HEALTH TIPS

No title

                   ಸೈನಿಕರ ತ್ಯಾಗದ ಬಗ್ಗೆ ದೇಶವು ಹೆಮ್ಮೆ ಪಡುತ್ತದೆ: 'ಪರಾಕ್ರಮ ಪರ್ವ' ದಲ್ಲಿ ಪ್ರಧಾನಿ ಮೋದಿ ಸಂದೇಶ
    ಜೋಧ್ ಪುರ: ತಾಯ್ನಾಡಿನ ಸುರಕ್ಷತೆಗಾಗಿ ಸದಾ ಕಂಕಣಬದ್ದರಾಗಿರುವ ಧೈರ್ಯಶಾಲಿ ಮಿಲಿಟರಿ ಶಕ್ತಿಯ ಬಗ್ಗೆ ರಾಷ್ಟ್ರವು ಹೆಮ್ಮೆ ಪಡುತ್ತದೆ ಎಂದು ಶುಕ್ರವಾರ  ಜೋಧ್ ಪುರದ ಕೋನಾಕರ್್ ಯುದ್ಧ ಸ್ಮಾರಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಆಹ್ವಾನಿತರ ಪುಸ್ತಕ (ವಿಸಿಟಸರ್್ ಬುಕ್) ದಲ್ಲಿ ಬರೆದಿದ್ದಾರೆ.
   ಶುಕ್ರವಾರ ಮುಂಜಾನೆ ಜೋಧ್ ಪುರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಮೂರು ಸೇನೆಗಳ ಪ್ರಮುಖರು ಗೌರವ ರಕ್ಷೆ ನೀಡಿದ್ದರು. ಬಳಿಕ ಅವರು  ಪಾಕಿಸ್ತಾನ ಆಕ್ರಮಿತ ಕಾಶ್ಮೀರದದಲ್ಲಿ ಭಾರತೀಯ ಪಡೆಗಳು ನಡೆಸಿದ್ದ ಸಜರ್ಿಕಲ್ ದಾಳಿಯ ದ್ವಿತೀಯ ವಾಷರ್ಿಕೋತ್ಸವದ ಅಂಗವಾಗಿ ನಡೆಯುವ ಮೂರು ದಿನಗಳ ಸೇನಾ ಪ್ರದರ್ಶನ "ಪರಾಕ್ರಮ ಪರ್ವ"ಕ್ಕೆ ಚಾಲನೆ ನೀಡಿದರು.
   ಗುಜರಾತಿ ಭಾಷೆಯಲ್ಲಿ ಬರೆಯಲಾದ ಸಂದೇಶದಲ್ಲಿ ಮೋದಿ ಉತ್ಕೃಷ್ಠ ತ್ಯಾಗವನ್ನು ಪ್ರದಶರ್ಿಸುವ ಮೂಲಕ ಪ್ರತಿ ಪೀಳಿಗೆಗೆ ಸ್ಪೂತರ್ಿಯ ಸಂಕೇತವನ್ನು ನೀಡುವ ಕೆಚ್ಚೆದೆಯ ಹೃದಯಗಳಿಗೆ ನನ್ನ ನಮನಗಳು  ಎಂದು ಬರೆದಿದ್ದಾರೆ.
    ಕೊನಾಕರ್್ ಕಾಪ್ಸರ್್ ಆಯೋಜಿಸಿದ್ದ ಮೂರು ದಿನಗಳ ಕಾರ್ಯಕ್ರಮದಲ್ಲಿ  ಭಾರತೀಯ ಸೇನೆಯ ಶಕ್ತಿಯನ್ನು ಪ್ರದಶರ್ಿಸುವ ಉದ್ದೇಶ, ರಾಷ್ಟ್ರ ನಿಮರ್ಾಣದಲ್ಲಿ ಇದರ ಕೊಡುಗೆ ಕುರಿತಂತೆ ಪ್ರದರ್ಶನವಿರಲಿದೆ. "ಪರಾಕ್ರಮ ಪರ್ವ" ಹೆಸರಿನ ಈ ಕಾರ್ಯಕ್ರಮ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries