HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಯಕ್ಷ ಬಳಗದ 27ನೇ ವರ್ಷದ ಆಷಾಢ ಮಾಸ ತಾಳಮದ್ದಳೆಗೆ ಚಾಲನೆ
     ಮಂಜೇಶ್ವರ: ಮಂಜೇಶ್ವರದ ಯಕ್ಷ ಬಳಗ ಹೊಸಂಗಡಿಯ ನೇತೃತ್ವದಲ್ಲಿ 27 ನೇ ವರ್ಷದ "ಆಷಾಢ ಮಾಸ" ಯಕ್ಷಗಾನ ಕೂಟ - 2018 ರ ಉದ್ಘಾಟನಾ ಸಮಾರಂಭವು ಕಡಂಬಾರು ಶ್ರೀ ಮಹಾವಿಷ್ಣು ಮೂತರ್ಿ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ನಡೆಯಿತು.
   ಕ್ಷೇತ್ರದ ಆಡಳಿತ ಮೊಕ್ತೇಸರ ಸೂರ್ಯ ನಾರಾಯಣ ಕಡಂಬಾರು ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕಾಂತ ಮಾಣಿಲತ್ತಾಯ ದೀಪ ಪ್ರಜ್ವಲಿಸಿ, ಉದ್ಘಾಟಿಸಿ, ಶುಭ ಹಾರೈಸಿದರು. ಯಕ್ಷ ಬಳಗ ಹೊಸಂಗಡಿಯ ಪ್ರಧಾನ ಕಾರ್ಯದಶರ್ಿ ನಾಗರಾಜ ಪದಕಣ್ಣಾಯ ಸ್ವಾಗತಿಸಿ, ಯಕ್ಷ ಬಳಗ ಹೊಸಂಗಡಿಯ ಪ್ರಧಾನ ಸಂಚಾಲಕ ಸಂಕಬೈಲ್ ಸತೀಶ್ ಅಡಪ ವಂದಿಸಿದರು. ಬಳಿಕ "ಶ್ರೀ ರಾಮ ವನಾಗಮನ" ತಾಳ ಮದ್ದಳೆ ಜರುಗಿತು.
   ಕಲಾವಿದರಾಗಿ ಹಿಮ್ಮೇಳದಲ್ಲಿ ಶಂಕರ ರೈ ಮಾಸ್ತರ್,  ಬರೆ ರಾಜ ಭಟ್, ಶುಭಾನಂದ ಶೆಟ್ಟಿ ಕೂಳೂರು, ಚಿಪ್ಪಾರು ರಾಜರಾಮ ಬಲ್ಲಾಳ್, ಮಯೂರ ನಾಯ್ಗ ಮಾಡೂರು, ಹರಿಶ್ಚಂದ್ರ ನಾಯ್ಗ ಮಾಡೂರು, ಶ್ರೀಕಾಂತ ಮಾಣಿಲತ್ತಾಯ, ರಮೇಶ್ ಶೆಟ್ಟಿ ಕುಂಜತ್ತೂರು, ಮಮ್ಮೇಳದಲ್ಲಿ ವಿಠಲ ಭಟ್ ಮೊಗಶಾಲೆ, ರಾಮಕೃಷ್ಣ ಭಟ್, ನಾಗರಾಜ ಪದಕಣ್ಣಾಯ, ಶಂಕರ ಆಚಾರ್ಯ ಕೋಳ್ಯೂರು, ಜಯರಾಮ ಭಟ್ ದೇವಸ್ಯ, ಗಣೇಶ್ ಕುಂಜತ್ತೂರು ಮೊದಲಾದವರು ಭಾಗವಹಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries