ಶೇಣಿ ಶಾಲಾ ಪ್ರವೇಶೋತ್ಸವ
ಪೆರ್ಲ: ಶೇಣಿ ಶ್ರೀಶಾರದಾಂಬಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ ನೂತನ ವರ್ಷದ ಪ್ರವೇಶೋತ್ಸವ ನಡೆಯಿತು.ಪ್ರವೇಶೋತ್ಸವದ ಅಂಗವಾಗಿ ಹೊಸತಾಗಿ ಸೇರ್ಪಡೆಗೊಂಡ ವಿದ್ಯಾಥರ್ಿಗಳನ್ನು ಸ್ವಾಗತಿಸಿ ಆಕರ್ಷಕ ಮೆರವಣಿಗೆ ನಡೆಯಿತು.
ರಾಧಾಕೃಷ್ಣ ನಾಯಕ್ ಜೆ.ಎಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯೆ ಪುಷ್ಪಾ ಉಚಿತ ಪುಸ್ತಕ ವಿತರಿಸಿ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬೈರ್, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್, ಫ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಪೆರ್ದನೆ, ಶಾಲಾ ಸಂಚಾಲಕಿ ಶಾರದಾ ವೈ ಉಪಸ್ಥಿತರಿದ್ದು ಶುಭಹಾರೈಸಿದರು.
ಸುಬ್ರಹ್ಮಣ್ಯ ಕಾಮತ್ ಸ್ವಾಗತಿಸಿ, ಶರಶ್ಚಂದ್ರ ಶೆಟ್ಟಿ ವಂದಿಸಿದರು. ಶ್ರೀಧರ ಕೆ. ಕಾರ್ಯಕ್ರಮ ನಿರೂಪಿಸಿದರು. ಹೊಸತಾಗಿ ಸೇರ್ಪಡೆಗೊಂಡ ವಿದ್ಯಾಥರ್ಿಗಳಿಗೆ ಪೆರ್ಲದ ಸಿಟಿ ಗೋಲ್ಡ್ ವತಿಯಿಂದ ಕೊಡಮಾಡಲ್ಪಟ್ಟ ಬ್ಯಾಗ್ ಪೌಚ್ ಹಾಗೂ ಕೆವಿಆರ್ ಕಾಸರಗೋಡು ಸಂಸ್ಥೆ ಕೊಡಮಾಡಿದ ಚಿತ್ರ ಪುಸ್ತಕಗಳನ್ನು ವಿತರಿಸಲಾಯಿತು.
ಪೆರ್ಲ: ಶೇಣಿ ಶ್ರೀಶಾರದಾಂಬಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ ನೂತನ ವರ್ಷದ ಪ್ರವೇಶೋತ್ಸವ ನಡೆಯಿತು.ಪ್ರವೇಶೋತ್ಸವದ ಅಂಗವಾಗಿ ಹೊಸತಾಗಿ ಸೇರ್ಪಡೆಗೊಂಡ ವಿದ್ಯಾಥರ್ಿಗಳನ್ನು ಸ್ವಾಗತಿಸಿ ಆಕರ್ಷಕ ಮೆರವಣಿಗೆ ನಡೆಯಿತು.
ರಾಧಾಕೃಷ್ಣ ನಾಯಕ್ ಜೆ.ಎಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯೆ ಪುಷ್ಪಾ ಉಚಿತ ಪುಸ್ತಕ ವಿತರಿಸಿ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬೈರ್, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್, ಫ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಪೆರ್ದನೆ, ಶಾಲಾ ಸಂಚಾಲಕಿ ಶಾರದಾ ವೈ ಉಪಸ್ಥಿತರಿದ್ದು ಶುಭಹಾರೈಸಿದರು.
ಸುಬ್ರಹ್ಮಣ್ಯ ಕಾಮತ್ ಸ್ವಾಗತಿಸಿ, ಶರಶ್ಚಂದ್ರ ಶೆಟ್ಟಿ ವಂದಿಸಿದರು. ಶ್ರೀಧರ ಕೆ. ಕಾರ್ಯಕ್ರಮ ನಿರೂಪಿಸಿದರು. ಹೊಸತಾಗಿ ಸೇರ್ಪಡೆಗೊಂಡ ವಿದ್ಯಾಥರ್ಿಗಳಿಗೆ ಪೆರ್ಲದ ಸಿಟಿ ಗೋಲ್ಡ್ ವತಿಯಿಂದ ಕೊಡಮಾಡಲ್ಪಟ್ಟ ಬ್ಯಾಗ್ ಪೌಚ್ ಹಾಗೂ ಕೆವಿಆರ್ ಕಾಸರಗೋಡು ಸಂಸ್ಥೆ ಕೊಡಮಾಡಿದ ಚಿತ್ರ ಪುಸ್ತಕಗಳನ್ನು ವಿತರಿಸಲಾಯಿತು.