ಕುಂಬಳೆಯಲ್ಲಿ ಅಭಿವೃದ್ಧಿ ವಿಚಾರ ಸಂಕಿರಣ
0
ಡಿಸೆಂಬರ್ 21, 2018
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ವಿಚಾರಸಂಕಿರಣ ಕುಂಬಳೆ ಕೃಷಿ ಭವನದಲ್ಲಿ ಇತ್ತೀಚೆಗೆ ಜರಗಿತು. ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಮುಹಮ್ಮದ್ ಕುಂಞÂ ಚಾಯಿಂಡಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯೀ ಸಮಿತಿಯ ಅಧ್ಯಕ್ಷ ಬಿ.ಎನ್.ಮೊಹಮ್ಮದಾಲಿ ಕರಡು ಯೋಜನೆಯನ್ನು ಮಂಡಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷ ಎ.ಕೆ.ಆರೀಫ್, ಕ್ಷೇಮಕಾರ್ಯ ಸ್ಥಾಯೀ ಸಮಿತಿಯ ಅಧ್ಯಕ್ಷೆ ಫಾತಿಮಾ ಅಬ್ದುಲ್ಲ ಕುಂಞÂ, ಸದಸ್ಯರಾದ ವಿ.ಪಿ.ಅಬ್ದುಲ್ಲ ಖಾದರ್, ಮುರಳೀಧರ ಯಾದವ್ ನಾಯ್ಕಾಪು, ಸುಕೇಶ್ ಭಂಡಾರಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಅಬ್ಬಾಸ್, ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ಶುಭಹಾರೈಸಿದರು.
ಗ್ರಾ.ಪಂ. ಸದಸ್ಯರಾದ ಝೈನಬಾ, ಫಾತಿಮತ್ ಝೌರ, ಮರಿಯಮ್ಮ ಮೂಸ, ಹಪ್ಸ , ಅರುಣಾ ಎಂ.ಆಳ್ವ, ಹರೀಶ್ ಗಟ್ಟಿ , ಕೆ.ಸುಜಿತ್ ರೈ, ಪುಷ್ಪಲತಾ ಎನ್., ಆಯಿಷಾ, ಪ್ರೇಮಲತಾ ಎಸ್., ಕೈರುನ್ನೀಸಾ, ಮೊಹಮ್ಮದ್ ಕುಂಞÂ, ಕೆ.ಸುದಾಕರ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಶೈನ್ ಕುಮಾರ್ ಸ್ವಾಗತಿಸಿ, ಯೋಜನಾ ನೌಕರ ಶೈನಿ ವಂದಿಸಿದರು.

