ಕಿದೂರು ಪರಿಸರದಲ್ಲಿ ಅಪೂರ್ವ ಚಿಟ್ಟೆಗಳ ಗಣತಿ
0
ನವೆಂಬರ್ 26, 2018
ಕುಂಬಳೆ: ಜಿಲ್ಲಾ ಬಯೋಡೈವಸರ್ಿಟಿ ಸಮಿತಿ, ಕುಂಬಳೆ ಪಂಚಾಯತಿ ಹಾಗೂ ಪಕ್ಷಿ ಪ್ರೇಮಿ ತಂಡ ಕಿದೂರು ಇವುಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕಿದೂರು ಪರಿಸರದಲ್ಲಿ ಚಿಟ್ಟೆಗಳ ಗಣತಿ ಮೊತ್ತಮೊದಲ ಬಾರಿಗೆ ಕೈಗೊಳ್ಳಲಾಯಿತು. ಚಿಟ್ಟೆ ವೀಕ್ಷಕ ಮುರಳೀ ಮಾಧವ ಪೆಲ್ತಾಜೆ ಅವರ ನೇತೃತ್ವದಲ್ಲಿ ಚಿಟ್ಟೆಗಳ ಸವರ್ೇ ನಡೆಸಲಾಯಿತು.
ಕಾರ್ಯಕ್ರಮವನ್ನು ಕುಂಬಳೆ ಗ್ರಾಮ ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 161 ವಿಧದ ಪಕ್ಷಿಗಳನ್ನು ಕಾಣಬುದಾದ ಏಕ ಸ್ಥಳ ಎಂದರೆ ಅದು ಕಿದೂರಿನ ಕುಂಟಗೇರಡ್ಕ ಪರಿಸರ. ಕಳೆದ ವರ್ಷ ಪ್ರಸಿದ್ಧ ಪಕ್ಷಿ ಪ್ರೇಮಿ ಸಲೀಂ ಅಲಿ ಅವರ ಜನ್ಮ ದಿನಾಚರಣೆಯಂಗವಾಗಿ ಕಿದೂರಿನಲ್ಲಿ ಪ್ರಥಮ ಬಡರ್್ ಫೆಸ್ಟ್ ಆಯೋಜಿಸಿದ್ದು ಸತತ ಎರಡನೇ ಬಾರಿಯು ಯಶಸ್ವಿಯಾಗಿ ನಡೆದು ಕೇರಳ ಹಾಗೂ ಕನರ್ಾಟಕದಿಂದ ಸುಮಾರು 60ಕ್ಕಿಂತಲೂ ಹೆಚ್ಚು ಶಿಬಿರಾಥರ್ಿಗಳು ಭಾಗವಹಿಸಿದ್ದು ಶ್ಲಾಘನೀಯ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ವಿಶೇಷ ಮುತುವಜರ್ಿಯಿಂದ ಕಿದೂರು ಪ್ರದೇಶವನ್ನು ಪಕ್ಷಿಧಾಮವನ್ನಾಗಿ ಮಡುವ ಸಂಪೂರ್ಣ ಭರವಸೆಯನ್ನು ನೀಡಿದ್ದು, ಕಾಯರ್ೋನ್ಮುಖರಾಗಬೇಕಾಗಿದೆ ಎಂದು ತಿಳಿಸಿದರು.
ಇಲ್ಲಿನ ಪರಿಸರ ಹಾಗೂ ಜನ ಸಂರಕ್ಷಣೆಯ ನಿಟ್ಟಿನಲ್ಲಿ ದೊಡ್ಡದಾದ ಕಾಜೂರು ಪಳ್ಳವನ್ನು ಸಂರಕ್ಷಿಸಿ ನವೀಕರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ನಿಸರ್ಗದತ್ತವಾದ ಸಂಪತ್ತುಗಳನ್ನು ಹಾಳುಗೆಡಹದೆ ಅವುಗಳ ಸಂರಕ್ಷಣೆಯನ್ನು ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದು ಅವರು ತಿಳಿಸಿದರು.
ಬಯೋಡೈವಸರ್ಿಟಿ ಜಿಲ್ಲಾ ಸಮಿತಿ ಸಂಚಾಲಕ ಕೃಷ್ಣನ್ , ಸಂಪತ್, ರೋಹನ್, ಜಾನ್ಸ್ನ್ ಸಹಕರಿಸಿದರು. ಬೆಳಿಗ್ಗೆನಿಂದ ಸಂಜೆವರೆಗೆ ನಡೆದ ಚಿಟ್ಟೆ ಗಣತಿಯಲ್ಲಿ ಹತ್ತಕ್ಕೂ ಹೆಚ್ಚುಆಸಕ್ತ ವಿದ್ಯಾಥರ್ಿಗಳು ಭಾಗವಹಿಸಿದರು.
ಜರ್ಮನಿಗರ ಭೇಟಿ
ಕಿದೂರಿನಲ್ಲಿ ನಡೆದ ಚಿಟ್ಟೆಗಳ ಸವರ್ೇ ಕಾರ್ಯಕ್ರಮದಲ್ಲಿ ಜರ್ಮನ್ ನಿವಾಸಿಗಳಾದ ಆ್ಯಡ್ರೋಸ್ ಹಾಗೂ ಮರಿಯಾ ದಂಪತಿಗಳು ಭಾಗವಹಿಸಿ ಕುತೂಹಲ ಮೂಡಿಸಿದರು.
ಭಾರತದ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತರಾದ ಇವರು ಅನಿರೀಕ್ಷಿತವಾಗಿ ಕೇರಳದ ಕಾಸರಗೋಡು ಭಾಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿದೂರಿನಲ್ಲಿ ನಡೆಯುತ್ತಿರುವ ಪಕ್ಷಿಪ್ರೇಮಿ ಚಟುವಟಿಕೆಗಳು ಹಾಗೂ ಇಲ್ಲಿ ವಿಶಾಲವಾಗಿ ಹರಡಿರುವ ಪಾರೆ ಪ್ರದೇಶದ ಬಗ್ಗೆ ಆಸಕ್ತಿಯನ್ನು ಹೊಂದಿ ಇಲ್ಲಿಗೆ ಆಗಮಿಸಿದ್ದರು. ಜೊತೆಗೆ ಚಿಟ್ಟೆಗಳ ಗಣತಿಯಲ್ಲಿ ಭಾಗವಹಿಸಿ ಚಿತ್ರಗಳನ್ನು ಸೆರೆ ಹಿಡಿದರು. ಬಳಿಕ ಸಮೀಪದ ಬಾಗಿ ಎಂಬವರ ಮನೆಗೆ ಭೇಟಿ ನೀಡಿ ಬೀಡಿ ಕಟ್ಟುವ ಕಲೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಭಾರತದ ಗ್ರಾಮೀಣ ಗುಡಿ ಕೈಗಾರಿಕೆಗಳ ಬಗ್ಗೆ ನಾವು ಪ್ರಭಾವಿತರಾಗಿದ್ದು, ಅಧ್ಯಯನದ ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಿದರು.
