HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕನ್ನಡ ಸಾಹಿತ್ಯ ಸಿರಿ3 ಜು.23 ರಂದು
   ಬದಿಯಡ್ಕ: ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ನೇತೃತ್ವದಲ್ಲಿ ಜು. 23 ರಂದು ಸೋಮವಾರ ಅಪರಾಹ್ನ 3 ಕ್ಕೆ ಬದಿಯಡ್ಕದಲ್ಲಿ ತಿಂಗಳ ಕಾರ್ಯಕ್ರಮ ಕನ್ನಡ ಸಾಹಿತ್ಯ ಸಿರಿ 3 ಆಯೋಜಿಸಲಾಗಿದೆ.
   ಕನ್ನಡ ಸಾಹಿತ್ಯ ಸಿರಿಯ ಅಧ್ಯಕ್ಷ ಮೊಹಮ್ಮದಾಲಿ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಬಾಬು ಮಾಸ್ತರ್ ಚಂಬಲ್ತಿಮಾರ್ ಉದ್ಘಾಟಿಸುವರು. ಕನರ್ಾಟಕ ಕನ್ನಡ ಜಾಗೃತಿ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು.ನಿವೃತ್ತ ಆರೋಗ್ಯ ಇಲಾಖಾ ಸಿಬ್ಬಂದಿ ಉಡುಪಮೂಲೆ ಪ್ರಭಾಕರ ಉಪಸ್ಥಿತರಿರುವರು.
   ಕಾರ್ಯಕ್ರಮದಲ್ಲಿ ಸಾಹಿತಿ, ನಿವೃತ್ತ ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಸ್ಟ್ಯಾನಿ ಕ್ರಾಸ್ತಾ ಬೇಳ ಅವರನ್ನು ಗೌರವಿಸಲಾಗುವುದು. ಡಾ.ಹರಿಕೃಷ್ಣ ಭರಣ್ಯ ಹಾಗೂ ಪ್ರೊ.ಎ.ಶ್ರೀನಾಥ್ ಸನ್ಮಾನಿತರ ಪರಿಚಯ ನೀಡುವರು. ಈ ಸಂದರ್ಭ ರಾಮಾಯಣದ ಬಗ್ಗೆ ಪಿಲಿಂಗಲ್ಲು ಕೃಷ್ಣ ಭಟ್ ವಿಶೇಷೋಪನಯಾಸ ನೀಡುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries