HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯ ಅಗತ್ಯ- ರಾಧಾಕೃಷ್ಣ ಉಳಿಯತ್ತಡ್ಕ
   ಮುಳ್ಳೇರಿಯ: ಪ್ರತಿಯೊಬ್ಬ ವಿದ್ಯಾಥರ್ಿಯಲ್ಲೂ ಪ್ರತಿಭೆ ಇರುತ್ತದೆ. ಅದರ ಪ್ರಕಟಣೆಗಾಗಿ ಸೂಕ್ತ ವೇದಿಕೆಯ ಅಗತ್ಯವಿದೆ. ಸಾಹಿತ್ಯ, ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕೆ ಈ ವೇದಿಕೆಗಳು ಸಹಕಾರಿಯಾಗಬಲ್ಲವು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಈ ವೇದಿಕೆಗಳು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಬೋವಿಕ್ಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿ ಸಾಹಿತ್ಯ ವೇದಿಕೆಯಾದ 'ಚಿಣ್ಣರ ಲೋಕ' ಯಶಸ್ವಿಯಾಗಲಿ ಎಂದು ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಹೇಳಿದರು.
   ಅವರು ಬೋವಿಕ್ಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳ ಸಾಹಿತ್ಯ ವೇದಿಕೆಯಾದ 'ಚಿಣ್ಣರ ಲೋಕ'ದ ವಾಷರ್ಿಕ ಚಟುವಟಿಕೆಗಳನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕಿ ಸೋಫಿಯಾ ಟೀಚರ್ ಅವರು ವಹಿಸಿದ್ದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕ ಉಣ್ಣಿಕೃಷ್ಣನ್ ಮಾಸ್ಟರ್ ಶುಭಾಶಂಸನೆಗೈದರು. ಅಧ್ಯಾಪಕರಾದ ಸುಭಾಶ್ಚಂದ್ರ ಯಂ.ಕೆ., ಪ್ರದೀಪ್ ಕುಮಾರ್, ಲಲಿತ. ಎ, ಸಹನಾ. ಕೆ, ಪ್ರಜಿತಾ, ಸಂಧ್ಯಾ, ಸುಷ್ಮಾ ಮೊದಲಾದವರು ಉಪಸ್ಥಿತರಿದ್ದರು.
   ವಿದ್ಯಾಥರ್ಿಗಳಾದ ಶರೋನ್ ಡಿ' ಸೋಜಾ ಸ್ವಾಗತಿಸಿ, ಮುರಳಿ ಮಾಧವ ಭಟ್ ವಂದಿಸಿದರು. ಲೋಹಿತ್ ಕಾರ್ಯಕ್ರಮ ನಿರೂಪಿಸಿದರು. ಏಳನೇ ತರಗತಿಯ ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries