ಪರಸ್ಪರ ಸಾಮರಸ್ಯದಿಂದ ದೇವರ ಅನುಗ್ರಹ : ನಡಿಬೈಲು ತಂತ್ರಿ
0
ಮಾರ್ಚ್ 15, 2019
ಉಪ್ಪಳ: ಜಾತಿ, ಮತ ಭೇದ ಮರೆತು ಯಾವುದೇ ವೈಮನಸ್ಸು ಇಲ್ಲದೆ ಪರಸ್ಪರರು ಒಗ್ಗೂಡಿಕೊಂಡು ಆರಾಧನಾಲಯಗಳನ್ನು ಜೀರ್ಣೋದ್ಧಾರಗೊಳಿಸಿ ಪೂಜಿಸುವುದರಿಂದ ದೇವರ ಸಂಪೂರ್ಣ ಅನುಗ್ರಹ ಸಾಧ್ಯ. ಅದೆಷ್ಟೋ ಕ್ಷೇತ್ರಗಳು ಏಕತೆಗೆ ಹೆಸರುಗಳಿಸಿವೆಯೆಂದು ತಂತ್ರಿವರ್ಯರಾದ ವೇದಮೂರ್ತಿ ಶ್ರೀ ನಡಿಬೈಲು ಶಂಕರನಾರಾಯಣ ಭಟ್ ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.
ಅವರು ಪೈವಳಿಕೆ ಸಮೀಪದ ಚಿಪ್ಪಾರು ಕಡೆಂಕೋಡಿ ಶ್ರೀ ನಾಗ ರಕ್ತೇಶ್ವರಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಶ್ರೀ ಸಾನಿಧ್ಯಗಳಿಗೆ ಅವಶ್ಯಕತೆಯುಳ್ಳ ಅಲ್ಪ ಸ್ಥಳವನ್ನು ದಾನ ರೂಪದಲ್ಲಿ ನೀಡಿದ ಇಬ್ರಾಹಿಂ ಕಡೆಂಕೋಡಿ ಅವರನ್ನು ಸಮ್ಮಾನಿಸಿ ಆಶೀರ್ವಚನ ನೀಡಿದರು.
ಚಿಪ್ಪಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಐತ್ತಪ್ಪ ಶೆಟ್ಟಿಗಾರ್ ಅವರ ಉಪಸ್ಥಿತಿಯಲ್ಲಿ ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ಸುಜಾತಾ ಬಿ.ರೈ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಭಾಗ್, ಕೊಮ್ಮಂಗಳ ಕೊರತಿ ಗುಳಿಗ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಕೊಮ್ಮಂಗಳ, ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಸೀತಾರಾಮ ಬೋಳಂಗಳ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಣಪತಿ ಭಟ್ ಕುಂಡೇರಿ, ಜಾದೂಗಾರರಾದ ಬಾಲಸುಬ್ರಹ್ಮಣ್ಯ ಭಟ್ ಕಡೆಂಕೋಡಿ, ಗ್ರಾಮ ಪಂಚಾಯತಿ ಸದಸ್ಯ ಚನಿಯ ಕೊಮ್ಮಂಗಳ, ಕಡೆಂಕೋಡಿ ಬನ ಆಡಳಿತ ಸಮಿತಿ ಅಧ್ಯಕ್ಷ ಮಾಧವ ಕಡೆಂಕೋಡಿ, ಕಡೆಂಕೋಡಿ ಬನ ಕಾರ್ಯದರ್ಶಿ ಗೋಪಾಲಕೃಷ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತ್ಯಶಂಕರ ಭಟ್ ಮಳಿವು, ಕಾರ್ಯದರ್ಶಿ ಮೋಹನ್ ಶೆಟ್ಟಿ ನಡುವಳಚಿಲ್, ಕಡೆಂಕೋಡಿ ಕರಾವಳಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಹರೀಶ್ ನಾಯ್ಕ್ ಕಡೆಂಕೋಡಿ, ಪ್ರಸಿದ್ ಡಿ'ಸೋಜ ಕಡೆಂಕೋಡಿ ಉಪಸ್ಥಿತರಿದ್ದು ಶುಭಹಾರೈಸಿದರು.
ಇಬ್ರಾಹಿಂ ಕಡೆಂಕೋಡಿ, ಡಾ.ಕೃಷ್ಣ ಕಡೆಂಕೋಡಿ, ಚಿದಾನಂದ ಲಾಲ್ಭಾಗ್, ಮಂಜಪ್ಪ ಮೂಲ್ಯ ಕಡೆಂಕೋಡಿ, ಮಾಧವ ಕಡೆಂಕೋಡಿ, ಗೋಪಾಲಕೃಷ್ಣ ಭಟ್ ಅಡ್ಕತಿಮಾರು, ಯಕ್ಷಿಣಿಗಾರ್ತಿ ತೇಜಸ್ವಿನಿ ಕಡೆಂಕೋಡಿ ಅವರನ್ನು ಸಮ್ಮಾನಿಸಲಾಯಿತು.
ಅಶೋಕ್ ಸ್ವಾಗತಿಸಿ, ಗೋಪಾಲಕೃಷ್ಣ ಶೆಟ್ಟಿಗಾರ್ ಕೊಮ್ಮಂಗಳ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಯಕ್ಷಧ್ವನಿ, ಮಿಮಿಕ್ರಿ, ಜಾದೂ ನೃತ್ಯ ಹಾಗು ಕರಾವಳಿ ಫ್ರೆಂಡ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಶಾರದ ಕಲಾ ಆಟ್ರ್ಸ್ ಮಂಜೇಶ್ವರ ಅವರಿಂದ `ಇತ್ತಿನಾತ್ ದಿನ' ನಾಟಕ ಪ್ರದರ್ಶನಗೊಂಡಿತು.




