HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಹಬ್ಬದ ಆಚರಣೆ ಸಂಸ್ಕೃತಿಯ ಪ್ರತೀಕ : ಪುಂಡರೀಕಾಕ್ಷ ಕೆ.ಎಲ್.
    ಕುಂಬಳೆ: ನಮ್ಮ ನಾಡಿನಲ್ಲಿ ವೈವಿಧ್ಯಮಯವಾದ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದು ನಮ್ಮ ಸಂಸ್ಕೃತಿಯ ಪ್ರತೀಕ ಮಾತ್ರವಲ್ಲ ನಾಡಿನ ಜಾತಿ, ಮತ, ಪಂಥಗಳನ್ನು ಮರೆತು ಒಂದು ಗೂಡುವುದಕ್ಕಾಗಿ ಒದಗಿ ಬರುವ ಅವಕಾಶ ಎಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರು ಹೇಳಿದರು. 
     ಅವರು ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ದಸರಾ ನಾಡಹಬ್ಬ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಜಾತಿ, ಧರ್ಮದವರು ಒಂದಾಗಿ ಈ ಶಾಲೆಯಲ್ಲಿ ಹಬ್ಬಗಳನ್ನು ಆಚರಿಸುತ್ತಿರುವುದು ನಿಜಕ್ಕೂ ನಾಡಿಗೆ ಮಾದರಿ. ಅದಕ್ಕಾಗಿ ಶ್ರಮಿಸುತ್ತಿರುವ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನಾರ್ಹ ಎಂದರು.
   ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ.ಪೇರಾಲು ಅಧ್ಯಕ್ಷತೆ ವಹಿಸಿದರು. ಮಾತೆಯರ ಸಂಘದ ಅಧ್ಯಕ್ಷೆ ಹಸೀನಾ ಪೇರಾಲು, ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಂದ್ರ ಪೂಜಾರಿ, ವಸಂತ, ಇಸ್ಮಾಯಿಲ್, ರಘು ಮೊದಲಾದವರು ಶುಭಹಾರೈಸಿದರು. ನಾಡಹಬ್ಬ ಆಚರಣೆಯ ಪ್ರಯುಕ್ತ ಪೂರ್ವ ಪ್ರಾಥಮಿಕ ಸಹಿತ ಎಲ್ಲ ತರಗತಿಯ ಮಕ್ಕಳಿಗೆ, ರಕ್ಷಕರಿಗೆ ಹಾಗೂ ಶಿಕ್ಷಕರಿಗೆ ಮಂಜಟ್ಟಿ ಕಾಯಿ ಹೆಕ್ಕುವುದು, ಸಂಗೀತ ಕುಚರ್ಿ, ಪುಗ್ಗೆ ಒಡೆಯುವುದು, ನೀರು ಪುಗ್ಗೆ ವಗರ್ಾಯಿಸುವುದು, ಮಡಕೆ ಒಡೆಯುವುದು ಮೊದಲಾದ ಸ್ಪಧರ್ೆಗಳು ನಡೆಯಿತು. ಸ್ಪಧರ್ೆಗಳಲ್ಲಿ ವಿಜೇತರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ವೇದಾವತಿ ಬಹುಮಾನ ವಿತರಿಸಿದರು. ರುಕ್ಮಿಣಿ ಟೀಚರ್ ಸ್ವಾಗತಿಸಿ, ಪ್ರಸೀನ ಟೀಚರ್ ವಂದಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries