HEALTH TIPS

ಸ್ಮೃತಿ ಮಂದಿರ ದಶಮಾನೋತ್ಸವ ನ.26ರಂದು

                                         
       ಮುಳ್ಳೇರಿಯ : ದೇಲಂಪಾಡಿ ಗ್ರಾಮ ಪಂಚಾಯಿತಿನ ಭಾರತೀಯ ಜನತಾ ಪಕ್ಷದ ಕಾಯರ್ಾಲಯವಾದ ಕೆ ಜಿ ಮಾರಾರ್ ಸ್ಮೃತಿ ಮಂದಿರದ ದಶಮಾನೋತ್ಸವ ಹಾಗೂ ಸಾರ್ವಜನಿಕ ಸಭೆಯು ಇದೇ ನ.26ರಂದು ಸಂಜೆ 3 ಗಂಟೆಗೆ ಅಡೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದಶರ್ಿ ಶೋಭಾ ಸುರೇಂದ್ರನ್ ಉದ್ಘಾಟಿಸುವರು. ದೇಲಂಪಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಅಧ್ಯಕ್ಷ ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸುವರು. ಸ್ಮೃತಿ ಮಂದಿರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವನ್ನು ಸುಳ್ಯ ಶಾಸಕ ಎಸ್ ಅಂಗಾರ ಅನಾವರಣ ಮಾಡುವರು. ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ 3ನೇ ಬಾರಿಗೆ ಆಯ್ಕೆಯಾದ ಪ್ರಮೀಳಾ ಸಿ ನಾಯಕ್ ಅವರನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಸನ್ಮಾನಿಸುವರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ ಶ್ರೀಕಾಂತ್, ಬಿಜೆಪಿ ಜಿಲ್ಲಾ ಕಾರ್ಯದಶರ್ಿ ಬೆಳಾಳ್ ಕುಂಞಕಣ್ಣನ್, ಉದುಮ ಮಂಡಲ ಬಿಜೆಪಿ ಅಧ್ಯಕ್ಷ ಕೆ ಟಿ ಪುರುಷೋತ್ತಮ, ಉದುಮ ಮಂಡಲ ಪ್ರಧಾನ ಕಾರ್ಯದಶರ್ಿ ಬಾಬುರಾಜ್, ಬಿಜೆಪಿ ಉದುಮ ಮಂಡಲ ಪ್ರಧಾನ ಕಾರ್ಯದಶರ್ಿ ಜಯಕುಮಾರ್ ಮಾನಡ್ಕ, ಮುಖಂಡರಾದ ಜಯರಾಜ್ ನಾಯಕ್, ದಿಲೀಪ್ ಪಳ್ಳೆಂಜಿ, ಟಿ ನಾರಾಯಣ, ಬಿ ಪ್ರದೀಪ್ ಕುಮಾರ್ ಮೊದಲಾದವರು ಭಾಗವಹಿಸುವರು. ಈ ಸಂದರ್ಭದಲ್ಲಿ ಅಪರಾಹ್ನ 3ರಿಂದ ದೇಲಂಪಾಡಿ ಗ್ರಾಮ ಪಂಚಾಯಿತಿ ಪರಿಸರದಿಂದ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries