ಮುಳ್ಳೇರಿಯ: ಯಕ್ಷತೂಣೀರ ಪ್ರತಿಷ್ಠಾನ ಕೋಟೂರು ಇದರ ನಿದರ್ೇಶಕರು, ಕಾತರ್ಿಕೇಯ ಕಲಾ ನಿಲಯದ ಸಕ್ರಿಯ ಕಾರ್ಯಕರ್ತರು, ರಂಗ ಕಲಾವಿದರು, ಹಿರಿಯ ಯಕ್ಷಗಾನ ಕಲಾವಿದರು, ಯಕ್ಷಗಾನ ಪ್ರಸಂಗಕರ್ತರು, ಸಂಘಟಕರೂ ಆಗಿದ್ದ ದಿ.ಪೆರಡಂಜಿ ಗೋಪಾಲಕೃಷ್ಣ ಭಟ್ ಅವರ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿಗಳೊಂದಿಗೆ ನುಡಿನಮನ ಕಾರ್ಯಕ್ರಮ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದಲ್ಲಿ ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿ ನೆನಪಿನ ನುಡಿಗಳನ್ನಾಡಿದರು. ಹಿರಿಯರಾದ ಅಡ್ಕ ಗೋಪಾಲಕೃಷ್ಣ ಭಟ್, ಜಯರಾಮ ಮಂಜತ್ತಾಯ ಎಡನೀರು, ಬೆಳ್ಳಿಗೆ ನಾರಾಯಣ ಮಣಿಯಾಣಿ, ತಾರಾನಾಥ ಬಲ್ಯಾಯ ವಕರ್ಾಡಿ, ವೇಣು ತತ್ವಮಸಿ, ಈಶ್ವರ ಭಟ್ ಬಳ್ಳಮೂಲೆ, ಕುಂಞಿರಾಮ ಚೇಡಿಕ್ಕಾಲ್, ಮಧುರಕಾನನ ಗಣಪತಿ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ವೆಂಕಟ್ ಭಟ್ ಎಡನೀರು, ಅನುಪಮಾ ರಾಘವೇಂದ್ರ ಉಡುಪುಮೂಲೆ, ಮುರಳಿ ಸ್ಕಂದ, ಕೃಷ್ಣ ಭಟ್ ಅಡ್ಕ, ಸುಬ್ರಹ್ಮಣ್ಯ ಭಟ್ ಅಡ್ಕ, ಗೋವಿಂದ ಬಳ್ಳಮೂಲೆ, ಜಯರಾಮ ದೇವಸ್ಯ ನುಡಿನಮನಗಳನ್ನು ಸಲ್ಲಿಸಿದರು.
ರಾಜೇಶ್ವರಿ ಬಳ್ಳಮೂಲೆ, ವಿಜಯಾ ಮುರಳಿ, ಹರಿಕೃಷ್ಣ ಪೆರಡಂಜಿ, ರಾಘವೇಂದ್ರ ಉಡುಪುಮೂಲೆ, ಅನಂತಪದ್ಮನಾಭ ಮಯ್ಯ ಸಹಕರಿಸಿದರು.
ಡಾ.ಶಿವ ಕುಮಾರ್ ಅಡ್ಕ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ಯಾಮ ಮೂತರ್ಿ ಪೆರಡಂಜಿ ವಂದಿಸಿದರು. ಯಕ್ಷಗಾನ ಕಲಾವಿದರಾದ ಸಂತೋಷ್ ಕುಮಾರ್ ಮಾನ್ಯ, ಬಾಲಕೃಷ್ಣ ಸೀತಾಂಗೋಳಿ ಉಪಸ್ಥಿತರಿದ್ದರು.


