HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಆ.15. ಪಾವಂಜೆಯಲ್ಲಿ ಸಿರಿಬಾಗಿಲು ಪ್ರತಿಷ್ಠಾನದಿಂದ `ಯಕ್ಷ ಕಾವ್ಯಾಂತರಂಗ -1'
    ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೊಡು ಸಂಸ್ಥೆಯು `ಯಕ್ಷ ಕಾವ್ಯಾಂತರಂಗ -1'ಎನ್ನುವ ವಿನೂತನ ಕಾರ್ಯಕ್ರಮವನ್ನು ಆ. 15ನೇ ಬುಧವಾರ ಅಪರಾಹ್ನ 2ರಿಂದ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶಾರದ್ವತ ಯಜ್ಞಾಂಗಣದಲ್ಲಿ   ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಸಹಕಾರದೊಂದಿಗೆ ನಡೆಸಲಿದೆ. ಯಕ್ಷಗಾನ ಕವಿ ಕಾವ್ಯ ಪರಿಚಯದೊಂದಿಗೆ ನಡೆಯುವ ಕಾರ್ತಕ್ರಮವನ್ನು ಹಿರಿಯ ಪ್ರಸಂಗಕರ್ತ ಅರ್ಥಧಾರಿ ಶ್ರೀಧರ ಡಿ.ಎಸ್. ನಿದರ್ೇಶಿಸಲಿದ್ದಾರೆ.
    ತೆಂಕುತಿಟ್ಟಿನ ಹಿರಿಯ ಭಾಗವತ ಅಗರಿ ರಘುರಾಮ ಭಾಗವತರು ಉದ್ಘಾಟಿಸಲಿದ್ದು ವೇದಬ್ರಹ್ಮ  ಕೆ.ನಿತ್ಯಾನಂದ ವೇದ ವಿಜ್ಞಾನ ಮಂದಿರ ಚಿಕ್ಕಮಗಳೂರು, ಡಾ.ಯಾಜಿ.ಹೆಚ್.ನಿರಂಜನ ಭಟ್  ಧರ್ಮದಶರ್ಿಗಳು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇವರು ಉಪಸ್ಥಿತರಿರುವರು.
   ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ  ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಹರೈನ್ ಯಕ್ಷಗಾನ ತಂಡದ ಸಲಹೆಗಾರ ರಮೇಶ್ ಮಂಜೇಶ್ವರ, ಕಲಾಪೋಷಕ ಯಾದವ ಕೋಟ್ಯಾನ್ ಪೆಮರ್ುದೆ, ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಅಧ್ಯಕ್ಷ ಶಶೀಂದ್ರ ಕುಮಾರ್, ಕಲಾ ಪೋಷಕ ರಮೇಶ ಟಿ.ಎನ್., ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಮುಖ್ಯ ಅತಿಥಿಗಳಾಗಿ್ಯುಪಸ್ಥಿತರಿರುವರು.
    ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡುವರು.  ಮಹೇಶ್ ಸುಳ್ಯ ಉಪಸ್ಥಿತರಿರುವರು. ಅವಲೋಕನ ಕಾರರಾಗಿ ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಹಿರಿಯ ಪ್ರಸಂಗಕರ್ತ ಭಾಗವತ ಬೊಟ್ಟಿಗೆರೆ ಪುರುಷೋತ್ತಮ ಪೂಂಜ, ಉಪನ್ಯಾಸಕ ಹವ್ಯಾಸಿ ಭಾಗವತ  ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ.
   ಕಾರ್ಯಕ್ರಮದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಲಿಪ ಪ್ರಸಾದ ಭಟ್, ರವಿಚಂದ್ರ ಕನ್ನಡಿಕಟ್ಟೆ , ಹಿಮ್ಮೇಳ ವಾದಕರಾಗಿ ಅಡೂರು ಗಣೇಶರಾವ್, ಪಿ.ಕೆ.ಜಗನ್ನಿವಾಸ ರಾವ್ ಪುತ್ತೂರು, ಚಕ್ರತಾಳದಲ್ಲಿ ಮುರಾರಿ ಭಟ್ ಪಂಜಿಗದ್ದೆ ಭಾಗವಹಿಸುವರು ಎಂದು ಸಿರುಬಾಗಿಲಿ ವೆಂಕಪ್ಪಯ್ಯ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries