HEALTH TIPS

ಸಮಾಜೋತ್ಸವ ಸಂಪನ್ನ-ದಬ್ಬಾಳಿಕೆಗೆ ಉತ್ತರವಾಗಿ ಅಂತಶಕ್ತಿ ಜಾಗೃತೆಗೊಳಿಸುವ-ಜೆ.ನಂದಕುಮಾರ್

ಕಾಸರಗೋಡು: ವಂದೇ ಮಾತರಂ ಎಂಬ ಪಂಚಾಕ್ಷರಿ ಮಂತ್ರವು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಪರಮ ಪಾವನ ಮಂತ್ರವಾಗಿದೆ. ವಂದೇಮಾತರಂ ಘೋಷಣೆ ಕೂಗಲು ಮತ್ತು ವಂದೇ ಮಾತರಂ ಗೀತೆ ಹಾಡಲು ಕೆಲ ಪಂಗಡದವರು ಒಪ್ಪುತ್ತಿಲ್ಲ. ಆದರೆ ದೇಶದಲ್ಲಿರುವ ಪ್ರತಿಯೋರ್ವರು ದೇಶದ ಆಸ್ಮಿತೆಯನ್ನು ಪುರಸ್ಕರಿಸಿ ವಂದೇ ಮಾತರಂ ಹಾಡುವ ಮೂಲಕ ರಾಷ್ಟ್ರದ ಅಧಿದೇವತೆಯಾದ ಭಾರತ ಮಾತೆಯನ್ನು ಗೌರವಿಸುವ ಕಾಲ ಸನ್ನಿಹಿತವಾಗಿದೆ ಎಂದು ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಯೋಜಕ ಜೆ.ನಂದಕುಮಾರ್ ಹೇಳಿದರು. ಕಾಸರಗೋಡು ಹಿಂದೂ ಸಮಾಜೋತ್ಸವದ ಸಮಿತಿ ವತಿಯಿಂದ ವಿದ್ಯಾನಗರದ ಮುನಿಸಿಪಲ್ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಹಿಂದೂ ಸಮಾಜೋತ್ಸವದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪ್ರತಿನಿತ್ಯ ಎನ್ನುವಂತೆ ಹಿಂದೂಗಳ ಮೇಲೆ ದಬ್ಬಾಳಿಕೆ, ಅಪ್ರಚಾರಗಳು ನಡೆಯುತ್ತಿವೆ. ಇಂತಹ ದಬ್ಬಾಳಿಕೆಗೆ ಉತ್ತರವಾಗಿ ಹಿಂದೂಗಳ ಅಂತಶಕ್ತಿ ಜಾಗೃತೆಗೊಳಿಸುವ ಮೂಲಕ ಕಮ್ಯೂನಿಸ್ಟ್ ಸೈದ್ಧಾಂತಿಕತೆಯನ್ನು ಇಲ್ಲವಾಗಿಸಿ, ಸ್ವಧರ್ಮ ಸಿದ್ಧಾಂತವನ್ನು ದೇಶದಲ್ಲಿ ಬೆಳೆಸಬೇಕಿದೆ ಎಂದರು. ಶಬರಿಮಲೆಯು ಹಿಂದೂಗಳ ಉದಾತ್ತ ಸಂಸ್ಕøತಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಸುಪ್ರೀಂ ಕೋರ್ಟಿನ ತೀರ್ಪನ್ನು ಮೂಲವಾಗಿರಿಸಿ ಅನನ್ಯ ಸಂಸ್ಕøತಿಯ ಪರಿಭಾಷೆಯನ್ನೇ ಬುಡಮೇಲುಗೊಳಿಸುವ ಕಮ್ಯುನಿಸ್ಟ್ ಸಿದ್ಧಾಂತವಾದಿಗಳ ಕುಕೃತ್ಯ ಸಾಧುವಲ್ಲ ಎಂದರು. ಸ್ತ್ರೀ ಪುರುಷ ಸಮಾನತೆಯ ಹೆಸರಲ್ಲಿ ಸಂಪ್ರದಾಯಗಳನ್ನು ಅವಹೇಳನ ಮಾಡುವುದು ಸಾಧುವಲ್ಲ ಎಂದು ಪ್ರಜ್ಞಾ ಪ್ರವಾಹ ಸಂಯೋಜಕ ಜೆ.ನಂದಕುಮಾರ್ ಅಭಿಪ್ರಾಯಪಟ್ಟರು. ಕೇರಳ ಚಿನ್ಮಯ ಮಿಷನ್‍ನ ವಲಯ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕøತಿಯ ಆಧಾರದಲ್ಲಿ ಹಿಂದೂ ಸಮಾಜ ಒಂದುಗೂಡಲು ಸಾಧ್ಯ. ಹಿಂದೂ ಜನತೆ ಭಾರತದಲ್ಲಿ ಈ ಹಿಂದೆಯೇ ಒಂದುಗೂಡಬೇಕಿತ್ತು. ಆದರೆ ಕಾಲ ಮಿಂಚಿಲ್ಲ. ಕಣ್ಣ ಮುಂದೆ ಕಾಣುತ್ತಿರುವ ಜನಸಾಗರವನ್ನು ನೋಡುವಾಗ ಐಕ್ಯಮಂತ್ರ ಭಜಿಸಲು ಸಾಧ್ಯವಿದೆ ಎಂದು ತಿಳಿಸಿದರು. ಪುರತನವಾದ ಶ್ರೇಷ್ಠ, ವೈದಿಕ ಸಂಸ್ಕøತಿ ಭಾರತೀಯರದ್ದು. ಇದನ್ನು ಬುಡಮೇಲುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಶಬರಿಮಲೆಯ ಆಚಾರ ವಿಚಾರಗಳನ್ನು ಧ್ವಂಸಗೊಳಿಸುವ ಕಾನೂನನ್ನು ಹಿಂದೂ ಸಮೂಹ ಎದುರಿಸುತ್ತಿದೆ. ಜಾತ್ಯಾತೀತತೆಯ ಹೆಸರಲ್ಲಿ ರಾಜಕೀಯ ಲಾಭಕ್ಕೋಸ್ಕರ ಹಿಂದೂಗಳನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ಆದರೆ ಹಿಂದೂಗಳ ರಕ್ಷಣೆಗೆ ಜಾತ್ಯಾತೀತತೆ ಸಹಾಯವಾಗುತ್ತಿಲ್ಲ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಭಗವದ್ಗೀತೆಯನ್ನು ಘೋಷಿಸಬೇಕು. ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಿಸುವ ಮೂಲಕ ಶಾಲಾ ಕಾಲೇಜು ಸಹಿತ ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸುವಂತಾಗಬೇಕು. ಆ ಮೂಲಕ ಹಿಂದೂ ಅಸ್ಮಿತೆ ಉಳಿಸುವ ಕೆಲಸ ಆಗಲಿ ಎಂದು ಅವರು ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾ.ಸ್ವ.ಸಂ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ- ಶತಮಾನಗಳಿಂದ ಹಿಂದೂ ಸಂಸ್ಕøತಿ ಮೇಲೆ ನಿರಂತರ ದೌರ್ಜನ್ಯ ನಡೆದು ಬರುತ್ತಿದೆ. ದಕ್ಷಿಣದ ಕೇರಳದ ಕಾಲಡಿಯಿಂದ ಆಸೇತು ಹಿಮಾಲಯದವರೆಗೆ ದೇಶವನ್ನು ಸುತ್ತಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ ಆದಿ ಶಂಕರಾಚಾರ್ಯ, ಮಹಾವೀರ, ಗೌತಮ ಬುದ್ಧ, ಜ್ಞಾನೇಶ್ವರ ಮೊದಲಾದವರು ದೇಶದ ಆಸ್ಮಿತೆಯನ್ನು ಎತ್ತಿ ಹಿಡಿದು, ಆಧ್ಯಾತ್ಮದ ಬೆಳಕನ್ನು ಪುನಃ ಹರಡುವಂತೆ ಮಾಡಿದರು. ದೇಶದ ಹಿಂದೂ ಸಂಸ್ಕøತಿಯ ಪ್ರತೀಕವಾಗಿರುವ ಭಗವಾಧ್ವಜವನ್ನು ನಾವು ಹೆಮ್ಮೆಯಿಂದ ಹಾರಿಸಬೇಕು. ಈ ಧ್ವಜವನ್ನು ಹಿಂದೂ ದೇಶದ ಹೊರತಾಗಿ ಬಾಂಗ್ಲಾದೇಶ ಅಥವಾ ಪಾಕಿಸ್ಥಾನದಲ್ಲಿ ಹಾರಿಸಲಾಗದು ಎಂದರು. ಆಯೋಧ್ಯೆಯಲ್ಲಿ ಸಹಸ್ರಾರು ವರ್ಷಗಳಿಂದ ರಾರಾಜಿಸಿದ ರಾಮಮಂದಿರ ವಿದೇಶಿ ಮುಸ್ಲಿಂ ರಾಜಕುತಂತ್ರಿಗಳಿಂದ ನಾಶವಾಯಿತು. ಪ್ರಸ್ತುತ ಅಯೋಧ್ಯೆಯಲ್ಲಿ ಭವ್ಯ ಮಂದಿರವನ್ನು ಕಾಣುವಂತಹ ಪುಣ್ಯಕಾಲ ಸನಿಹದಲ್ಲಿದೆ ಎಂದರು. ಆಯೋಧ್ಯೆಯಲ್ಲಿ ಭವ್ಯ ಮಂದಿರ ಶೀಘ್ರದಲ್ಲಿ ನಿರ್ಮಾಣವಾಗಲಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿ ಪ್ರಮುಖ್ ವಲ್ಸನ್ ತಿಲ್ಲಂಗೇರಿ ಮಾತನಾಡಿ ಕೇರಳದಲ್ಲಿ ದುಷ್ಟರ ನಾಶ ಸಂಭವಿಸುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆ ಆಚಾರ ವಿಚಾರಗಳನ್ನು ಬಡುಮೇಲುಗೊಳಿಸುವ ಯತ್ನವನ್ನು ಸರಕಾರ ನಡೆಸಿತು. ಎಡರಂಗ ಸರಕಾರದ ಹಿಂದೂ ವಿಶ್ವಾಸ ದ್ರೋಹವು ಅವರಿಗೆ ವಿಷವಾಗಿ ಪರಿಣಮಿಸಲಿದೆ ಎಂದರು. ಸೆ. 28 ರಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶಬರಿಮಲೆಯಲ್ಲಿ ಆರಂಭಗೊಂಡ ಧರ್ಮ ನಂಬಿಕೆಗಳನ್ನು ಬುಡಮೇಲುಗೊಳಿಸುವ ಸರಕಾರದ ಕ್ರಮವನ್ನು ಎಂದಿಗೂ ಹಿಂದೂ ಸಮಾಜ ಸಹಿಸಲಿಲ್ಲ ಬದಲಾಗಿ ಎದುರಿಸಿದೆ ಎಂದರು. ರೆಹನಾ ಫಾತಿಮಾ ಸಹಿತ ಸ್ತ್ರೀವಾದಿಗಳನ್ನು ಬಳಸಿಕೊಂಡು ಶಬರಿಮಲೆಯನ್ನು ಅಪವಿತ್ರಗೊಳಿಸುವ ಸರಕಾರದ ಕ್ರಮ ಸಾಧುವಲ್ಲ. ಸರಕಾರ ಶಬರಿಮಲೆ ವಿಚಾರದಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಿದೆ. ಭಕ್ತರ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ನವಾಕ್ಷರಿ ಮಂತ್ರವು ಸರಕಾರದ ಕಪಟ ನಾಟಕವನ್ನು ಹಿಮ್ಮೆಟ್ಟುವಂತೆ ಮಾಡಿದೆ ಎಂದು ಅವರು ತಿಳಿಸಿದರು. ಇರ್ಫಾನ್ ಹಬೀಬ್, ರೊಮಿಲಾ ಥಾಪರ್ ನಂತಹ ಎಡಚಿಂತಕ ಇತಿಹಾಸಕಾರರ ಪಠ್ಯಗಳು ನಮಗೆ ಬೇಕಿಲ್ಲ, ಬದಲಾಗಿ ಹಿಂದೂ ಸಂಸ್ಕøತಿಯನ್ನು ಉದ್ದೀಪನಗೊಳಿಸುವ ಚರಿತ್ರೆಯ ಪುಟಗಳು ನಮಗೆ ಬೇಕಿದೆ ಎಂದರು. ಮಾರ್ಕಿಸ್ಟ್ ಪಕ್ಷದ ಹುಸಿ ಗೌಣ ಸಿದ್ಧಾಂತಗಳು ನಮಗೆ ಬೇಕಿಲ್ಲ, ಬದಲಾಗಿ ಯುವಕರನ್ನು ದೇಶದ ಹೆಮ್ಮೆಯ ಪುತ್ರರಾಗಿಸುವ ಸಿದ್ಧಾಂತ ಬೇಕಿದೆ ಎಂದರು. ಪ್ರಸ್ತುತ ಡಿವೈಎಫ್‍ಐ ಸಂಘಟನೆಗಳು ರಾಜಗುರು ಸುಖದೇವರ ಕಥೆಗಳನ್ನು ಹೇಳಿ ಯುವಕರನ್ನು ತಮ್ಮ ಪಕ್ಷದತ್ತ ಸೆಳೆಯಲು ಬಳಸುತ್ತಿದ್ದಾರೆ ಎಂದರು. ಹಿಂದೂವಿನ ವಿಶಾಲ ಮನೋಭಾವ, ಸ್ತ್ರೀಯರನ್ನು ಮಾತೆಯಂತೆ ಗೌರವಿಸುವ ಗುಣ ಅವನಿಗೆ ಭೂಷಣವಾಗಿದೆ. ನವೋತ್ಥಾನ ಪರಂಪರೆಯನ್ನು ಬಯಸುವ ಹಿಂದೂಗಳು ನಾವು, ಕರ್ಮದಲ್ಲಿ ಹಿಂದುತ್ವ ನಮ್ಮ ದೊಡ್ಡ ಗುಣ ಎಂದರು. ವೇದಿಕೆಯಲ್ಲಿ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಾಂಞಂಗಾಡ್ ಶ್ರೀ ಶಂಕರ ಧರ್ಮ ಅಧ್ಯಯನ ಕೇಂದ್ರದ ಶ್ರೀ ಬೋಧಚೈತನ್ಯ ಸ್ವಾಮೀಜಿ, ಪಡನ್ನಕ್ಕಾಡ್ ತೀರ್ಥಂಕರ ಶ್ರೀ ಪ್ರೇಮಾನಂದ ಸ್ವಾಮೀಜಿ, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ವಿಷ್ಣುಪ್ರಕಾಶ ತಂತ್ರಿ ಕಾವುಮಠ ಉಪಸ್ಥಿತರಿದ್ದರು. ಆರಂಭದಲ್ಲಿ ಅಣಂಗೂರು ಹಾಗೂ ವಿದ್ಯಾನಗರ ಬಿ.ಸಿ.ರೋಡ್ ಜಂಕ್ಷನ್‍ನಿಂದ ಆಕರ್ಷಕ ಶೋಭಾಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಹಿಂದೂ ಸಮಾಜ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಿದರು. ಯೋಗಿ ಆದಿತ್ಯನಾಥ್ ಅನುಪಸ್ಥಿತಿ ಕಾಸರಗೋಡು ಹಿಂದೂ ಸಮಾಜೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನುಪಸ್ಥಿತರಾಗಿದ್ದರು. ಭಾನುವಾರ ಮಧ್ಯಾಹ್ನ ಉ.ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆದಿತ್ಯನಾಥ್ ವೇದಿಕೆ ಹಂಚಿಕೊಂಡಿದ್ದರು. ತದನಂತರ ಮಹಾಕುಂಭಮೇಳದ ಪೂರ್ವಭಾವಿಯಾಗಿ ವಿಶೇಷ ಸಭೆಯಿದ್ದ ಕಾರಣ ಯೋಗಿ ಆದಿತ್ಯನಾಥ್ ಕಾಸರಗೋಡಿನ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries