HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   24ರಂದು  ತೆರಿಗೆ ಕಚೇರಿಗೆ ಜಾಥಾ ಹಾಗೂ ಧರಣಿ
   ಕಾಸರಗೋಡು: ಪಲ್ಸರ್್ ಎಗ್ರೋಟೆಕ್ ಕಾಪರ್ೋರೇಶನ್ ಲಿಮಿಟೆಡ್(ಪಿಎಸಿಎಲ್) ಫೀಲ್ಡ್ ವರ್ಕರ್ಸ್ ಯೂನಿಯನ್(ಸಿಐಟಿಯು) ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಸರಗೋಡು ಆದಾಯ ತೆರಿಗೆ ಕಚೇರಿಗೆ ಜಾಥಾ ಹಾಗೂ ಧರಣಿ ನಡೆಯಲಿದೆ ಎಂದು ಪಿಎಸಿಎಲ್ ಫೀಲ್ಡ್ ವರ್ಕರ್ಸ್ ಯೂನಿಯನ್ ರಾಜ್ಯ ಮುಷ್ಕರ ಸಮಿತಿ ಸಂಚಾಲಕ ಕೆ.ಅಶೋಕನ್ ಶನಿವಾರ ಪ್ರೆಸ್ಕ್ಲಬ್ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
     ಸುಪ್ರೀಂಕೋಟರ್್ 2016ರಲ್ಲಿ ನೀಡಿದ ತೀಪರ್ಿನಂತೆ 354 ಲಕ್ಷದಷ್ಟು  ಪಿಎಸಿಎಲ್ ಹೂಡಿಕೆದಾರರಿಗೆ ಲಾಭಾಂಶವೂ ಶೀಘ್ರ ವಿತರಿಸುವಂತೆಯೂ, ಸುಮಾರು 53ಲಕ್ಷದಷ್ಟು ಫೀಲ್ಡ್ ವರ್ಕರ್ಸ್ಗಳಿಗೆ ಲಭಿಸಬೇಕಾದ ಕಮೀಷನ್ ಹಾಗೂ ಅವರವರ ಉದ್ಯೋಗವನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಜಾಥಾ ಹಾಗೂ ಧರಣಿ ನಡೆಯುವುದು.
     ಪಿಎಸಿಎಲ್ ನಿಕ್ಷೇಪ ಬಗ್ಗೆ  2000ದಲ್ಲಿ  ಕೇಂದ್ರ ಸಂಸ್ಥೆಯಾದ ಸೆಕ್ಯೂರಿಟಿ ಎಕ್ಸ್ಚೇಂಜ್ ಬೋಡರ್್ ಆಫ್ ಇಂಡಿಯಾ(ಸೆಬಿ) ಕಾನೂನು ಪ್ರಕಾರ ಕಾಯರ್ಾಚರಿಸುವಿದಲ್ಲ ಎಂಬುದಾಗಿ ದಿಲ್ಲಿ ಹೈಕೋಟರ್್ನಲ್ಲಿ ದಾವೆ ಹೂಡಲಾಗಿತ್ತು.  ಜಸ್ಟೀಸ್ ಸ್ವಾಮಿ ದೊರೆ ಸಮಗ್ರ ತನಿಖೆ ನಡೆಸಿ ಪಿಎಸಿಎಲ್ ಎಲ್ಲಾ ಕಾನೂನುಗಳನ್ನು ಅನುಸರಿಸಿ ಕಾಯರ್ಾಚರಿಸುತ್ತಿದೆ ಎಂದು ವರದಿ ಸಲ್ಲಿಸಿದರು.  ಈ ತೀಪರ್ಿಗೆ ವಿರುದ್ಧವಾಗಿ ಸೆಬಿ ಹಾಗೂ ಸಿಪಿಐ ಸುಪ್ರೀಂಕೋಟರ್್ನಲ್ಲಿ ಅಫೀಲು ಮಾಡಿದಂತೆ 2006ರಲ್ಲಿ ಸುಪ್ರೀಂಕೋಟರ್್ ನಿವೃತ್ತ ಮುಖ್ಯ ನ್ಯಾಯಾಶ ಜಸ್ಟೀಸ್ ಆರ್.ಎಂ.ಲೋಧಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕಂಪೆನಿಯ ಆಸ್ತಿ, ಸ್ಥಿರಚರ ಸಂಪತ್ತು ಮತ್ತು ಹೂಡಿಕೆಯ ಹಣವನ್ನು ನಿರ್ವಹಿಸುವ ಜವಾಬ್ದಾರಿಯನ್ನು ನೀಡಿತ್ತು.  ಲೋಧಾ ಸಮಿತಿಯು ಹೂಡಿಕೆದಾರರ ಠೇವಣಿಯನ್ನು ಹಿಂತಿರುಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಸೆಬಿಗೆ ನೀಡಿತ್ತು.  ಆದರೆ  ಸೆಬಿ ಈ ತನಕ ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿಸಲಿಲ್ಲ. ಇದರ ವಿರುದ್ಧ ಪಿಎಸಿಎಲ್ ಫೀಲ್ಡ್ ವರ್ಕರ್ಸ್ ಸಿಐಟಿಯು ನೇತೃತ್ವದಲ್ಲಿ ಅ.24ರಂದು ಬೆಳಗ್ಗೆ 10ಕ್ಕೆ ವಿದ್ಯಾನಗರ ಆದಾಯ ತೆರಿಗೆ ಕಚೇರಿಗೆ ಜಾಥಾ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries