HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಹಟ್ಟಿ ನಿಮರ್ಿಸಿ, ಜಾನುವಾರು ಕಟ್ಟಿ ವಿನೂತನ ಪ್ರತಿಭಟನೆ
     ಬದಿಯಡ್ಕ:  ಕಾಸರಗೋಡು ಜಿಲ್ಲೆಯನ್ನು ಅಭಿವೃದ್ಧಿಯಿಂದ ನಿರಂತರವಾಗಿ ದೂರವಿಡುತ್ತಿರುವ ಕೇರಳದ ಎಡ-ಬಲ ರಂಗಗಳು
ಚುನಾವಣೆ ಸಂದರ್ಭದಲ್ಲಿ  ಕಾಸರಗೋಡಿನ ಜನತೆಯನ್ನು ಪೊಳ್ಳು ಆಶ್ವಾಸನೆಯನ್ನು ನೀಡಿ ಹಾದಿ ತಪ್ಪಿಸಿ ಮಂಕುಗೊಳಿಸುತ್ತಿರುವುದು ಇಂದಿನವರೆಗೆ ನಡೆದು ಬಂದಿದೆ. 2013ರಲ್ಲಿ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರು ಉಕ್ಕಿನಡ್ಕದಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ಒಂದು ವರ್ಷದೊಳಗೆ ಕಾಮಗಾರಿ ಪೂತರ್ಿಗೊಳಿಸಿ
ಉದ್ಘಾಟನೆ ನಡೆಸಿ ಜನೋಪಯೋಗಕ್ಕೆ ಬಿಟ್ಟು ಕೊಡುವುದಾಗಿ ಹೇಳಿಕೆಯನ್ನು ನೀಡಿದ್ದರೂ, ಇದೀಗ ಐದು ವರ್ಷ
ಕಳೆದರೂ ಇದರ ಕಾಮಗಾರಿ ಪ್ರಾರಂಬಿಸಲೇ ಇಲ್ಲ. ಇದು ಸರಕಾರಗಳು ಕಾಸರಗೋಡು ಜಿಲ್ಲೆಗೆ ತೋರುವ ನಿರ್ಲಕ್ಷ್ಯಕ್ಕೆ ಜ್ವಲಂತ
ಉದಾಹರಣೆಯಾಗಿದೆ.
   ಜಿಲ್ಲೆಯ ಅವಗಣನೆಯನ್ನು ಪ್ರತಿಭಟಿಸಿ ಬಿಜೆಪಿ ಕಾಸರಗೋಡು ಹಾಗು ಮಂಜೇಶ್ವರ ಮಂಡಲ ಸಮಿತಿಗಳ ಜಂಟಿ ಆಶ್ರಯದಲ್ಲಿ ಜುಲೈ 5 ಗುರುವಾರ ಬೆಳಗ್ಗೆ 9 ಗಂಟೆಗೆ ಉಕ್ಕಿನಡ್ಕದಲ್ಲಿ ವಿನೂತನ ಶೈಲಿಯ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದೆ.
   ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ವಿಳಂಬ ನೀತಿಯನ್ನು ಪ್ರತಿಭಟಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹಟ್ಟಿ ನಿಮರ್ಿಸಿ ಜಾನುವಾರುಗಳನ್ನು ಕಟ್ಟಿ ವಿನೂತನ ರೀತಿಯ ಪ್ರತಿಭಟನೆ ನಡೆಸಲಾಗುವುದು.  ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖೈಯಲ್ಲಿ ಭಾಗವಹಿಸಲು  ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ ಹಾಗು ಮಂಜೇಶ್ವರ ಮಂಡಲಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು ಪತ್ರಿಕಾ ಪ್ರಕಟನೆಯಲ್ಲಿ ಕರೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries