HEALTH TIPS

ಪೈವಳಿಕೆಯಲ್ಲಿ ಕೃಷಿಕರ ವಿದ್ಯುತ್ ಸಂಪರ್ಕ ಸ್ಥಗಿತ: ಬಿಜೆಪಿ ಪ್ರತಿಭಟನೆ

ಉಪ್ಪಳ: ಪೈವಳಿಕೆ ಗ್ರಾ.ಪಂ.ವ್ಯಾಪ್ತಿಯ ಹೊಳೆಯ ಬದಿಯಲ್ಲಿರುವ ಕೃಷಿಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಈ ಭಾಗದ ರೈತರು ಜಿಪಂ ಸದಸ್ಯ. ನ್ಯಾಯವಾದಿ.ಕೆ.ಶ್ರೀಕಾಂತ್ ನೇತೃತ್ವದಲ್ಲಿ ಪೈವಳಿಕೆ ಗ್ರಾಪಂ ಅಧ್ಯಕ್ಷೆ ಭಾರತಿ ಎ. ಶೆಟ್ಟಿ ಅವರನ್ನು ಶುಕ್ರವಾರ ದಿಗ್ಭಂಧನಗೊಳಿಸಿದರು. ಕೃಷಿ ಅಗತ್ಯಕ್ಕಾಗಿ ಉಪಯೋಗಿಸುವ ಮೋಟರ್‍ಗಳ ವಿದ್ಯುತ್ ಸಂಪರ್ಕವನ್ನು ಜಿಲ್ಲಾಧಿಕಾರಿ ನೀಡಿದ ನಿರ್ದೇಶನ ಪ್ರಕಾರ ಕೇರಳ ವಿದ್ಯುತ್ ಪ್ರಸರಣ ಬೋರ್ಡ್( ಕೆಎಸ್‍ಇಬಿ) ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪಂಚಾಯಿತಿ ನಿರ್ಧಾರದಿಂದ ಹಿಂದೆ ಸರಿದರು. ಕೃಷಿ ಮಾತ್ರ ಆಶ್ರಯಿಸಿಕೊಂಡು ಜೀವನ ನಡೆಸುವ ಕೃಷಿಕರ ಮೇಲೆ ರಾಜ್ಯ ಸರಕಾರದ ಒತ್ತಾಸೆಯಿಂದ ಕಲ್ಲಾಯಿ ಎಂಬ ಸ್ಥಳದಲ್ಲಿ ಕೃಷಿಗೆ ಅಗತ್ಯಕ್ಕಾಗಿ ಸ್ಥಾಪಿಸಿದ ಮೋಟರ್ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಬಳಿಕ ಜಿಪಂ ಸದಸ್ಯ ನ್ಯಾಯವಾದಿ.ಕೆ.ಶ್ರೀಕಾಂತ್ ನೇತೃತ್ವದಲ್ಲಿ ಕೃಷಿಕರು ಪಂಚಾಯಿತಿ ಅಧ್ಯಕ್ಷ ರೊಂದಿಗೆ ನಡೆಸಿದ ಚರ್ಚೆಯ ಬಳಿಕ ಜಿಲ್ಲಾಧಿಕಾರಿಯವರ ನಿರ್ದೇಶನ ಪ್ರಕಾರ ಮತ್ತೆ ಸಂಪರ್ಕ ನೀಡಲಾಯಿತು. ಮತ್ತೆ ಇದೇ ರೀತಿಯಲ್ಲಿ ಕೃಷಿಕರ ವಿದ್ಯುತ್ ಕಡಿತಗೊಳಿಸುವಂತಹ ರೀತಿ ಮುಂದುವರಿಯಬಾರದೆಂದು ಎಚ್ಚರಿಕೆ ನೀಡಲಾಯಿತು. ಕೃಷಿ ಸಂಘಟನೆಯ ಪದಾಧಿಕಾರಿಗಳಾದ ಸದಾನಂದ, ಸುರೇಶ್ ಹೊಳ್ಳ, ಪಂಚಾಯಿತಿ ಉಪಾಧ್ಯಕ್ಷ ಸುನಿತಾ ಡಿ ಸೋಜಾ, ಪಂಚಾಯಿತಿ ಸದಸ್ಯರಾದ ಸುಬ್ರಹ್ಮಣ್ಯ ಭಟ್, ಗಣೇಶ ಕುಲಾಲ್ ಕಲ್ಲಗದ್ದೆ, ಸುಜಾದ ಬಿ. ರೈ, ಬಶೀರ್, ರಸಿಯಾ ರಝಾಕ್ ಚಿಪ್ಪಾರ್, ಬಿಜೆಪಿ ನೇತಾರರಾದ ಸುಧಾಮ ಗೋಸಾಡ, ಹರೀಶ್ಚಂದ್ರ ಮಂಜೇಶ್ವರ, ಶಾಲಿನಿ ರೈ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರುಣಾಕರ ರೈ ಮತ್ತಿತರರು ನೇತೃತ್ವ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries