ಕಾಸರಗೋಡು: ಮೇ ಒಂದು (ಕಾರ್ಮಿಕ ದಿನಾಚರಣೆ) ಅಂಗವಾಗಿ ಕಾರ್ಮಿಕರ ಸಾಮೂಹಿಕ ಓಟ ಸ್ಪರ್ಧೆ ಎ.30ರಂದು ಸಂಜೆ 4 ಗಂಟೆಗೆ ನಗರದಲ್ಲಿ ನಡೆಯಲಿದೆ.
ನೂತನ ಬಸ್ ನಿಲ್ದಾಣ ಬಳಿಯಿಂದ ಜಿಲ್ಲಾ„ಕಾರಿ ಕಚೇರಿ ವರೆಗೆ ಈ ಓಟ ಜರುಗಲಿದೆ. ಜಿಲ್ಲಾ ಕ್ರೀಡಾಮಂಡಳಿ, ಜಿಲ್ಲಾ ಕಾರ್ಮಿಕ ಕಚೇರಿ, ಕಾರ್ಮಿಕರ ಸಂಘಟನೆಗಳು ಇತ್ಯಾದಿಗಳ ಜಂಟಿ ವತಿಯಿಂದ ಸಾಮೂಹಿಕ ಓಟ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಓಟ ಇರುವುದು. ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು.
ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಹಸುರು ನಿಶಾನೆ ತೋರುವರು. ಸಮಾರೋಪ ಸಮಾರಂಭದಲ್ಲಿ ಜಿಲಾ„್ಲಕಾರಿ ಡಾ.ಡಿ.ಸಜಿತ್ ಬಾಬು ಬಹುಮಾನ ವಿತರಿಸುವರು.
ಭಾಗವಹಿಸುವ ಆಸಕ್ತ ಕಾರ್ಮಿಕರು ಎ.29ರಂದು ಮಧ್ಯಾಹ್ನ 12 ಗಂಟೆಗೆ ಮುಂಚಿತವಾಗಿ ಜಿಲ್ಲಾ ಕ್ರೀಡಾ ಮಂಡಳಿ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು. ಮಾಹಿತಿಗೆ ದೂರವಾಣಿ ನಂಬ್ರ: 04994-255521.
ಈ ಸಂಬಂಧ ಸಮಾಲೋಚನೆ ಸಭೆ ಸ್ಥಳೀಯ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಪಿ.ಹಬೀಬ್ ರಹಮಾನ್, ಕಾರ್ಯದರ್ಶಿ ಕೆ.ವಿ.ರಾಘವನ್, ವಿವಿಧ ಕಾರ್ಮಿಕರ ಸಂಘಟನೆಗಳ ನೇತಾರರಾದ ಟಿ.ಕೆ.ರಾಜನ್, ಥಾಮಸ್ ಸೆಬಾಸ್ಟಿನ್, ಟಿ.ವಿ.ಕುಂಞÂರಾಮನ್, ಕೆ.ಭಾಸ್ಕರನ್, ಕೆ.ದಿನೇಶ್, ದಿನೇಶ್, ಸತೀಶ್ ಮೊದಲಾದವರು ಭಾಗವಹಿಸಿದರು.