HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕಲ್ಲಕಟ್ಟ ಶಾಲೆಯಲ್ಲಿ ದಸರಾ ಉತ್ಸವ
            `ವಿದ್ಯಾಥರ್ಿಗಳು ಸನ್ನಡತೆಯ ಪ್ರತಿಜ್ಞೆ ಕೈಗೊಳ್ಳಬೇಕು'-ಕೆ.ಭಾಸ್ಕರ
   ಬದಿಯಡ್ಕ: ವಿದ್ಯಾಥರ್ಿಗಳು ಕೆಟ್ಟ ಗುಣಗಳನ್ನು ತ್ಯಜಿಸಿ ಸನ್ನಡತೆಯ ಪ್ರತಿಜ್ಞೆ ಕೈಗೊಳ್ಳಬೇಕು. ನವರಾತ್ರಿಯ ದಿನಗಳಲ್ಲಿ ಸದ್ವಿಚಾರದ ಸಂಕಲ್ಪದೊಂದಿಗೆ ಶಾಲಾ ಜೀವನವನ್ನು ಸಾಕ್ಷಾತ್ಕಾರಗೊಳಿಸಬೇಕು ಎಂಬುದಾಗಿ ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಅಭಿಪ್ರಾಯಪಟ್ಟರು.
    ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ನೇತೃತ್ವದಲ್ಲಿ ಕಲ್ಲಕಟ್ಟ ಮಜದೂರರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಸರಾ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
   ಮುಖ್ಯೋಪಾಧ್ಯಾಯ ಕೆ.ಶ್ಯಾಮ್ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಶಾಲಾ ವ್ಯವಸ್ಥಾಪಕ ಕೇಶವ ಪಿ.ವಿ. ಚಿತ್ತಾರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕಾಸರಗೋಡು ದಸರಾ ಕುರಿತು ಉಪನ್ಯಾಸ ನೀಡಿದರು. ಕಲ್ಲಕಟ್ಟ ಶಾಲಾ ವಿದ್ಯಾಥರ್ಿಗಳು ಪ್ರಾರ್ಥನೆ ಹಾಡಿದರು. ಶಿಕ್ಷಕ ವಿನೋದ್ ಸ್ವಾಗತಿಸಿ, ಕಾಸರಗೋಡು ದಸರಾ ಉತ್ಸವ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಯ ಕಾರ್ಯಕ್ರಮ ನಿರೂಪಿಸಿದರು. ಗಡಿನಾಡ ನುಡಿ ದೀವಿಗೆ ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ ಅವರ ಷಷ್ಟ್ಯಬ್ದ ಹರಿಕಥಾ ಅಭಿಯಾನದಂಗವಾಗಿ `ಪುಣ್ಯಕೋಟಿ' ಕಥಾ ಕೀರ್ತನೆ ಜರಗಿತು.
   ಕಾಸರಗೋಡು ದಸರಾ ಸಮಾರೋಪ ಸಮಾರಂಭ ಅ.19 ರಂದು ಕನ್ನಡ ಗ್ರಾಮದಲ್ಲಿ ಅಪರಾಹ್ನ 2 ರಿಂದ ನಡೆಯಲಿದೆ. ರಾಮ್ಪ್ರಸಾದ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಡಾ.ರತ್ನಾಕರ ಮಲ್ಲಮೂಲೆ ಭಾಗವಹಿಸುವರು. ಸಿರಿಚಂದನ ಕನ್ನಡ ಯುವ ಬಳಗದ ಜೊತೆ ಕಾರ್ಯದಶರ್ಿ ಸೌಮ್ಯಾ ಪ್ರಸಾದ್ ದಸರಾ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ನಿದರ್ೇಶನ ನೀಡುವರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries