HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ಸಮನ್ವಿತಾ ಗಣೇಶ್ಗೆ `ದೇಶಪ್ರೇಮ ಪ್ರಶಸ್ತಿ' ಪ್ರದಾನ
    ಬದಿಯಡ್ಕ: 72ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ವಾತಂತ್ರ್ಯೋತ್ಸವ ದೇಶಪ್ರೇಮ-2018, ದೇಶ ಪ್ರೇಮದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಮಂಗಳೂರಿನ ಬಾಳಂಭಟ್ ಹಾಲ್ನಲ್ಲಿ ಆಯೋಜಿಸಲಾದ  ಕವನ ವಾಚನ-ಸ್ವಾತಂತ್ರ್ಯೋತ್ಸವ-ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿಯಲ್ಲಿ ಗಡಿನಾಡು ಕಾಸರಗೋಡಿನ ಬಹುಮುಖ ಪ್ರತಿಭೆ ಕು.ಸಮನ್ವಿತಾ ಗಣೇಶ್ ಅಣಂಗೂರು ಅವರಿಗೆ ದೇಶಪ್ರೇಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
   ಮಾಜಿ ಯೋಧ, ನಟ  ತಾರಾನಾಥ್ ಬೋಳಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧರ್ಮದಶರ್ಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಂ.ಜಗದೀಶ್ ಶೆಟ್ಟಿ, ಕೇಶವ ಭಟ್, ಪ್ರಣೀತ್ ರಾಜ್ ಹಾಗೂ ಪ್ರಿಹಾಲಿ ಹರೀಶ್ ಅವರಿಗೂ ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್, ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿ' ಕಾನ್ಹಾ, ಬೆಳಕು ಸಂಸ್ಥೆಯ ಸ್ಥಾಪಕ ಅಣ್ಣಪ್ಪ ಮೇಟಿ ಗೌಡ, ಸುಧಾ ನಾಗೇಶ್, ಸುರೇಖಾ ಯಾದವ್, ಹರೀಶ್ ಸುಲಾಯ ಒಡ್ಡಂಬೆಟ್ಟು, ಅಪ್ಪಯ್ಯ ಯಾದವ್, ಬದ್ರುದ್ದೀನ್ ಕುಲೂರು, ಜಯಲಕ್ಷ್ಮೀ ಮಡಿಕೇರಿ, ಶ್ವೇತಾ ನಿಹಾಲ್ ಜೈನ್, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಗಣೇಶ್ ಪ್ರಸಾದ್ ಪಾಂಡೇಲು, ಡಾ.ಸುರೇಶ್ ನೆಗಳಗುಳಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries