HEALTH TIPS

ಇಂದು ಕೊಂಡೆವೂರಲ್ಲಿ ಚುಟುಕು ಸಾಹಿತ್ಯ ಸಂಭ್ರಮ-2019

             
          ಉಪ್ಪಳ: ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಹಾಗೂ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ಗಡಿನಾಡಿನ ಕನ್ನಡ ಭಾಷೆ, ಸಂಸ್ಕøತಿಗಳ ಬೆಳವಣಿಗೆಗೆ ಪೂರಕವಾಗಿ ಯುವ ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಚುಟುಕು ಸಾಹಿತ್ಯ ಸಂಭ್ರಮ-2019 ಎಂಬ ವಿನೂತನ ಕಾರ್ಯಕ್ರಮ ಇಂದು ಉಪ್ಪಳ ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದ ಸಭಾಣಂಗಣದಲ್ಲಿ ಬೆಳಿಗ್ಗೆ 9.30 ರಿಂದ ನಡೆಯಲಿದೆ. 
     ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಆರಂಭಗೊಳ್ಳಲಿದ್ದು, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸುವರು. ಹಿರಿಯ ಕವಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾಚುಟುಕು ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಇರಾ ನೇಮು ಪೂಜಾರಿ, ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ  ತಾರಾನಾಥ ಬೋಳಾರ್, ಮಧುರೈ ಕಾಮರಾಜ ವಿ.ವಿ.ಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ  ಡಾ.ಹರಿಕೃಷ್ಣ ಭರಣ್ಯ, ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
    ಸಮಾರಂಭದಲ್ಲಿ ರಾಧಾಕೃಷ್ಣ ಕೆ.ಉಳಿತ್ತಡ್ಕ(ಸಾಹಿತಿ, ಪತ್ರಕರ್ತರು),  ಹರೀಶ್ ಪೆರ್ಲ(ಹಿರಿಯ ಸಾಹಿತಿ), ಅಪರ್ಣಾ ಆಳ್ವ  ಒಡ್ಡಂಬೆಟ್ಟು(ಡಾಕ್ಟರೇಟ್ ಪದವಿ ಪಡೆದ ಪ್ರತಿಭಾವಂತೆ),  ಮೀನಾಕ್ಷಿ ಬೊಡ್ಡೋಡಿ(ಎಂ.ಫಿಲ್ ಪದವಿ ಪಡೆದ ಪ್ರತಿಭಾವಂತೆ) ಹಾಗೂ ಬಹುಮುಖ ಪ್ರತಿಭೆ ಅಮೃತ ಸಿಂಧು ಅವರನ್ನು ಅಭಿನಂದಿಸಲಾಗುವುದು.
    ಬಳಿಕ ಎರಡು ಕೃತಿಗಳ ವಿಮರ್ಶಾ ಕಾರ್ಯಕ್ರಮ ನಡೆಯಲಿದೆ. ಡಾ.ಕೃಷ್ಣ ಭಟ್ ಅರ್ತಿಕಜೆ ಹಾಗೂ ಡಾ.ಹರಿಕೃಷ್ಣ ಭರಣ್ಯ ರಚಿಸಿರುವ ತುಪ್ಪಶನ ಉಂಬಲೆ ಕೃತಿಯನ್ನು ಸಂಶೋಧನಾ ವಿದ್ಯಾರ್ಥಿ ರವಿಶಂಕರ .ರವಿಶಂಕರ ಜಿ.ಕೆ.ಕೆದಂಬಾಡಿ ಹಾಗೂ ಯುವ ಸಾಹಿತಿ ಚೇತನಾ ಕುಂಬಳೆ ಅವರು ಬಿ.ಎಸ್.ಏತಡ್ಕ ಅವರ ಕೃತಿ ತಿರುವು ಕಥಾ ಸಂಕಲನದ ವಿಮರ್ಶೆ ನಡೆಸುವರು. ಬಳಿಕ  ಚುಟುಕು ಕವಿಗೋಷ್ಠಿ ಆರಂಭಗೊಳ್ಳಲಿದ್ದು,  ಡಾ.ಸುರೇಶ್ ನೆಗಲಗುಳಿ(ಸಾಹಿತಿ) ಚಾಲನೆ ನೀಡುವರು.     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries