HEALTH TIPS

ಸ್ಥಾನಿಕ ಬ್ರಾಹ್ಮಣ ಸಭಾದ ಲಲಿತಕಲಾ ಪ್ರಶಸ್ತಿ ಪ್ರಧಾನ

               
       ಮಧೂರು: ಸ್ಥಾನಿಕ ಬ್ರಾಹ್ಮಣ ಸಭಾ ಕಾಸರಗೋಡು ಇದರ 23ನೇ ವರ್ಾಕ ಮಹಾಸಭೆ ಮತ್ತು ಜಿಲ್ಲಾ ಸಮಾವೇಷ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕನರ್ಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಜೂನಿಯರ್ ವಿಭಾಗದ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ ಶ್ರಾವ್ಯಶ್ರೀ ಉಬರಳೆ ಇವರನ್ನು ಲಲಿತಕಲಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಬೇಕೂರು ಉಬರಳೆ ನಿವಾಸಿ ದುಗರ್ಾಪ್ರಸಾದ್-ವಿಜಯಲಕ್ಷ್ಮಿ ದಂಪತಿಯ ಪುತ್ರಿಯಾದ ಈಕೆ ಬೇಕೂರು ಹೈಯರ್ ಸೆಕಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾಥರ್ಿನಿ. ಕುಬಣೂರು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾಥರ್ಿನಿಯಾಗಿದ್ದಾಳೆ ಶಾಸ್ತ್ರೀಯ ಸಂಗೀತವನ್ನು ಸುನಿತಾ ಬೈಪಡಿತ್ತಾಯ ಬೇಕೂರು ಹಾಗೂ ಭರತನಾಟ್ಯವನ್ನು ವಿಧುಷಿ ವಿದ್ಯಾಲಕ್ಷ್ಮಿ ಕುಂಬಳೆ ಇವರಿಂದ ಅಭ್ಯಾಸ ಮಾಡುತ್ತಿದ್ದಾಳೆ.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries