HEALTH TIPS

ವಿಶೇಷ ಚೇತನರಿಗೆ ಕೈಯಾಸರೆಯಾದ ಸಂಸದರ ನಿಧಿ

ಕಾಸರಗೋಡು: ಸಂಸದ ಪಿ.ಕರುಣಾಕರನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿ ವಿಶೇಷಚೇತನರಿಗೆ ಕೈಯಾಸರೆಯಾಗಿದೆ. ಈ ನಿಧಿ ಬಳಸಿ ವಿಶೇಷಚೇತನರಿಗೆ ವಿದ್ಯುನ್ಮಾನ ಗಾಲಿ ಕುರ್ಚಿ, ಬದಿಗಾಲಿ ಅಳವಡಿಸಿದ ತ್ರಿಚಕ್ರ ವಾಹನ ಇತ್ಯಾದಿ ವಿತರಣೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಈ ಸಂಬಂಧ ನಡೆದ ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್ ಈ ಸಲಕರಣೆಗಳ ವಿತರಣೆ ನಡೆಸಿದರು. 99,500 ರೂ. ಮೌಲ್ಯದ ಎರಡು ವಿದ್ಯುನ್ಮಾನ ಗಾಲಿಕುರ್ಚಿ, 81 ಸಾವಿರ ರೂ. ಮೌಲ್ಯದ ತ್ರಿಚಕ್ರವಾಹನ ಖರೀದಿಸಿ ವಿತರಿಸಲಾಗಿದೆ. ಸಮಾಜನೀತಿ ಇಲಾಖೆಗೆ ಸಲ್ಲಿಸಲಾದ ಅರ್ಜಿಗಳ ಹಿನ್ನೆಲೆಯಲ್ಲಿ ಅರ್ಹರ ಆಯ್ಕೆ ನಡೆಸಲಾಗಿದ್ದು, ಚಂದೇರ ಕಾಂ??ರಿಕ್ಕಲ್ ಹೌಸ್ ನಿವಾಸಿ ಕೆ.ರಾಜೀವನ್(48) , ಎಡನೀರಿನ ಪಾಡಿ ಕನ್ನಿಕುಂಡ್ ನಿವಾಸಿವಾಮನ(35) ಎಂಬವರಿಗೆ ವಿದ್ಯುನ್ಮಾನ ಗಾಲಿ ಕುರ್ಚಿ, ಮಡಿಕೈ ಚದುರಕಿಣರ್ ಚೆಟ್ಟಿ ವೀಟ್ಟಿಲ್ ನಿವಾಸಿ ಗಣೇಶನ್(35) ಅವರಿಗೆ ತ್ರಿಚಕ್ರ ವಾಹನ ಲಭಿಸಿದೆ. ಈ ಸಂದರ್ಭ ಮಾತನಾಡಿದ ಸಂಸದ ಅವರು ಕಾಸರಗೋಡು ಕ್ಷೇತ್ರದಲ್ಲಿ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯ ಮೊಬಲಗಿನಲ್ಲಿ ಶೇ 98 ವಿನಿಯೋಗಿಸಲಾಗಿದೆ. ಇದರಲ್ಲಿ ಹತ್ತು ಕಡೆ ವಿಶೇಷಚೇತನರ ಸಹಾಯಕ್ಕೆ ಸಲಕರಣೆಗಳನ್ನು ಖರೀದಿಸಿ ವಿತರಿಸಲಾಗಿದೆ ಎಂದು ತಿಳಿಸಿದರು. ಈ ನಿಧಿಯಿಂದ 61 ಶಾಲೆಗಳಿಗೆ ಬಸ್ ಖರೀದಿ ಸಾಧ್ಯವಾಗಿದೆ. ರಾಜ್ಯದಲ್ಲಿ ಪ್ರಥಮಬಾರಿಗೆ ಸಂಸದರ ನಿಧಿಯಿಂದ ಶಾಲೆಗೆ ಬಸ್ ಖರೀದಿ ಈ ಮೂಲಕ ನಡೆದಿದೆ. ಇತರ ಕ್ಷೇತ್ರಗಳಿಗೆ ಈ ಯೋಜನೆ ಮಾದರಿಯಾಗಿದೆ ಎಂದವರು ನುಡಿದರು. 15 ಆಸ್ಪತ್ರೆಗಳಿಗೆ ಈ ನಿಧಿ ಮೂಲಕ ತುರ್ತು ಚಿಕಿತ್ಸಾ ವಾಹನ ಖರೀದಿಸಲಾಗಿದೆ. ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆಯನ್ನು ಎಂಡೋಸಲ್ಫಾನ್ ಸಂತ್ರಸ್ತರ ವಲಯದಲ್ಲಿ ಜಾರಿಗೊಳಿಸಲು ಸಾಧ್ಯವಾದುದು ದೊಡ್ಡ ಸಾಧನೆ. ಈ ವಲಯಗಳಲ್ಲಿ ಮೂಲಭೂತ ಸೌಲಭ್ಯ ಮತ್ತು ಅಭಿವೃದ್ಧಿಗೆ ಕೋಟಿಗಟ್ಟಲೆ ರೂ.ವೆಚ್ಚ ನಡೆಸಲು ಸಾಧ್ಯವಾಗಿದೆ. ಪ್ರದಾನವಾಹಿನಿಯಿಂದ ಬೇರ್ಪಟ್ಟ ಜನಾಂಗದವರ ಸೌಲಭ್ಯಕ್ಕೂ ಸಹಾಯ ಒದಗಿಸಲು ನಿಧಿಯ ಮೂಲಕ ಸಾಧ್ಯವಾಗಿದೆ ಎಂದವರು ಹೇಳಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಾಜನೀತಿ ಅಧಿಕಾರಿ ಎನ್.ಭಾಸ್ಕರನ್ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries