ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಆರ್ ಬಿಐ-ಸಕರ್ಾರ ತಿಕ್ಕಾಟ: ಕೇಂದ್ರದ ಪರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರದ ಬೆನ್ನಿಗೆ!
ದೆಹಲಿ: ಆರ್ ಬಿಐ ಗೌರ್ನರ್ ಹಾಗೂ ಹಣಕಾಸು ಸಚಿವಾಲಯದ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ಬಗ್ಗೆ ವ್ಯಾಪಕ ಚಚರ್ೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸಕರ್ಾರದ ನಡೆಯನ್ನು ಸಮಥರ್ಿಸಿಕೊಳ್ಳುವಂತಹ ಹೇಳಿಕೆಯೊಂದನ್ನು ಆಥರ್ಿಕ ತಜ್ಞ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾಡಿದ್ದಾರೆ.
ಡಾ. ಸಿಂಗ್ ಅವರ ಪುತ್ರಿ ಬರೆದಿರುವ ಸ್ಟ್ರಿಕ್ಟ್ಲಿ ಪರ್ಸನಲ್: ಮನಮೋಹನ್ ಸಿಂಗ್ ಆಡ್ ಗುರ್ಶರಣ್ ಪುಸ್ತಕದಲ್ಲಿ ಡಾ. ಸಿಂಗ್ ಆರ್ ಬಿಐ ಹಾಗೂ ಕೇಂದ್ರ ಸಕರ್ಾರದ ಬಗ್ಗೆ ಮಾತನಾಡುತ್ತಾ, ಆರ್ ಬಿಐ ಹಾಗೂ ಕೇಂದ್ರ ಸಕರ್ಾರದ ನಡುವೆ ಕೊಡುಕೊಳ್ಳುವಿಕೆ ಇದ್ದದ್ದೇ, ಆದರೆ ಹಣಕಾಸು ಸಚಿವರು ನಿದರ್ಿಷ್ಟ ಕ್ರಮ ಕೈಗೊಂಡರೆ ಅದನ್ನು ಮುಂದುವರೆಸಲೇಬೇಕು, ಹಣಕಾಸು ಸಚಿವರು ಹಾಗೂ ಆರ್ ಬಿಐ ಗೌರ್ನರ್ ನಡುವೆ ಎಂದಿಗೂ ಹಣಕಾಸು ಸಚಿವರದ್ದೇ ಮೇಲುಗೈ ಆಗಿರಲಿದೆ ಎಂದು ಡಾ.ಸಿಂಗ್ ಹೇಳಿದ್ದಾರೆ.
ಕೇಂದ್ರೀಯ ಬ್ಯಾಂಕ್ ನಲ್ಲಿ ತಮ್ಮ ಅವಧಿಯನ್ನು ನೆನಪಿಸಿಕೊಂಡಿರುವ ಡಾ.ಸಿಂಗ್, ಸಕರ್ಾರ ಹಾಗೂ ಆರ್ ಬಿಐ ನಡುವೆ ಕೊಡುಕೊಳ್ಳುವಿಕೆ ಇದ್ದದ್ದೇ ಕೆಲವೊಮ್ಮೆ ಆರ್ ಬಿಐ ಸಕರ್ಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಹಣಕಾಸು ಸಚಿವರಿಗಿಂತ ಮೇಲೆ ಆರ್ ಬಿಐ ಗೌರ್ನರ್ ಇರುವುದಿಲ್ಲ. ಹಣಕಾಸು ಸಚಿವರು ಸೂಚನೆ ನೀಡಿದರೆ ಅದನ್ನು ಆರ್ ಬಿಐ ಗೌರ್ನರ್ ನಿರಾಕರಿಸುವುದಕ್ಕೆ ಸಾಧ್ಯವಿಲ್ಲ, ಒಂದು ವೇಳೆ ನಿರಾಕರಿಸಬೇಕಿದ್ದರೆ ಕೆಲಸಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ಆರ್ ಬಿಐ ಸೆಕ್ಷನ್ 7 ಕ್ಕೆ ಮೋದಿ ಸಕರ್ಾರದ ವಿತ್ತ ಸಚಿವಾಲಯ ಆರ್ ಬಿಐಗೆ ನಿದರ್ೇಶನ ನೀಡಿರುವ ಕ್ರಮವನ್ನು ಸಮಥರ್ಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಥರ್ಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ. ಸಿಂಗ್ ಅವರ ಹೇಳಿಕೆಯೇ ಬಲವಾದ ಅಂಶವಾಗಿ ಸಿಕ್ಕಿದೆ.
ಆರ್ ಬಿಐ ಕಾಯ್ದೆಯಲ್ಲಿರುವ ಸೆಕ್ಷನ್ 7 ನ್ನು ಬಳಕೆ ಮಾಡಿ ಕೇಂದ್ರ ಬ್ಯಾಂಕ್ ಗೆ ನಿದರ್ೇಶನ ಮಾಡುವ ಅಧಿಕಾರವನ್ನು ಕೇಂದ್ರ ಸಕರ್ಾರ ಎನ್ ಪಿಎ ವಿಷಯದಲ್ಲಿ ಚಲಾಯಿಸುತ್ತಿದೆ. ಇದು ಚಚರ್ೆಗೆ ಕಾರಣವಾಗಿದೆ.




