HEALTH TIPS

ಮೋದಿ ಪಟ್ಟಾಭಿಷೇಕ- ಬಿಜೆಪಿಯಿಂದ ವಿಜಯೋತ್ಸವ, ಸಿಹಿ ತಿಂಡಿ, ಪಾಯಸ ವಿತರಣೆ

     
     ಕುಂಬಳೆ: ಕೇಂದ್ರದಲ್ಲಿ ಮೋದಿ ಸರಕಾರದ ರಚನೆ ಹಾಗು ಪ್ರಮಾಣ ಸ್ವೀಕಾರದ ಹಿನ್ನೆಲೆಯಲ್ಲಿ ಅಲ್ಲಲ್ಲಿ  ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮೆರವಣಿಗೆ ನಡೆಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ, ಪಾಯಸ, ಐಸ್‍ಕ್ರೀಂ ಮೊದಲಾದವುಗಳನ್ನು ವಿತರಿಸಿದರು.
   ಕುಂಬಳೆ ಪೇಟೆಯಲ್ಲಿ ಬಿಗ್ ಸ್ಕ್ರೀನ್ ಸ್ಥಾಪಿಸಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರ ನಡೆಸಲಾಯಿತು. ಇದರ ಮುಂದೆ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು.
    ಕೇಂದ್ರದಲ್ಲಿ ಮೋದಿ ಸರಕಾರ ರಚನೆ ಹಾಗು ಪ್ರಮಾಣ ಸ್ವೀಕಾರದ ಹಿನ್ನೆಲೆಯಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ವತಿಯಿಂದ ಹೊಸಂಗಡಿ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಪದ್ಮನಾಭ ಕಡಪ್ಪುರ, ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ, ಒಬಿಸಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ನವೀನ್ ರಾಜ್ ಕೆ.ಜಿ, ದೇವರಾಜ್ ಎಂ.ಎಸ್, ದಯಾಪ್ರಸನ್ನ ಆಚಾರ್ಯ, ರಂಜಿತ್ ಬಾಬು ನೇತೃತ್ವ ನೀಡಿದರು.
    ಮೀಯಪದವು ಜಂಕ್ಷನ್‍ನಲ್ಲಿ ಯುವಮೋರ್ಚಾ, ಬಿಜೆಪಿ ನೇತೃತ್ವದಲ್ಲಿ ಸಂಭ್ರಮ ಆಚರಿಸಲಾಯಿತು. ಮಜಿಬೈಲ್‍ನ ಪಜಿಂಗಾರ್ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವರ್ಕಾಡಿಯಲ್ಲಿ ಯುವಮೋರ್ಚಾ ಕಾರ್ಯಕರ್ತರು, ನಮೋ ಬಳಗ ಮಜೀರ್ಪಳ್ಳ ವತಿಯಿಂದ ಮುರತ್ತಣೆಯಿಂದ ಮಜೀರ್‍ಪಳ್ಳ ಜಂಕ್ಷನ್ ವರೆಗೆ ವಿಜಯೋತ್ಸವ ಮೆರವಣಿಗೆ ನಡೆಸಿದರು. ಮಂಜೇಶ್ವರ ಕೆದುಂಬಾಡಿಯಲ್ಲಿ, ತೂಮಿನಾಡಿನಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತಿ ಬಿಜೆಪಿ ವತಿಯಿಂದ ಉಪ್ಪಳದಲ್ಲಿ ಮೆರವಣಿಗೆ ನಡೆಯಿತು. ಬೆಳ್ಳೂರು ಪಂಚಾಯತಿ ಬಿಜೆಪಿ ಸಮಿತಿ ವತಿಯಿಂದ ವಿಜಯೋತ್ಸವ ನಡೆಯಿತು.
    ಎಣ್ಮಕಜೆ, ಬದಿಯಡ್ಕ, ಕಾರಡ್ಕ, ದೇಲಂಪಾಡಿ, ಮಧೂರು ಪೈವಳಿಕೆ, ಬಾಯಾರು ಮೊದಲಾದೆಡೆಗಳಲ್ಲೂ ಭಾರೀ ಸಂಖ್ಯೆಯ ಮೋದಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries