HEALTH TIPS

No title

             ಪೆರ್ಲದಲ್ಲಿ  ಅಬಕಾರಿ ಇಲಾಖೆಯ ನೂತನ ಕಚೇರಿ ಉದ್ಘಾಟನೆ
     ಪೆರ್ಲ:ಅಬಕಾರಿ ಇಲಾಖೆಯ ತಪಾಸಣಾ ಕೇಂದ್ರದ ನೂತನ ಕಚೇರಿ ಪೆರ್ಲದಲ್ಲಿ ಬುಧವಾರ ಉದ್ಘಾಟನೆಗೊಂಡಿತು.
       ಪೆರ್ಲ ಬದಿಯಡ್ಕ ರಸ್ತೆಯ, ಕಾಸರಗೋಡು ಪ್ರಾದೇಶಿಕ ಸಾರಿಗೆ ಇಲಾಖೆಯ ವಾಹನ ತಪಾಸಣಾ ಕೇಂದ್ರದ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಕೃತಕ ಕಂಟೈನರ್ ಕಟ್ಟಡ (ಫೇಬ್ರಿಕೇಟೆಡ್ ಮೋಡ್ಯುಲರ್ ಕಂಟೈನರ್)ದಲ್ಲಿ ಕಾಯರ್ಾಚರಿಸಲಿರುವ ಹವಾನಿಯಂತ್ರಣ ವ್ಯವಸ್ಥೆ,ವಿದ್ಯುತ್ ಸಂಪರ್ಕ,ನೀರಾವರಿ ಸಂಪರ್ಕ ಸಹಿತ ಸುಸಜ್ಜಿತ ಏಕೀಕೃತ ವ್ಯವಸ್ಥೆ ಹೊಂದಿರುವ ಅಬಕಾರಿ ಇಲಾಖೆಯ ನೂತನ ಕಚೇರಿಯ ಉದ್ಘಾಟನೆಯನ್ನು ಅಬಕಾರಿ ಉಪ ಆಯುಕ್ತ ಪಿ.ಬಾಲಕೃಷ್ಣನ್ ನೆರವೇರಿಸಿದರು.
    ಸಹಾಯಕ ಅಬಕಾರಿ ಆಯುಕ್ತ ಎನ್.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಅಬಕಾರಿ ಸಿಬ್ಬಂದಿ ಸಂಘದ ಜಿಲ್ಲಾ ಕಾರ್ಯದಶರ್ಿ ಎಂ.ಅನಿಲ್ ಕುಮಾರ್ ಶುಭ ಹಾರೈಸಿದರು.
ಕಾಸರಗೋಡು ಅಬಕಾರಿ ವೃತ್ತ ನಿರೀಕ್ಷಕ ಎ.ಸತ್ಯನ್ ಸ್ವಾಗತಿಸಿ,ಬದಿಯಡ್ಕ ವ್ಯಾಪ್ತಿಯ ಅಬಕಾರಿ ಅಧಿಕಾರಿ ಟಿ.ರಂಜಿತ್ ಬಾಬು ವಂದಿಸಿದರು.
     ಕನರ್ಾಟಕ ಭಾಗದಿಂದ ಅಕ್ರಮ ಮದ್ಯ ಸಾಗಾಟ ತಡೆಗಟ್ಟಲು ಪೆರ್ಲದಲ್ಲಿ ಹಲವು ವರ್ಷಗಳ ಹಿಂದೆ  ಅಬಕಾರಿ ತಪಾಸಣಾ ಕೇಂದ್ರ ಆರಂಭಿಸಲಾಗಿದ್ದರೂ, ಪೆರ್ಲ ಸ್ವರ್ಗ ಕೂಡು ರಸ್ತೆಯಿಂದ ತುಸು ದೂರ  ಪೆರ್ಲ ರಸ್ತೆ ಭಾಗದಲ್ಲಿ ಖಾಸಗೀ ಕಟ್ಟಡವೊಂದರಲ್ಲಿ  ಕಾಯರ್ಾಚರಣೆ ನಡೆಸುತ್ತಿರುವುದರಿಂದ ಪುತ್ತೂರು- ಪಾಣಾಜೆ-ಸ್ವರ್ಗ ಭಾಗದಿಂದ ಬದಿಯಡ್ಕ ಕುಂಬಳೆ ಭಾಗಗಳಿಗೆ ಆಗಮಿಸುವ ವಾಹನಗಳನ್ನು ತಪಾಸಣೆ ನಡೆಸಲು ಸಾದ್ಯವಾಗುತ್ತಿರಲಿಲ್ಲ.
   ಪ್ರಸ್ತುತ ಉದ್ಘಾಟನೆಗೊಂಡಿರುವ  ಕಟ್ಟಡವನ್ನು ವರ್ಷಗಳ ಮೊದಲೇ ನಿಮರ್ಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯೊಂದಿಗಿನ ಸ್ಥಳದ ಗೊಂದಲ, ವಿದ್ಯುತ್,ನೀರಾವರಿ  ಸಂಪರ್ಕ ಇಲ್ಲದಿರುವಿಕೆ  ಮೊದಲಾದ ಕಾರಣಗಳಿಂದ ಉದ್ಘಾಟನೆ ವಿಳಂಬಗೊಂಡಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries