ನಾಲ್ವರು ನಿವೃತ್ತ ನ್ಯಾಯಾಧೀಶರಿಂದ ಮಿ ಟೂ ಪ್ರಕರಣಗಳ ವಿಚಾರಣೆ: ಮನೇಕಾ ಗಾಂಧಿ
ನವದೆಹಲಿ: ದೇಶದ ಎಲ್ಲಾ ನಗರಗಳಿಗೂ ವ್ಯಾಪಿಸಿರುವ ಮಿ ಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ , ನಾಲ್ವರು ನಿವೃತ್ತ ನ್ಯಾಯಾಧೀಶರಿಂದ ವೀಟೂ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಮಿ ಟೂ ಅಭಿಯಾನದಿಂದ ಹೊರಗೆ ಬಂದ ಪ್ರಕರಣಗಳ ವಿಚಾರಣೆಗಾಗಿ ಹಿರಿಯ ನ್ಯಾಯಿಕ, ಕಾನೂನು ವ್ಯಕ್ತಿಗಳನ್ನೊಳಗೊಂಡ ಸಮಿತಿ ರಚಿಸುವ ಪ್ರಸ್ತಾವವನ್ನು ಮನೇಕಾ ಗಾಂಧಿ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ. ಜೆ.ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಮೂರು ದಿನಗಳ ನಂತರ ಇದೇ ಮೊದಲ ಬಾರಿಗೆ ಅವರ ವಿರುದ್ಧ ಧ್ವನಿ ಎತ್ತಿರುವ ಮನೇಕಾ ಗಾಂಧಿ, ಆರೋಪದ ಬಗ್ಗೆ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಂಪಾದಕರಾಗಿದ್ದ ಎಂ. ಜೆ. ಅಕ್ಬರ್ ವಿರುದ್ಧ ಸುಮಾರು 10 ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಪುರುಷರು ಅಧಿಕಾರ ಕೇಂದ್ರಸ್ಥರಾಗಿದ್ದಾಗ ಇಂತಹ ಕೃತ್ಯಗಳು ನಡೆಯುತ್ತವೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಇತ್ತೀಚಿಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನೇಕಾ ಗಾಂಧಿ ಹೇಳಿದ್ದರು.
ಇಂತಹ ವರ್ತನೆಯಿಂದ ದೂರ ಉಳಿಯುತ್ತಿದ್ದ ದೇಶದ ಮಹಿಳೆಯರು ಇಂದು ಧೈರ್ಯಮಾಡಿ ಮಾತನಾಡುತ್ತಿದ್ದಾರೆ. ಈ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ, ಅವರು ಅಕ್ಬರ್ ರಾಜೀನಾಮೆ ಕೇಳಿಲ್ಲ.
ಮಿಟೂ ಅಭಿಯಾನದಲ್ಲಿ ಹೊರಬಂದಿರುವ ಪ್ರಕರಣಗಳು ಯಾವಾಗ ನಡೆದಿದ್ದವು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವುಗಳೆಲ್ಲವೂ ತಡವಾಗಿ ಬೆಳಕಿಗೆ ಬಂದಿದ್ದು, ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ತಾವೂ ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧವಿರುವುದಾಗಿ ಮನೇಕಾ ಗಾಂಧಿ ಪುನರುಚ್ಚರಿಸಿದ್ದಾರೆ.
ನವದೆಹಲಿ: ದೇಶದ ಎಲ್ಲಾ ನಗರಗಳಿಗೂ ವ್ಯಾಪಿಸಿರುವ ಮಿ ಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ , ನಾಲ್ವರು ನಿವೃತ್ತ ನ್ಯಾಯಾಧೀಶರಿಂದ ವೀಟೂ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಮಿ ಟೂ ಅಭಿಯಾನದಿಂದ ಹೊರಗೆ ಬಂದ ಪ್ರಕರಣಗಳ ವಿಚಾರಣೆಗಾಗಿ ಹಿರಿಯ ನ್ಯಾಯಿಕ, ಕಾನೂನು ವ್ಯಕ್ತಿಗಳನ್ನೊಳಗೊಂಡ ಸಮಿತಿ ರಚಿಸುವ ಪ್ರಸ್ತಾವವನ್ನು ಮನೇಕಾ ಗಾಂಧಿ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ. ಜೆ.ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಮೂರು ದಿನಗಳ ನಂತರ ಇದೇ ಮೊದಲ ಬಾರಿಗೆ ಅವರ ವಿರುದ್ಧ ಧ್ವನಿ ಎತ್ತಿರುವ ಮನೇಕಾ ಗಾಂಧಿ, ಆರೋಪದ ಬಗ್ಗೆ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸಂಪಾದಕರಾಗಿದ್ದ ಎಂ. ಜೆ. ಅಕ್ಬರ್ ವಿರುದ್ಧ ಸುಮಾರು 10 ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಪುರುಷರು ಅಧಿಕಾರ ಕೇಂದ್ರಸ್ಥರಾಗಿದ್ದಾಗ ಇಂತಹ ಕೃತ್ಯಗಳು ನಡೆಯುತ್ತವೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಇತ್ತೀಚಿಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನೇಕಾ ಗಾಂಧಿ ಹೇಳಿದ್ದರು.
ಇಂತಹ ವರ್ತನೆಯಿಂದ ದೂರ ಉಳಿಯುತ್ತಿದ್ದ ದೇಶದ ಮಹಿಳೆಯರು ಇಂದು ಧೈರ್ಯಮಾಡಿ ಮಾತನಾಡುತ್ತಿದ್ದಾರೆ. ಈ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ, ಅವರು ಅಕ್ಬರ್ ರಾಜೀನಾಮೆ ಕೇಳಿಲ್ಲ.
ಮಿಟೂ ಅಭಿಯಾನದಲ್ಲಿ ಹೊರಬಂದಿರುವ ಪ್ರಕರಣಗಳು ಯಾವಾಗ ನಡೆದಿದ್ದವು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವುಗಳೆಲ್ಲವೂ ತಡವಾಗಿ ಬೆಳಕಿಗೆ ಬಂದಿದ್ದು, ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸುವುದಾಗಿ ತಾವೂ ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧವಿರುವುದಾಗಿ ಮನೇಕಾ ಗಾಂಧಿ ಪುನರುಚ್ಚರಿಸಿದ್ದಾರೆ.





