HEALTH TIPS

ಪರಂಪರೆಯನ್ನು ಸೃಷ್ಟಿಸದೆ ಸಂಸ್ಕøತಿ ಉಳಿಯದು-ಡಾ.ವಸಂತಕುಮಾರ್ ಪೆರ್ಲ-ವಸಂತ ಸಾಹಿತ್ಯೋತ್ಸವಸಲ್ಲಿ ವಿಶೇಷೋಪನ್ಯಾಸಗೈದು ಅಭಿಮತ


     ಕುಂಬಳೆ: ವಿಭಿನ್ನ ಸಂಸ್ಕøತಿ, ಜೀವನ ಕ್ರಮಗಳ ಕರಾವಳಿಯ ನೆಲದಲ್ಲಿ ಇಂತಹ ವಿಭಿನ್ನತೆಯಿಂದಲೇ ಗೋಖಾಕ್ ಚಳವಳಿಯಂತಹ ಹೋರಾಟಗಳು ನಮ್ಮಲ್ಲಿ ಮೂಡಿಬಂದಿಲ್ಲ. ಸಾಮೂಹಿಕ ಆಚರಣೆಯಂತಹ ಏಕಸೂತ್ರಿತ ಒಗ್ಗಟ್ಟು ಇಲ್ಲದಿರುವುದರಿಂದ ದ್ವೀಪಗಳಂತೆ ನಮ್ಮ ಆಚರಣೆಗಳು ಇಂದೀಗ ನಶಿಸುವ ಹಂತದಲ್ಲಿದ್ದು, ಆತ್ಮಾವಲೋಕದೊಂದಿಗೆ ಬೆಳೆಸಿ ಮುನ್ನಡೆಸುವ ಹೊಣೆಯರಿತು ಆಗಬೇಕಿದೆ ಎಂದು ಮಂಗಳೂರು ಆಕಾಶವಾಣಿಯ ನಿನೃತ್ತ ನಿಲಯ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಅವರು ತಿಳಿಸಿದರು.
     ಸಿರಿಗನ್ನಡ ವೇದಿಕೆ ಬೆಂಗಳೂರು, ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ನಾರಾಯಣಮಂಗಲದ ಕುಳಮರ್ವ ಶ್ರೀನಿಧಿಯಲ್ಲಿ ಆಯೋಜಿಸಲಾಗಿದ್ದ ವಸಂತ ಸಾಹಿತ್ಯೋತ್ಸವ-ಪ್ರತಿಭಾ ಪುರಸ್ಕಾರ-ಕವಿಗೋಷ್ಠಿ ಸಮಾರಂಭದಲ್ಲಿ ಕನ್ನಡ ಜಾಗೃತಿ ವಿಶೇಷೋಪನ್ಯಾಸಗೈದು ಅವರು ಮಾತನಾಡಿದರು.
    ಪರಂಪರೆಯನ್ನು ಸೃಷ್ಟಿಸದ ವಿನಹಃ ಸಂಸ್ಕøತಿ ಉಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು, ವಿಚಾರವಂತಿಕೆಯೊಂದಿಗೆ ಆಚಾರವಂತಿಕೆಯ ಹೃದಯ ವೈಶಾಲ್ಯತೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಕರೆನೀಡಿದರು. ಗಡಿನಾಡ ಪರಂಪರೆಯಲ್ಲಿ ಬೆಳೆದುಬಂದಿದ್ದ ದೀಪಾವಳಿ ಆಚರಣೆಯಂತಹ ಜಾನಪದೀಯ ಸೊಗಡಿನ ಅನುಷ್ಠಾನಗಳು ಇಂದು ಸಾಮೂಹಿಕವಾಗಿ ಆಚರಿಸಲ್ಪಡಬೇಕು ಎಂದ ಅವರು ಆತ್ಮಾಭಿಮಾನ, ಭಾಷಾಭಿಮಾನದ ಕಾಳಜಿ ಇಲ್ಲಿಯ ಕನ್ನಡ-ತುಳು ಸಂಸ್ಕøತಿಯನ್ನು ಬೆಸೆದು ಇನ್ನಷ್ಟು ಬೆಳೆಸುವುದು ಎಂದರು. ಯುವ ತಲೆಮಾರು ಆಸಕ್ತಿಯಿಂದ ಸಾಹಿತ್ಯ, ಸಂಸ್ಕøತಿಗಳ ಹೊಕ್ಕುಬಳಕೆಯೊಂದಿಗೆ ಹುಟ್ಟಿದ ಮಣ್ಣಿನ ಋಣವನ್ನು ತೀರಿಸುವ ಹೊಣೆ ವಹಿಸಿಕೊಳ್ಳಬೇಕು ಎಂದು ಕರೆನೀಡಿದರು.
     ಸಿರಿಗನ್ನಡ ವೇದಿಕೆ ಗಡಿನಾಡ ಘಟಕಾಧ್ಯಕ್ಷ ವಿ.ಬಿ.ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಜಲ್ಲೆಯ ವಿವಿಧ ವಿಭಾಗಗಳಲಲಿ ವ್ಯಾಸಂಗಗೈದು ವಿಶೇಷ ಸ್ಥಾನಮಾನಗಳೊಂದಿಗೆ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರದ್ದಾ ನಾಯರ್ಪಳ್ಳ, ಶ್ರೀಕೃಷ್ಣ ಶರ್ಮ ಕಡಪ್ಪು, ವರಲಕ್ಷ್ಮೀ, ರಕ್ಷಾ ಕುಳಮರ್ವ, ಕಾವ್ಯಶ್ರೀ ಕುಳಮರ್ವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಅವರು ಅಭಿನಂದನಾ ನುಡಿಗಳನ್ನಾಡಿದರು.
   ಬಳಿಕ ಶ್ರದ್ದಾ ನಾಯರ್ಪಳ್ಳ ಹಾಗೂ ಮೇಧಾ ನಾಯರ್ಪಳ್ಳ ಸಹೋದರಿಯರಿಂದ ಮೂಲ ರಾಮಚರಿತ ಮಾನಸವನ್ನು ಕನ್ನಡಕ್ಕೆ ಅನುವಾದಿಸಿದ ನೆತ್ತರಗುಳಿ ತಿರುಮಲೇಶ್ವರ ಭಟ್ ರಚಿಸಿದ ಕೃತಿಯಿಂದ ಆಯ್ದ ವಾಲಿಮೋಕ್ಷ ಕಥಾನಕದ ವಾಚನ ಮತ್ತು ವ್ಯಾಖ್ಯಾನ ನಡೆಯಿತು. ಶ್ರೀಕೃಷ್ಣಯ್ಯ ಅನಂತಪುರ ಹಾಗೂ ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದು ಶುಭಹಾರೈಸಿದರು. ಬಳಿಕ ಕವಿಗೋಷ್ಠಿ ಹಾಗೂ ವಿವಿಧ ಸಾಹಿತ್ತಿಕ ಕಾರ್ಯಕ್ರಮಗಳು ನಡೆಯಿತು. ಪ್ರೊ.ಗಣಪತಿ ಭಟ್ ಕುಳಮರ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries