HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಸಮಾಜ ದ್ರೋಹಿಗಳು ನಾಡಿಗೆ ಆಪತ್ತು: ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಹಾಗೂ ಶಾಸಕ ಶಂಶೀರ್
    ಉಪ್ಪಳ: ಸಮಾಜ ದ್ರೋಹಿಗಳಿಂದ ಕೊಲೆಗೀಡಾದ ಅಬೂಬಕ್ಕರ್ ಸಿದ್ದೀಖ್ ನನ್ನು ಕೊಲೆಗೈದವರ ಪೈಕಿ ಇಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ಕೊಲೆಗೆ ಗೂಢಾಲೋಚನೆ ನಡೆಸಿದವರನ್ನು ಶೀಘ್ರ ಬಂಧಿಸಬೇಕು.ಉಪ್ಪಳ ಸೋಂಕಾಲು ಪ್ರದೇಶ ಇದೀಗ ಮಾಫಿಯಾ ತಂಡಗಳ ಕೈಯಲ್ಲಿದೆ. ಡಿವೈಎಫ್ಐ ಇಂತಹ ಸ್ಥಳಗಳಲ್ಲಿ ಧ್ವನಿ ಎತ್ತಿ ಇದರ ವಿರುದ್ದ ಹೋರಾಟವನ್ನು ನಡೆಸಲಿವೆ ಎಂದು ಡಿವೈಎಫ್ಐ ಕೇರಳ ರಾಜ್ಯಾಧ್ಯಕ್ಷ ಹಾಗೂ ತಲಶ್ಯೇರಿ ಶಾಸಕ ಶಂಶೀರ್ ಹೇಳಿದರು.
   ಅವರು ಗುರುವಾರ ಇತ್ತೀಚೆಗೆ ಬರ್ಬರವಾಗಿ ಕೊಲೆಗೈಯಲ್ಪಟ್ಟ ಉಪ್ಪಳ ಸಮೀಪದ ಸೋಂಕಾಲಿನ ಅಬೂಬಕ್ಕರ್ ಸಿದ್ದೀಖ್ ರವರ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
  ಈವರೆಗಿನ ಪೊಲೀಸ್ ಕಾಯರ್ಾಚರಣೆ ತೃಪ್ತಿ ತಂದಿದೆ. ಉಪ್ಪಳ, ಸೋಂಕಾಲು ಪ್ರದೇಶದಲ್ಲಿ ನಿರಂತರ ಸಂಘರ್ಷ ನಡೆಯುತ್ತಿದೆ. ಇಲ್ಲಿಯ ಪ್ರಧಾನ ರಾಜಕೀಯ ಪಕ್ಷವಾದ ಮುಸ್ಲಿಂಲೀಗ್ ಇಂತಹ ಸಂಘರ್ಷ ನಡೆಸುತ್ತಿರುವವರನ್ನು ಬೆಂಬಲಿಸುವ ನೀತಿಯನ್ನು ಅನುಸರಿಸುತ್ತಿದೆ. ಇದು ಮುಸ್ಲಿಂಲೀಗಿಗೆ ಭೂಷಣವೇ ಎಂದು ಅವರೇ ಯೋಚಸಬೇಕು ಎಂದು ಶಂಶೀರ್ ತಿಳಿಸಿದರು. ಸಿದ್ದೀಖ್ನ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಡಿವೈಎಫ್ಐ ಕ್ಯಾಂಪೈನ್ಗಳನ್ನು ನಡೆಸಲಿವೆ. ಜೊತೆಗೆ ಮಾದಕ ಡ್ರಗ್ಸ್ ಮಾಫಿಯಾಗಳ ವಿರುದ್ದವೂ ಡಿವೈಎಫ್ಐ ಧ್ವನಿ ಎತ್ತಲಿದೆ ಎಂದು ಹೇಳಿದರು. ಈ ಸಂದರ್ಭ ಸ್ಥಳೀಯ ಹಲವು ನೇತಾರರು ಜೊತೆಗಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries