ಪೆರ್ಲ: ವಾಣೀನಗರ ಅಂಗನವಾಡಿ ಸಹಾಯಕಿ ಜಯಂತಿ. ವಿ ಅವರ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ವಾಣೀನಗರ ಜಿಎಚ್ ಎಸ್ಎಸ್ ಪಡ್ರೆಯಲ್ಲಿ ನಡೆಯಿತು. ಗ್ರಾ.ಪಂ. ಪ್ರತಿನಿಧಿ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ವೈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಎಣ್ಮಕಜೆ ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಎಣ್ಮಕಜೆ ಪಂಚಾಯತಿ ಆರೋಗ್ಯ ್ಧ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಶಾ ಎ.ಎ., ಜಿ ಎಚ್ ಎಸ್ ಎಸ್ ಪಡ್ರೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯಸ್.ನರಸಿಂಹ ಪೂಜಾರಿ, ಪಿ.ಯಸ್ ಕಡಂಬಳಿತ್ತಾಯ, ಮಾತೃಸಂಘದ ಅಧ್ಯಕ್ಷೆ ರೀನಾ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಅಂಗನವಾಡಿ ಮಕ್ಕಳು ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಕುಸುಮ ಎಂ ಸ್ವಾಗತಿಸಿ, ಅಂಗನವಾಡಿ ಅಭಿವೃದ್ದಿ ಸಮಿತಿ ಸದಸ್ಯೆ ಪ್ರೇಮ ವಂದಿಸಿದರು. ಅಂಗನವಾಡಿ ಅಭಿವೃದ್ದಿ ಸಮಿತಿ ಮಾಜಿ ಸದಸ್ಯ ರವಿ.ಕೆ ಕಾರ್ಯಕ್ರಮ ನಿರೂಪಿಸಿದರು.
ವಾಣೀನಗರ ಅಂಗನವಾಡಿ ಸಹಾಯಕಿಯ ಬೀಳ್ಕೊಡುಗೆ
0
May 31, 2019
ಪೆರ್ಲ: ವಾಣೀನಗರ ಅಂಗನವಾಡಿ ಸಹಾಯಕಿ ಜಯಂತಿ. ವಿ ಅವರ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ವಾಣೀನಗರ ಜಿಎಚ್ ಎಸ್ಎಸ್ ಪಡ್ರೆಯಲ್ಲಿ ನಡೆಯಿತು. ಗ್ರಾ.ಪಂ. ಪ್ರತಿನಿಧಿ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ವೈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಎಣ್ಮಕಜೆ ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಎಣ್ಮಕಜೆ ಪಂಚಾಯತಿ ಆರೋಗ್ಯ ್ಧ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಶಾ ಎ.ಎ., ಜಿ ಎಚ್ ಎಸ್ ಎಸ್ ಪಡ್ರೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯಸ್.ನರಸಿಂಹ ಪೂಜಾರಿ, ಪಿ.ಯಸ್ ಕಡಂಬಳಿತ್ತಾಯ, ಮಾತೃಸಂಘದ ಅಧ್ಯಕ್ಷೆ ರೀನಾ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಅಂಗನವಾಡಿ ಮಕ್ಕಳು ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಕುಸುಮ ಎಂ ಸ್ವಾಗತಿಸಿ, ಅಂಗನವಾಡಿ ಅಭಿವೃದ್ದಿ ಸಮಿತಿ ಸದಸ್ಯೆ ಪ್ರೇಮ ವಂದಿಸಿದರು. ಅಂಗನವಾಡಿ ಅಭಿವೃದ್ದಿ ಸಮಿತಿ ಮಾಜಿ ಸದಸ್ಯ ರವಿ.ಕೆ ಕಾರ್ಯಕ್ರಮ ನಿರೂಪಿಸಿದರು.