HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಇಂದು ಬದಿಯಡ್ಕದಲ್ಲಿ ಕೃಷ್ಣ ಪೈ ನೆನಪು ಮತ್ತು ಬಹುಭಾಷಾ ಕವಿಗೋಷ್ಠಿ
    ಬದಿಯಡ್ಕ : ಕವಿ, ಸಂಘಟಕ ಮತ್ತು ದಸ್ತಾವೇಜು ಬರಹಗಾರ ಬಿ ಕೃಷ್ಣ ಪೈ ಯವರ ನೆನಪು ಮತ್ತು ಬಹುಭಾಷಾ ಕವಿಗೋಷ್ಠಿ ಬದಿಯಡ್ಕದ ಸುಕನ್ಯಾ ಸದನದಲ್ಲಿ ಇಂದು (ನವೆಂಬರ್ 4ರಂದು) ಬೆಳಿಗ್ಗೆ 10.30ರಿಂದ ನಡೆಯಲಿದೆ.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಧಾಕೃಷ್ಣ ಕೆ. ಉಳಿಯತ್ತಡ್ಕ ವಹಿಸುವರು. ಕೃಷ್ಣ ಪೈಗಳ ಕಾವ್ಯಶಿಲ್ಪಶಾಲೆಯಲ್ಲಿ  ಕೃತಿಯ ಬಗ್ಗೆ ಸಂಶೋಧನಾ ವಿದ್ಯಾಥರ್ಿನಿ ಸೌಮ್ಯಾಪ್ರಸಾದ್ ಅವಲೋಕನ ನಡೆಸುವರು. ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ಜರಗುವ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿ ಅಶೋಕ್ ಕುಮಾರ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಎಂ.ಪಿ. ಜಿಲ್.ಜಿಲ್., ರವೀಂದ್ರನ್ ಪಾಡಿ, ಸಂಧ್ಯಾ ಗೀತಾ ಬಾಯಾರು, ವೆಂಕಟ ಭಟ್ ಎಡನೀರು, ಹರೀಶ್ ಸುಲಾಯ ಒಡ್ಡಂಬೆಟ್ಟು, ಪದ್ಮಾವತಿ ಏದಾರು, ಜ್ಯೋತ್ಸ್ನಾ ಕಡಂದೇಲು, ಶ್ರೀನಿವಾಸ ಪೆರಿಕ್ಕಾನ, ಬಾಲಕೃಷ್ಣ ಬೇರಿಕೆ, ಸಂದೀಪ್ ಬದಿಯಡ್ಕ, ಪ್ರಭಾ ನಾಯಕ್ ಮಂಜೇಶ್ವರ, ವಿದ್ಯಾಗಣೇಶ್ ಕಾಸರಗೋಡು, ಲತಾ ಬನಾರಿ, ಶ್ವೇತ ಕಜೆ, ರಾಜಶ್ರೀ ರೈ, ಶಮರ್ಿಳಾ ಬಜಕೂಡ್ಲು, ಸನ್ನಿಧಿ ಟಿ. ರೈ, ಶಿವಾನಿ ಶಂಕರ್ ಭಾಗವಹಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries