ಭಾರ್ಗವ ಶಾಖೆಯಿಂದ ಶ್ರಮದಾನ
ಕುಂಬಳೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೋಟೆಕ್ಕಾರ್ ಭಾರ್ಗವ ಶಾಖೆಯ ವತಿಯಿಂದ ಹೊಂಡ ಮತ್ತು ಪೊದರುಗಳಿಂದ ತುಂಬಿ ವಾಹನ ಪ್ರಯಾಣಕ್ಕೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಕಂಚಿಕಟ್ಟೆ - ಕೋಟೆಕ್ಕಾರ್ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು. ಸಂಘದ ಸ್ವಯಂಸೇವಕರ ಈ ಶ್ರಮದಾನಕ್ಕೆ ಊರ ನಾಗರಿಕರು ಸಾಥ್ ನೀಡಿದರು.