HEALTH TIPS

ಕೊಂಡೆವೂರಿನಲ್ಲಿ "ಬಾಕುಡ" ಸಮುದಾಯದವರ "ಬಿತ್ತನೆ ಮುಹೂರ್ತ"

                   
         ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆಬ್ರವರಿ 18 ರಿಂದ 24 ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ವಿವಿಧ ಸಮುದಾಯದವರು ತಮ್ಮ ಸಮುದಾಯದ ಕುಲವೃತ್ತಿಯ ಮೂಲಕ ಯಾಗಕ್ಕೆ ಸೇವೆ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
        ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ 10 ಕ್ಕೆ "ಬಾಕುಡ" ಸಮುದಾಯದವರು ಗದ್ದೆಯನ್ನು ಎತ್ತುಗಳ ಮೂಲಕ ಉತ್ತು ಬಿತ್ತಿ  "ಬಿತ್ತನೆ ಮುಹೂರ್ತ" ನಡೆಸಿಕೊಡುವ ಮೂಲಕ ತಮ್ಮ ಸಮುದಾಯದ ಸೇವೆಗೆ ಚಾಲನೆ ನೀಡಿದರು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ "ಬಾಕುಡ" ಸಮುದಾಯದ ಪ್ರಮುಖರಾದ ಪದ್ಮನಾಭ ನರಿಂಗಾನ,  ತುಳಸೀದಾಸ್ ಮಂಜೇಶ್ವರ, ಬಾಬು ಮಾಸ್ತರ್ ಕುಂಜತ್ತೂರು ಸಹಿತ ಸಮುದಾಯದ ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries