ಕಣ್ಣೂರು ವಿಮಾನ ನಿಲ್ದಾಣ: 11 ಅಂತಾರಾಷ್ಟ್ರೀಯ, 6 ದೇಶೀಯ ವಿಮಾನ ಸಂಸ್ಥೆ ಆಸಕ್ತಿ
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಸೇವೆಯೊಂದಿಗೆ ಡಿಸೆಂಬರ್ ತಿಂಗಳಲ್ಲಿ ಉದ್ಘಾಟಿಸಲು ಸಿದ್ಧತೆ ನಡೆಸಲಾಗುತ್ತಿರುವ ಮಧ್ಯೆ ಈಗಾಗಲೇ 11 ಅಂತಾರಾಷ್ಟ್ರೀಯ ವಿಮಾನ ಕಂಪನಿಗಳು ಹಾಗೂ 6 ದೇಶೀಯ ವಿಮಾನ ಕಂಪನಿಗಳು ಕಣ್ಣೂರಿನಿಂದ ಸೇವೆ ಆರಂಭಿಸಲು ಆಸಕ್ತಿ ತೋರಿಸಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ದಿಲ್ಲಿ ಹಾಗೂ ತಿರುವನಂತಪುರದಲ್ಲಿ ವಿಮಾನ ಕಂಪನಿಗಳ ಜೊತೆ ಈ ಬಗ್ಗೆ ಸಭೆ ನಡೆದಿತ್ತು. ಈ ಬಾರಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸಭೆ ನಡೆಯಲಿದೆ. ಈ ಮೂಲಕ ಕಂಪನಿಗಳಿಗೆ ವಿಮಾನ ನಿಲ್ದಾಣವನ್ನು ನೇರವಾಗಿ ಕಾಣುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸೇವೆ ಆರಂಭಿಸಲು ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ, ಗೋ ಏರ್ಗಳಲ್ಲದೇ ಅಗ್ರ ಶ್ರೇಣಿಯಲ್ಲಿರುವ ಹತ್ತು ವಿಮಾನ ಕಂಪನಿಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.
ಕೇಂದ್ರ ಸರಕಾರದ ಅನುಮತಿ ಲಭಿಸದ ಕಾರಣ ವಿದೇಶ ಕಂಪನಿಗಳ ಸೇವೆಗೆ ಒಡಂಬಡಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಭಾರತದ ಕಂಪನಿಗಳ ವಿದೇಶ ಸವರ್ಿಸ್ ನಡೆಸುವುದರ ಆಧಾರದಲ್ಲಿ ಸಭೆ ಕರೆಯಲಾಗಿದೆ.
ಉಡಾನ್ ಯೋಜನೆಯಲ್ಲಿ ಮೊದಲ ಹಂತದಲ್ಲಿ 12 ದೇಶೀಯ ರೂಟ್ಗಳಲ್ಲಾಗಿ 26 ವಿಮಾನಗಳು ಸೇವೆ ಆರಂಭಿಸುವುದಕ್ಕೆ ಒಡಬಂಡಿಕೆಗೆ ಸಹಿ ಹಾಕಲಿವೆ. ಆದರೆ ಲ್ಯಾಂಡಿಂಗ್ ಶುಲ್ಕ ನೀಡಬೇಕಾದ ಉಡಾನ್ ಯೋಜನೆಗೆ ಕೇಂದ್ರದೊಂದಿಗೆ ಒಡಂಬಡಿಕೆ ಪಾಲಿಸಿಕೊಳ್ಳಬೇಕಾಗಿದೆ.
ಕೇಂದ್ರ ವಿಮಾನಯಾನ ಸಚಿವಾಲಯ, ಏರ್ಪೋಟರ್್ ಆಥಾರಿಟಿ ಆಫ್ ಇಂಡಿಯಾ, ರಾಜ್ಯ ಸರಕಾರ ಮಾಡಿಕೊಂಡ ಒಪ್ಪಂದ ಪ್ರಕಾರ ಇಂಡಿಗೋ ಪ್ರತಿದಿನ ಹುಬ್ಬಳ್ಳಿ, ದಿಲ್ಲಿ, ಗೋವಾ, ಕೊಚ್ಚಿ, ತಿರುವನಂತಪುರಗಳಿಗೆ ಹಾಗೂ ವಾಪಸ್ ಅದೇ ಮಾರ್ಗವಾಗಿ ಕಣ್ಣೂರಿಗೆ ಸವರ್ಿಸ್ ನಡೆಸಲಿವೆ.
ಇದಕ್ಕಾಗಿ ಕೇಂದ್ರ, ರಾಜ್ಯ ಸರಕಾರಗಳು ವಯಾಬಿಲಿಟಿ ಗ್ಯಾಪ್ ಫಂಡಿಂಗ್(ವಿಜಿಎಫ್) ಜಾರಿಗೊಳಿಸುವುದಕ್ಕೆ ವಿಮಾನ ಕಂಪನಿಗಳು ಆಗ್ರಹಿಸಿದೆ. ವಿಜಿಎಫ್ನ ಶೇ.20ರಷ್ಟು ರಾಜ್ಯ ಸರಕಾರ ಹಾಗೂ ಉಳಿದ ಭಾಗವನ್ನು ಕೇಂದ್ರ ಸರಕಾರ ವಹಿಸಬೇಕು. ವರ್ಷದಲ್ಲಿ ಶೇ.48.94 ಕೋಟಿ ರೂ. ಕಣ್ಣೂರು ವಿಮಾನ ನಿಲ್ದಾಣದ ಸವರ್ಿಸ್ಗಳಿಗಾಗಿ ವಿಜಿಎಫ್ ನೀಡಬೇಕಾಗಿದೆ.
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಸೇವೆಯೊಂದಿಗೆ ಡಿಸೆಂಬರ್ ತಿಂಗಳಲ್ಲಿ ಉದ್ಘಾಟಿಸಲು ಸಿದ್ಧತೆ ನಡೆಸಲಾಗುತ್ತಿರುವ ಮಧ್ಯೆ ಈಗಾಗಲೇ 11 ಅಂತಾರಾಷ್ಟ್ರೀಯ ವಿಮಾನ ಕಂಪನಿಗಳು ಹಾಗೂ 6 ದೇಶೀಯ ವಿಮಾನ ಕಂಪನಿಗಳು ಕಣ್ಣೂರಿನಿಂದ ಸೇವೆ ಆರಂಭಿಸಲು ಆಸಕ್ತಿ ತೋರಿಸಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ದಿಲ್ಲಿ ಹಾಗೂ ತಿರುವನಂತಪುರದಲ್ಲಿ ವಿಮಾನ ಕಂಪನಿಗಳ ಜೊತೆ ಈ ಬಗ್ಗೆ ಸಭೆ ನಡೆದಿತ್ತು. ಈ ಬಾರಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸಭೆ ನಡೆಯಲಿದೆ. ಈ ಮೂಲಕ ಕಂಪನಿಗಳಿಗೆ ವಿಮಾನ ನಿಲ್ದಾಣವನ್ನು ನೇರವಾಗಿ ಕಾಣುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸೇವೆ ಆರಂಭಿಸಲು ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ, ಗೋ ಏರ್ಗಳಲ್ಲದೇ ಅಗ್ರ ಶ್ರೇಣಿಯಲ್ಲಿರುವ ಹತ್ತು ವಿಮಾನ ಕಂಪನಿಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.
ಕೇಂದ್ರ ಸರಕಾರದ ಅನುಮತಿ ಲಭಿಸದ ಕಾರಣ ವಿದೇಶ ಕಂಪನಿಗಳ ಸೇವೆಗೆ ಒಡಂಬಡಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಭಾರತದ ಕಂಪನಿಗಳ ವಿದೇಶ ಸವರ್ಿಸ್ ನಡೆಸುವುದರ ಆಧಾರದಲ್ಲಿ ಸಭೆ ಕರೆಯಲಾಗಿದೆ.
ಉಡಾನ್ ಯೋಜನೆಯಲ್ಲಿ ಮೊದಲ ಹಂತದಲ್ಲಿ 12 ದೇಶೀಯ ರೂಟ್ಗಳಲ್ಲಾಗಿ 26 ವಿಮಾನಗಳು ಸೇವೆ ಆರಂಭಿಸುವುದಕ್ಕೆ ಒಡಬಂಡಿಕೆಗೆ ಸಹಿ ಹಾಕಲಿವೆ. ಆದರೆ ಲ್ಯಾಂಡಿಂಗ್ ಶುಲ್ಕ ನೀಡಬೇಕಾದ ಉಡಾನ್ ಯೋಜನೆಗೆ ಕೇಂದ್ರದೊಂದಿಗೆ ಒಡಂಬಡಿಕೆ ಪಾಲಿಸಿಕೊಳ್ಳಬೇಕಾಗಿದೆ.
ಕೇಂದ್ರ ವಿಮಾನಯಾನ ಸಚಿವಾಲಯ, ಏರ್ಪೋಟರ್್ ಆಥಾರಿಟಿ ಆಫ್ ಇಂಡಿಯಾ, ರಾಜ್ಯ ಸರಕಾರ ಮಾಡಿಕೊಂಡ ಒಪ್ಪಂದ ಪ್ರಕಾರ ಇಂಡಿಗೋ ಪ್ರತಿದಿನ ಹುಬ್ಬಳ್ಳಿ, ದಿಲ್ಲಿ, ಗೋವಾ, ಕೊಚ್ಚಿ, ತಿರುವನಂತಪುರಗಳಿಗೆ ಹಾಗೂ ವಾಪಸ್ ಅದೇ ಮಾರ್ಗವಾಗಿ ಕಣ್ಣೂರಿಗೆ ಸವರ್ಿಸ್ ನಡೆಸಲಿವೆ.
ಇದಕ್ಕಾಗಿ ಕೇಂದ್ರ, ರಾಜ್ಯ ಸರಕಾರಗಳು ವಯಾಬಿಲಿಟಿ ಗ್ಯಾಪ್ ಫಂಡಿಂಗ್(ವಿಜಿಎಫ್) ಜಾರಿಗೊಳಿಸುವುದಕ್ಕೆ ವಿಮಾನ ಕಂಪನಿಗಳು ಆಗ್ರಹಿಸಿದೆ. ವಿಜಿಎಫ್ನ ಶೇ.20ರಷ್ಟು ರಾಜ್ಯ ಸರಕಾರ ಹಾಗೂ ಉಳಿದ ಭಾಗವನ್ನು ಕೇಂದ್ರ ಸರಕಾರ ವಹಿಸಬೇಕು. ವರ್ಷದಲ್ಲಿ ಶೇ.48.94 ಕೋಟಿ ರೂ. ಕಣ್ಣೂರು ವಿಮಾನ ನಿಲ್ದಾಣದ ಸವರ್ಿಸ್ಗಳಿಗಾಗಿ ವಿಜಿಎಫ್ ನೀಡಬೇಕಾಗಿದೆ.





