ಬೈರಡ್ಕ ಸುವರ್ಣಸಿರಿ ತರವಾಡಿನ ಭಾಗವತ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ
0
ಮಾರ್ಚ್ 26, 2019
ಪೆರ್ಲ: ಸ್ವರ್ಗ ಸಮೀಪದ ಬೈರಡ್ಕ ಸುವರ್ಣ ಸಿರಿ ತರವಾಡಿನ ಶ್ರೀಧೂಮಾವತೀ ದೈವಸ್ಥಾನದಲ್ಲಿ ಎಪ್ರಿಲ್ 19ರಿಂದ 26ರವರೆಗೆ ಸಾನಿಧ್ಯ ವೃದ್ಧಿಗಾಗಿ ಹಾಗೂ ಲೋಕಕಲ್ಯಾಣಾರ್ಥ ಶ್ರೀಮದ್ಭಾಗವತ ಸಪ್ತಾಹ ಜರಗಲಿದೆ.ಇದರ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ವಿಷ್ಣು ಅಸ್ರ ಉಳಿಯ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಧೂಮಾವತೀ ದೈವಸ್ಥಾನದ ಸಮಿತಿ ಅಧ್ಯಕ್ಷ ಚಂದ್ರಶೇಖರ ಸಿ.ಎಚ್.ಚಿಪ್ಲುಕೋಟೆ,ಉಪಾಧ್ಯಕ್ಷ ಎಂ.ಸೀತಾರಾಮ ಬೈರಡ್ಕ, ಕೊರಗಪ್ಪ ಪೂಜಾರಿ ಕಿನ್ನಿಂಗಾರು,ರಾಮಚಂದ್ರ ಕೋಟೆಕ್ಕಾರು,ಪ್ರಸಾದ್ ಬಾಡೂರು,ಕಮಲಾಕ್ಷ ಕೊಡ್ಯಮ್ಮೆ,ಚೇತನ,ಆನಿಲ್ ಬಾಡೂರು ಮೊದಲಾದವರು ಉಪಸ್ಥಿತರಿದ್ದರು.

