ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ಬಾಯಿಕಟ್ಟೆ ಶಿಶು ಪ್ರಿಯ ಅಂಗನವಾಡಿಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಐ.ಸಿ.ಡಿ.ಎಸ್. ಮೇಲ್ವಿಚಾರಕಿ ಅಜಿತ ಅಧ್ಯಕ್ಷತೆ ವಹಿಸಿದರು. ಮೀಂಜ ಗ್ರಾ.ಪಂ.ಮೇಲ್ವಿಚಾರಕಿ ಆಶಾ, ಮಂಜೇಶ್ವರ ಗ್ರಾಮ ಪಂಚಾಯತಿ ಮೇಲ್ವಿಚಾರಕಿ ಶೀನಾ ಉಪಸ್ಥಿತರಿದ್ದರು. ಪೆÇ್ರ.ಪಿ.ಎನ್.ಮೂಡಿತ್ತಾಯ ಮಾತನಾಡಿದರು. ನಿವೃತ್ತ ಅಧ್ಯಾಪಕ ಕೋಚಣ್ಣ ಶೆಟ್ಟಿ, ರಾಮ ಏದಾರು, ಆಶಾ ಕಾರ್ಯಕರ್ತೆ ಮಾಲತಿ, ಸಿ.ಡಿ.ಎಸ್. ಸದಸ್ಯೆ ಶಾಂಭವಿ ಮುಂತಾದವರು ಭಾಗವಹಿಸಿದರು. ಯೋಗ ಅಧ್ಯಾಪಕ ಪ್ರವೀಣ್ ಕುಮಾರ್ ಅವರು ಯೋಗದ ಮಹತ್ವವನ್ನು ವಿವರಿಸಿ, ತರಗತಿ ನಡಸಿದರು. ನಿತ್ಯ ಧ್ಯಾನ, ದೈಹಿಕ ಮಾನಸಿಕ ಆರೋಗ್ಯ ಪಾಲನೆಗೆ ಅಗತ್ಯವಿರುವ ಯೋಗ ಮುದ್ರೆ, ಆಹಾರ ಪರಿಚಯಗಳ ಬಗ್ಗೆ ವಿವರಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಪಿ. ಸ್ವಾಗತಿಸಿ, ಸಹಾಯಕಿ ಸುಲೋಚನಾ ಎ.ಕೆ. ವಂದಿಸಿದರು.

