ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ತರವಾಡಿನಲ್ಲಿ ಇಂದು(ಶುಕ್ರವಾರ) ಹಾಗೂ ನಾಳೆ ಶ್ರೀಧೂಮಾವತಿ, ಉಳ್ಳಾಕ್ಲು ಹಾಗೂ ಧರ್ಮದೈವ ಪಂಜುರ್ಲಿಯ ವಾರ್ಷಿಕ ಧರ್ಮನೇಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಇಂದು ರಾತ್ರಿ 8ಕ್ಕೆ ಶ್ರೀದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, 9 ರಿಂದ ತೊಡಂಙಲ್, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ನಾಳೆ ಮುಂಜಾನೆ 5.30ಕ್ಕೆ ಶ್ರೀಉಳ್ಳಾಕ್ಲು ದೈವದ ನೇಮ, ಬೆಳಿಗ್ಗೆ 9 ಕ್ಕೆ ಶ್ರೀಧೂಮಾವತಿ ದೈವಗಳ ನೇಮ, 11 ಕ್ಕೆ ಧರ್ಮದೈವ ಪಂಜುರ್ಲಿಯ ನೇಮ, ಪ್ರಸಾದ ವಿತರಣೆಯೊಂದಿಗೆ ಧರ್ಮನೇಮೋತ್ಸವ ಸಂಪನ್ನಗೊಳ್ಳಲಿದೆ.

