯದಲ್ಲಿ ಕೇರಳ ಕೇಂದ್ರ ವಿಶ್ವ ವಿದ್ಯಾಲಯ ಉಪಕುಲಪತಿ ಡಾ.ಪ್ರೊ.ಜಿ.ಗೋಪಕುಮಾರ್ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಸ್ವಾಗತಿಸಿ, ಜಿಲ್ಲಾ ವಾತರ್ಾಕಾರಿ ಇ.ವಿ.ಸುಗತನ್ ವಂದಿಸಿದರು.
* ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಸೂತ್ರ : ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಪ್ಯಾಕೇಜ್ಗಳ ಅನುಷ್ಠಾನ ಅಗತ್ಯ. ಅಲ್ಲದೆ ಹಲವು ಸೂತ್ರಗಳನ್ನು ರೂಪಿಸಿ ಅದರಂತೆ ಮುಂದುವರಿಯಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ಶಿಕ್ಷಣ, ಉದ್ಯೋಗ, ಕೃಷಿ, ಕೈಗಾರಿಕೆ ಅಲ್ಲದೆ ಉದ್ಯೋಗ ಸಂಬಂಧಿತ ಎಲ್ಲಾ ವಲಯಗಳನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಬೇಕು. ಜಿಲ್ಲಾ ಪ್ರಗತಿಗೆ ಜನರ ಸಹಭಾಗಿತ್ವವೂ ಅಷ್ಟೇ ಆವಶ್ಯಕವಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚೆಚ್ಚು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಲೆನಾಡು ಹೆದ್ದಾರಿಯನ್ನು ಅತಿ ಶೀಘ್ರದಲ್ಲಿ ಪೂತರ್ಿಗೊಳಿಸಬೇಕು. ಜಿಲ್ಲೆಯಲ್ಲಿ ಗಲಭೆ ಹಿಂಸಾಚಾರ ಇತ್ಯಾದಿ ನಡೆಯದಂತೆ ಗಮನಿಸಬೇಕು. ಎಲ್ಲರಿಗೂ ಭೂಮಿ ಮತ್ತು ಮನೆ ಎಂಬ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು ಎಮದು ಸಚಿವರು ಕಿವಿಮಾತಿನೊಂದಿಗೆ ಸರಕಾರದ ಕಲ್ಪನೆಯನ್ನು ಈ ಸಂದರ್ಭ ತೆರೆದಿಟ್ಟರು.
ಕಾಸರಗೋಡು: ಕಾಂಞಂಗಾಡಿನಲ್ಲಿ ಕಂದಾಯ ಇಲಾಖೆಯು ಒದಗಿಸಿದ 130 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣವನ್ನು ನಿಮರ್ಿಸಿ ಉದ್ಯಮಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಈ ಮೂಲಕ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ವೇಗ ದೊರಕುವಂತೆ ಮಾಡಲಾಗುವುದು ಎಂದು ಕೇರಳ ಕೈಗಾರಿಕಾ ಖಾತೆ ಸಚಿವ ಎ.ಸಿ.ಮೊದೀನ್ ತಿಳಿಸಿದರು.
ರಾಜ್ಯ ಸರಕಾರದ ದ್ವಿತೀಯ ವಾಷರ್ಿಕೋತ್ಸವ ಹಾಗೂ ಕಾಸರಗೋಡು ಜಿಲ್ಲೆ ರೂಪೀಕರಣಗೊಂಡು 34ನೇ ವರ್ಷದ ಸಂದರ್ಭದಲ್ಲಿ ಕಾಸರಗೋಡು ಕಲೆಕ್ಟರೇಟ್ನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಕಾಸರಗೋಡು ಜಿಲ್ಲೆಯು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಮೂರು ದಶಕಗಳ ಬಳಿಕವೂ ಅಗತ್ಯದ ಭೂ ಪ್ರದೇಶ ಸಹಿತ ಎಲ್ಲಾ ಸೌಕರ್ಯಗಳಿದ್ದರೂ ಜಿಲ್ಲೆಗೆ ಇನ್ನೂ ಪ್ರಗತಿಯನ್ನು ಸಾಸಲು ಸಾಧ್ಯವಾಗಲಿಲ್ಲ. ಈ ಕಾಯರ್ಾಗಾರದ ಮೂಲಕ ಅದಕ್ಕೊಂದು ಪರಿಹಾರ ಕಾಣಿಸಲು ಸಾಧ್ಯವಾಗಬಹುದು ಎಂದು ಅವರು ನುಡಿದರು.
ವಿವಿಧ ಪ್ರದೇಶಗಳನ್ನು ಸಂಪಕರ್ಿಸಲು ಹೆಚ್ಚಿನ ರಸ್ತೆಗಳು, ಸೇತುವೆಗಳನ್ನು ನಿಮರ್ಿಸಿ ಕೈಗಾರಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಮಲೆನಾಡು ಹೆದ್ದಾರಿ, ಕರಾವಳಿ ಹೆದ್ದಾರಿಗಳಲ್ಲದೇ ಜಲಸಾರಿಗೆಯನ್ನು ಸಹ ಅಭಿವೃದ್ಧಿಪಡಿಸಬೇಕು. ಕೇರಳದಲ್ಲಿ ಇದಕ್ಕಾಗಿ ಕಿಫ್ಬಿ ಮೂಲಕ 50,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು ಎಂದರು.
ಕೈಗಾರಿಕೆ ಪ್ರಗತಿಗೆ ಕಾನೂನು ತಿದ್ದುಪಡಿ: ಕಂದಾಯ ಸಚಿವ
ಗಲಭೆ, ಮುಷ್ಕರ ರಹಿತವಾದ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸಲು ಈಗಾಗಲೇ ಏಳರಷ್ಟು ಕಾನೂನು ತಿದ್ದುಪಡಿಗಳನ್ನು ತರಲಾಗಿದೆ. 30 ದಿನಗಳೊಳಗೆ ಕೈಗಾರಿಕೆಯನ್ನು ಆರಂಭಿಸಲು ಸಾಧ್ಯವಾಗುವ ರೀತಿಯಲ್ಲಿ ನೂತನ ಕಾನೂನು ಜಾರಿಗೆ ಬಂದಿದ್ದು, ಇದು ಉದ್ಯಮವನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿದ ಯೋಜನೆಗಳನ್ನು ಪೂತರ್ಿಗೊಳಿಸಲಾಗುವುದಲ್ಲದೇ ಹೊಸ ಯೋಜನೆಗಳ ಘೋಷಣೆಯನ್ನು ಮಾಡಲಾಗುವುದು ಎಂದು ಕಾಯರ್ಾಗಾರದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಈಗಾಗಲೇ ಕೋಟಿಗಟ್ಟಲೆ ರೂಪಾಯಿ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ಅಭಿವೃದ್ಧಿಯಾಗದ ವಲಯಗಳಿಗೆ ಪ್ರತ್ಯೇಕ ವಿಶೇಷ ಆದ್ಯತೆ ನೀಡಲಾಗುವುದು. ಕೈಗಾರಿಕೆಯನ್ನು ಆರಂಭಿಸಲು ಅಡ್ಡಿಯಾಗುವ ಧೋರಣೆಗಳನ್ನು ನೀಗಿಸಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರಲ್ಲಿ ಚಚರ್ಿಸಿ ಮತ್ತಷ್ಟು ಯೋಜನೆಗಳು ಲಭಿಸುವಂತೆ ಮಾಡಲಾಗುವುದು ಎಂದರು.
ಕಾಸರಗೋಡು ಸಂಸದ ಪಿ.ಕರುಣಾಕರನ್, ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಂತಾದವರು ಶುಭಹಾರೈಸಿದರು. ಕಾಸರಗೋಡಿನ ಅನಿವಾಸಿ ಸಮೂಹ ಅಭಿವೃದ್ಧಿ ಸಾಧ್ಯತೆ ಎಂಬ ವಿಷಯದಲ್ಲಿ ನೋಕರ್ಾ ಮಾಜಿ ಸಿಇಓ ಕೆ.ಟಿ.ಬಾಲಕೃಷ್ಣನ್, ಆಹಾರ ಸಂಸ್ಕರಣಾ ವಲಯದಲ್ಲಿ ಕೈಗಾರಿಕೆಗಳ ಸಾಧ್ಯತೆ ಎಂಬ ವಿಚಾರದಲ್ಲಿ ಕೇರಳ ದಿನೇಶ್ ಬೀಡಿ ಸಂಸ್ಥೆಯ ಅಧ್ಯಕ್ಷ ಸಿ.ರಾಜನ್, ಪ್ರವಾಸೋದ್ಯಮಗಳ ಸಾಧ್ಯತೆಗಳ ಕುರಿತು ಬಿಆರ್ಡಿಸಿ ಎಂಡಿ ಟಿ.ಕೆ.ಮನ್ಸೂರ್, ಉನ್ನತ ಶಿಕ್ಷಣ ವಲಯ ಎಂಬ ವಿಷಯದಲ್ಲಿ ಕೇರಳ ಕೇಂದ್ರ ವಿಶ್ವ ವಿದ್ಯಾಲಯ ಉಪಕುಲಪತಿ ಡಾ.ಪ್ರೊ.ಜಿ.ಗೋಪಕುಮಾರ್ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಸ್ವಾಗತಿಸಿ, ಜಿಲ್ಲಾ ವಾತರ್ಾಕಾರಿ ಇ.ವಿ.ಸುಗತನ್ ವಂದಿಸಿದರು.
* ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಸೂತ್ರ : ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಪ್ಯಾಕೇಜ್ಗಳ ಅನುಷ್ಠಾನ ಅಗತ್ಯ. ಅಲ್ಲದೆ ಹಲವು ಸೂತ್ರಗಳನ್ನು ರೂಪಿಸಿ ಅದರಂತೆ ಮುಂದುವರಿಯಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ಶಿಕ್ಷಣ, ಉದ್ಯೋಗ, ಕೃಷಿ, ಕೈಗಾರಿಕೆ ಅಲ್ಲದೆ ಉದ್ಯೋಗ ಸಂಬಂಧಿತ ಎಲ್ಲಾ ವಲಯಗಳನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಬೇಕು. ಜಿಲ್ಲಾ ಪ್ರಗತಿಗೆ ಜನರ ಸಹಭಾಗಿತ್ವವೂ ಅಷ್ಟೇ ಆವಶ್ಯಕವಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚೆಚ್ಚು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಲೆನಾಡು ಹೆದ್ದಾರಿಯನ್ನು ಅತಿ ಶೀಘ್ರದಲ್ಲಿ ಪೂತರ್ಿಗೊಳಿಸಬೇಕು. ಜಿಲ್ಲೆಯಲ್ಲಿ ಗಲಭೆ ಹಿಂಸಾಚಾರ ಇತ್ಯಾದಿ ನಡೆಯದಂತೆ ಗಮನಿಸಬೇಕು. ಎಲ್ಲರಿಗೂ ಭೂಮಿ ಮತ್ತು ಮನೆ ಎಂಬ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು ಎಮದು ಸಚಿವರು ಕಿವಿಮಾತಿನೊಂದಿಗೆ ಸರಕಾರದ ಕಲ್ಪನೆಯನ್ನು ಈ ಸಂದರ್ಭ ತೆರೆದಿಟ್ಟರು.