ಗಣತಿಯಲ್ಲಿ ಕೇರಳ ಕನರ್ಾಟಕಗಳ 60 ಮಂದಿ ಪ್ರತಿನಿಧಿಗಳು ಭಾಗವಹಿಸಿದರು. ಪರಿಸರ ಹಾಗೂ ಜಲ ಸಂರಕ್ಷಣೆಯ ಭಾಗವಾಗಿ ಇಲ್ಲಿನ ಕಾಜೂರು ಪಳ್ಳವನ್ನು ಸಂರಕ್ಷಿಸಿ ನವೀಕರಿಸುವ ಯೋಜನೆ ಹಮ್ಮಿಕೊಳ್ಳುವುಲಾಗಿದೆ. ನಿಸರ್ಗದತ್ತ ಸಂಪತ್ತುಗಳನ್ನು ಉಳಿಸುವ ಪ್ರಯತ್ನಗಳನ್ನು ನಡೆಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾಳಜಿ:
ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಅವರಿಗೆ ಕಿದೂರು ಪರಿಸರದ ಹಕ್ಕಿ-ಚಿಟ್ಟೆ ಹಾಗೂ ಪ್ರಾಕೃತಿಕ ಸಂಪತ್ತುಗಳು ವಿಶೇಷವಾದ ಕಾಳಜಿಗೆ ಪ್ರಾಪ್ತವಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ದಿಯ ಹಿನ್ನೆಲೆಯಾಗಿ ಪ್ರವಾಸಿಗರ ಆಕರ್ಷಣೆಗೆ ಸ್ವತಃ ವಿವೀದೆಡೆ ಭೇಟಿ ನೀಡಿ ಗುರುತಿಸಿದ ಕೇಂದ್ರಗಳಲ್ಲಿ ಕಿದೂರು ಒಂದಾಗಿದೆ. ಇಲ್ಲಿಯ ಪಕ್ಷಿ, ಕೀಟ, ಪ್ರಾಕೃತಿಕ ಕೆರೆಗಳನ್ನು ಅಭಿವೃದ್ದಿಪಡಿಸಿ ಸಂರಕ್ಷಿತ ಪ್ರವಾಸಿ ಕೇಂದ್ರವಾಗಿ ಮುನ್ನಡೆಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈಗಾಗಲೇ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿ ಯೋಜನೆಯ ರೂಪುರೇಖೆಗಳನ್ನು ಸ್ವತಂತ್ರವಾಗಿ ನಿಭಾಯಿಸುತ್ತಿದ್ದಾರೆ. ಮೂಲತಃ ಪರಂಪರೆ, ಸಂಸ್ಕೃತಿ, ಪ್ರಕೃತಿ ವಿಷಯಗಳಲ್ಲಿ ಆಸಕ್ತರಾಗಿರುವ ಡಾ.ಸಜಿತ್ ಬಾಬು ಅವರಿಗೆ ಕಿದೂರು ಬಹುಮುಖ ಚಿಂತನೆಗಳ ಕೇಂದ್ರವಾಗಿ ಕಂಡಿರುವುದಾಗಿ ತಿಳಿಸಿರುವರು.
ಮಾಸ್ತರರ ಕನಸು:
ಕಿದೂರು ಪರಿಸರದ ಪಕ್ಷಿ ಪ್ರಬೇಧ,ಚಿಟ್ಟೆಗಳು ಮತ್ತು ಪ್ರಾಕೃತಿಕ ಮಹತ್ವದ ಬಗ್ಗೆ ಹೊರ ಪ್ರಪಂಚಕ್ಕೆ ಮೊತ್ತಮೊದಲು ಪರಿಚಯಿಸಿದವರು ಕುಂಬಳೆಯ ಶಾಲಾ ಶಿಕ್ಷಕರಾದ ರಾಜು ಮಾಸ್ತರ್ ಕಿದೂರು ಅವರು. ಪಕ್ಷಿಪ್ರೇಮಿ ಶಿಕ್ಷಕರೆಂದೇ ಖ್ಯಾತರಾದ ರಾಜು ಮಾಸ್ತರ್ ಸುಮಾರು 3 ವರ್ಷಗಳ ಹಿಂದೆ ಕಿದೂರಿನಲ್ಲಿ ಮೊತ್ತಮೊದಲ ಬಾರಿಗೆ ಜಿಲ್ಲೆಯಲ್ಲೇ ಅತ್ಯಪೂರ್ವ ಹಕ್ಕಿಗಳಿರುವ ಪ್ರದೇಶ ಎಂದು ಗುರುತಿಸಿ ಗಮನ ಸೆಳೆದಿದ್ದರು. ಶಾಲಾ ವಿದ್ಯಾಥರ್ಿಗಳನ್ನು ಕರೆಸಿ ಅವರಿಗೂ ಮಾಹಿತಿ ನಿಡುವಲ್ಲಿ ಆಸಕ್ತರಾಗಿದ್ದರು.ಜೊತೆಗೆ ಕಳೆದ ವರ್ಷ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬಡ್ಸರ್್ ಫೆಸ್ಟ್ ಆಯೋಜಿಸಿದ್ದರು.





