HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಅ.17 ಕೋಳ್ಯೂರಿನಲ್ಲಿ  ಮಾಂಬಾಡಿ ಸುಬ್ರಹ್ಮಣ್ಯ ಭಟ್ ರಿಗೆ ಸನ್ಮಾನ
     ಮಂಜೇಶ್ವರ: ಕೋಳ್ಯೂರಿನ ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ವತಿಯಿಂದ ವಾಷರ್ಿಕ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಲಾದ "ಯಕ್ಷಗಾನ ನವಾಹ - 2018" ಅ.9 ರಂದು ಮಂಗಳವಾರ ಆರಂಭಗೊಂಡಿದ್ದು ಅ. 17ನೇ ಬುಧವಾರದವರೆಗೆ ಶ್ರೀ ಶಂಕರನಾರಾಯಣ ದೇವಸ್ಥಾನ ಕೋಳ್ಯೂರಿನಲ್ಲಿ ಜರಗಲಿದೆ. ಅ.17ರಂದು ಸಂಜೆ 3ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ದಲ್ಲಿ ತೆಂಕುತಿಟ್ಟಿನ ಹಿರಿಯ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಗಣ್ಯರ ಸಮಕ್ಷಮ ಅಭಿನಂದಿಸಿ ಸನ್ಮಾನಿಸಲಾಗುವುದು.
   ಸಮಾರಂಭದಲ್ಲಿ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳು ಅಭಿನಂದನಾ ಭಾಷಣಗೈಯ್ಯುವರು. ಸರೋಜಿನಿ ಮಧುಸೂದನ್ ಕುಶೆ ಪದವಿ ಪೂರ್ವ ಕಾಲೇಜು ಮಂಗಳೂರಿನ ಪ್ರಾಂಶುಪಾಲ ಕೆ. ಕೃಷ್ಣ ಉಪಾಧ್ಯಾಯ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಅರಸು ಮಂಜಿಷ್ಣಾರ್ ಕ್ಷೇತ್ರ ಉದ್ಯಾವರ ಮಾಡದ ರಾಜ ಬೆಳ್ಚಪ್ಪಾಡ, ಹವ್ಯಾಸಿ ಪತ್ರಕರ್ತ ಯೋಗೀಶ ರಾವ್ ಚಿಗುರುಪಾದೆ, ಕಾತರ್ಿಕ್ ಎಂಟರ್ ಪ್ರೈಸಸ್ ಮಜೀರ್ ಪಳ್ಳ ಸುಂಕದಕಟ್ಟೆ ಸಂಸ್ಥೆಯ ಮಾಲಕ ಪ್ರಕಾಶ ಪೊಯ್ಯೆತ್ತಬೈಲ್, ಶಂಕರ ಭಟ್ ಬಡಾಜೆ, ನಿವೃತ್ತ ಗ್ರಾಮಾಧಿಕಾರಿ ಸಿ. ನಾರಾಯಣ, ಶಂಕರನಾರಾಯಣ ದೇವಸ್ಥಾನ ಕೋಳ್ಯೂರು ಕ್ಷೇತ್ರದ ಆಡಳಿತ ಮೊಕ್ತೇಸರ ವೇದಮೂತರ್ಿ ರಾಜೇಶ್ ತಾಳಿತ್ತಾಯ ಹೊಸಮನೆ, ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಉಮೇಶ, ಅರ್ಚಕ ರವಿಶಂಕರ ಹೊಳ್ಳ ಉಪಸ್ಥಿತರಿರುವರು.
   ಸಂಜೆ 4ರಿಂದ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ 'ರಾವಣೋದ್ಭವ - ಕ್ಷತ್ರಿಯ ಸಂಹಾರ" ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿ, ಸತ್ಯ ನಾರಾಯಣ ಪುಣಿಚಿತ್ತಾಯ ಪೆರ್ಲ, ಪ್ರಶಾಂತ ವಗೆನಾಡು, ರೋಹಿತ್ ಉಚ್ಚಿಲ ಭಾಗವಸಿಸಲಿದ್ದು,  ಮುಮ್ಮೇಳದಲ್ಲಿ ಕೃಷ್ಣ ಮೂಲ್ಯ ಕೈರಂಗಳ, ರಾಧಾಕೃಷ್ಣ ನಾವಡ ಮಧೂರು, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ರಮೇಶ ಶೆಟ್ಟಿ ಬಾಯಾರು, ಅಂಬಾ ಪ್ರಸಾದ ಪಾತಾಳ, ಮಹೇಶ್ ಮಣಿಯಾಣಿ ದೊಡ್ಡ ತೋಟ, ಪುಷ್ಪರಾಜ್ ಕುಕ್ಕಾಜೆ, ಶಶಿಧರ ಕುಲಾಲ್ ಕನ್ಯಾನ, ಪದ್ಮನಾಭ ಉಪಾಧ್ಯಾಯ, ಜಗದೀಶ ಬೋಳಂತೂರು, ಸಂದೀಪ್ ತೋಟ, ಕಿಶೋರ್ ಕೊಮ್ಮೆ ಭಾಗವಹಿಸುವರು.
      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries