HEALTH TIPS

ವಿಶೇಷ ವರದಿ: ಜಿಲ್ಲೆಯಲ್ಲಿ ಭೀತಿ ತಂದೊಡ್ಡಿರುವ ಭೂಗರ್ಭ ಜಲಮಟ್ಟ ಕುಸಿತ- ಇನ್ನಾದರೂ ಎಚ್ಚೆತ್ತುಕೊಳ್ಳದೇ ಇದ್ದಲ್ಲಿಕಾದಿದೆ ಭಾರೀ ದುರಂತ

   
        ಅವೈಜ್ಞಾನಿಕತೆ ಮತ್ತು ಮುಂಜಾಗರೂಕತೆಯಿಲ್ಲದೆ ಜಲ ದುರುಪಯೋಗ ಪಡಿಸಿರುವ ಪರಿಣಾಮ ಜಿಲ್ಲೆಯಲ್ಲಿ ಭೂಗರ್ಭ ಜಲ ಮುಗಿದುಹೋಗುವ ಭೀತಿ ಎದುರಿಸುತ್ತಿದೆ.
       ರಾಜ್ಯದಲ್ಲೇ ನೀರಿಲ್ಲದೇ ಇರುವ ಅತ್ಯಧಿಕ ಕೊಳವೆಬಾವಿಗಳಿರುವ ಜಿಲ್ಲೆ ಎಂಬ ಕುಖ್ಯಾತಿಯನ್ನೂ ಕಾಸರಗೋಡು ಹೊಂದಿದೆ. ಇದರ ಪರಿಣಾಮ ಶೀಘ್ರದಲ್ಲೇ ಬೃಹತ್ ದುರಂತಕ್ಕೆ ನಾಡು ಸಾಕ್ಷಿಯಾಗಲಿದೆ.
   ಅನಿಯಂತ್ರಿತವಾಗಿ, ಅವೈ ಜ್ಞಾಚ ನಿಕವಾಗಿ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆದ ಪರಿಣಾಮ ಪ್ರಕೃತಿಯ ಮೇಲೆ ಭಾರೀ ಅಡ್ಡಪರಿಣಾಮಬೀರಿದೆ. ಮಳೆಯ ನೀರು ಯಾವ ಕಾರಣಕ್ಕೂ ಭೂಮಿ ಸೇರುವ ಸಾಧ್ಯತೆಯೇ ಇಲ್ಲದಂತಾದುದೂ,
    ಭೂಗರ್ಭ ಜಲ ರೀಚಾರ್ಜ್ ನಡೆಯದಂತೆ ತಡೆದಿದೆ. ರಾಜ್ಯದಲ್ಲಿ ಮೊದಲ ಸಾಲಿನಲ್ಲಿ ಕಾಸರಗೋಡು ಜಿಲ್ಲೆ ಮತ್ತು ಎರಡನೇ ಸ್ಥಾನದಲ್ಲಿ ಪಾಲಕ್ಕಾಡ್ ಜಿಲ್ಲೆ ಅತಿ ಭೀಕರ ರೂಪದಲ್ಲಿ ನೀರಿನ ಕೊರತೆ ಅನುಭವಿಸುತ್ತಿವೆ.
    ಈ ಕುರಿತು ಅಧ್ಯಯನ ನಡೆಸಲು ಈ ತಿಂಗಳಲ್ಲಿ ಕೇಂದ್ರ ಸರಕಾರದ ಪರಿಣತರ ತಂಡ ಜಿಲ್ಲೆಗೆ ಆಗಮಿಸಲಿದೆ. ಇದರೊಂದಿಗೆ ಕೇಂದ್ರ ಸರಕಾರಿ ಯೋಜನೆಯಾಗಿರುವ ಜನಶಕ್ತಿ ಅಭಿಯಾನ್ ಪ್ರಕಾರ ಜಿಲ್ಲೆಯಲ್ಲಿ ಜಲಮಟ್ಟ ಹೆಚ್ಚಳಕ್ಕೆ ಚಟುವಟಿಕೆ ಏಕೀಕರಣಗೊಳಿಸಲು ಯೋಜನೆ ರಚಿಸಲಾಗುವುದು. ಇದಕ್ಕಾಗಿ ಜಿಲ್ಲಾ ಮಣ್ಣು ಸಂರಕ್ಷಣೆ ಇಲಾಖೆ ಅಧಿಕಾರಿ , ಬಡತನನಿವಾರಣೆ ವಿಭಾಗ ಮುಖ್ಯಸ್ಥರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಜೊತೆಗೆ ಜಲವಿನಿಯೋಗ ನಿಯಮ ಜಾರಿಗೆ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿಸಜಿತ್ ಬಾಬು ತಿಳಿಸಿರುವರು. 
      ಕೇಂದ್ರ ಜಲಶಕ್ತಿ ಮಂತ್ರಾಲಯ ವ್ಯಾಪ್ತಿಯಲ್ಲಿ ಗ್ರೌಂಡ್ ವಾಟ ರ್ ಸ್ಟಿಮೇಷನ್ ಕಮಿಟಿ(ಜಿ.ಇ.ಸಿ.) 2017ನೇ ವರದಿ ಪ್ರಕಾರ ಕಾಸರಗೋಡು ಬ್ಲೋಕ್ ನ ಶೇ 97.68 ಭೂಗರ್ಭ ಜಲ ಬಳಕೆಯಿಂದ ಮುಗಿದುಹೋಗಿದೆ. 2013ರಲ್ಲಿಇದು ಶೇ 90.52 ಆಗಿತ್ತು. ರಾಜ್ಯದಲ್ಲೇ ಇದು ಅತೀವ ಗಂಭೀರ ಸ್ಥಿತಿ ಎಂದು ಗುರುತಿಸಲಾಗಿದೆ. 2005ರಲ್ಲಿ ಕಾಸರಗೊಡು, ಕೋಯಿಕೋಡ್,ಚಿಟ್ಟೂರು(ಪಾಲಕ್ಕಾಡ್ ಜಿಲ್ಲೆ), ಕೊಡಂ?ಲ್ಲೂರು(ತ್ರಿಶೂರು), ಅತಿಯ್ನೂರು(ತಿರುವನಂತಪುರ) ಎಂಬ ಬ್ಲೋಕ್ ಗಳನ್ನು ಓವರ್ ಎಕ್ಸ್ ಪ್ಲಾಯಿಟೆಡ್ ವಲಯಗಳಾಗಿ ನಿಗದಿಪಡಿಸಲಾಗಿತ್ತು. 2017ನೇ ಇಸವಿಗೆ ತಲಪುತ್ತಿದ್ದಂತೆ ಕಾಸರಗೋಡು ಮತ್ತು ಚಿಟ್ಟೂರು ಉಳಿದು ಇತರ ಎಲ್ಲ ಬ್ಲೋಕ್ ಗಳು ನೀರಿನಬಳಕೆಯಲ್ಲಿ ಸುರಕ್ಷಿತ(ಸೇಫ್) ಸ್ಥಾನಕ್ಕೆ ತಲಪಿದ್ದುವು. 
       ದುರಾದೃಷ್ಟ ವಶಾತ್ ಕಾಸರಗೋಡು ಜಿಲ್ಲೆಯಲ್ಲಿ 2017ರ ಪರಿಸ್ಥಿತಿಯ ಗಣನೆ ಪ್ರಕಾರ ಮಂಜೇಶ್ವರ,ಕಾರಡ್ಕ, ಕಾಞÂ ಂಗಾಡ್ ಬ್ಲಾಕ್ ಗಳು ಸೆಮಿ ಕ್ರಿಟಿಕಲ್ ಹಂತದಲ್ಲಿವೆ. ಯಥಾಪ್ರಕಾರ ಶೇ 83.96, ಶೇ 82.03, ಶೇ 77.67ಗಳಂತೆ ಈ ಬ್ಲೋಕ್ ಗಳ ಭೂಗರ್ಭ ಜಲ ಬಳಕೆ ನಡೆದಿದೆ. ಜಿಲ್ಲೆಯ ನೀಲೇಶ್ವರ,ಪರಪ್ಪಬ್ಲೋಕ್ ಗಳುಮಾತ್ರ ಸುರಕ್ಷ ಸ್ಥಾನದಲ್ಲಿದ್ದುವು. 2005ರಲ್ಲಿ ಶೇ 57.57, ಶೇ 5.34 ರಂತೆ ಇದ್ದ ಬೂರ್ಘಬ ಜಲ ಬಳಕೆ, 2017ರ ವೇಳೆಗೆ ಶೇ 69.52, ಶೇ 66.97 ಆಗಿ ಹೆಚ್ಚಳಗೊಂಡಿತ್ತು. ಈ ವಲಯಗಳೂ ಈ ವರ್ಷದಲ್ಲಿ ಸೆಮಿ ಕ್ರಿಟಿಕಲ್ ಹಂತಕ್ಕೆ ತಲಪಿವೆ ಎಂದು ಹೈಡ್ರಾಲಜಿಸ್ಟ್ ಬಿ.ಷಾಬಿ ಅವರು ಕಳಕಳಿ ವ್ಯಕ್ತಪಡಿಸುತ್ತಾರೆ.
      ಉದ್ದಿಮೆ ಘಟಕಗಳು ಕಡಿಮೆಯಿರುವ ಕಾಸರಗೋಡು ಜಿಲ್ಲೆಯಲ್ಲಿ ಜಲ ಕೊರತೆಗೆ ಅವೈ ಜ್ಞಾ ನಿತೆ ಮತ್ತು ಕೃಷಿಗಾಗಿ ಅನಿಯಂತ್ರಿತ ನೀರಿನ ಬಳಕೆ ಪ್ರಧಾನಕಾರಣ ಎಂದು ಅವರು ಆರೋಪಿಸುತ್ತಾರೆ. ಕಾರಡ್ಕ ಬ್ಲಾಕ್ ನಲ್ಲಿ ಭೂಗರ್ಭ ಜಲದ ಉದ್ದಿಮೆ ಸಂಬಂಧ ಬಳಕೆ ಶೇ 3.479 ಹೆಕ್ಟೇರ್ ಮೀಟರ್, ಗೃಹ ಬಳಕೆ ಶೇ 690.713 ಆಗಿದ್ದು, ಕೃಷಿ ನೀರಾವರೀಗೆ ಶೇ 3585.89 ಹೆಕ್ಟೇರ್ ಮಿಟರ್ ಆಗಿದೆ. ಮಂಜೇಶ್ವರದಲ್ಲಿ ಗೃಹ ಬಳಕೆ ಶೇ 1174.18 ಮತ್ರವಿದ್ದು, ನೀರಾವರಿಗೆ ಶೇ 5769.94 ಹೆಕ್ಟೇರ್ ಮೀಟರ್ ಭೂಗರ್ಭ ಜಲ ಬಳಕೆಯಾಗಿದೆ. ಕಾ?ಂಗಾಡ್ ನಲ್ಲಿ ಗೃಹ ಬಳಕೆ 1199.029, ಕೃಷಿ ನೀರಾವರಿಗೆ ಶೇ 3970.95 ಹೆಕ್ಟೇರ್ ಮೀಟರ್ ಆಗಿದೆ.
     ಪ್ರಧಾನವಾಗಿ ಅಡಕೆ ತೋಟಗಳಲ್ಲಿ ನೀರಾವರಿ ಅನಿಯಂತ್ರಿತ ರೂಪದಲ್ಲಿ ನಡೆದಿದೆ. ಕೊಳವೆಬಾವಿಗಳು ಮತ್ತು ನದಿಜಲ ವ್ಯಾಪಕವಾಗಿ ದುರುಪಯೋಗಕ್ಕೆ ಈಡಾಗಿವೆ. ಭೂಗರ್ಭ ಜಲ ರೀಚಾಜಿರ್ಂಗ್ ವಿಧಾನ ದುರ್ಬಲವಾಗಿರುವಹಿನ್ನೆಲೆಯಲ್ಲಿ ಕೃತಕ ರೀಚಾಜಿರ್ಂಗ್ ರೀತಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ ಎಂದು ಷಾಬಿ ತಿಳಿಸುತ್ತಾರೆ.
    ಇನ್ನಾದರೂ ಮಳೆನೀರನ್ನು ಭೂಮಿಗಿಳಿಯುವಂತೆ ಮಾಡುವ ಯತ್ನಕ್ಕೆ ತೊಡಗದೇ ಇದ್ದರೆ ಜಿಲ್ಲೆ ತಡವಿಲ್ಲದೆ ಭಾರೀ ದುರಂತಕ್ಕೆ ವೇದಿಕೆಯಾಗಲಿದೆ ಎಂದು ಅವರು ಮುನ್ನೆಚ್ಚರಿಕೆ ನೀಡುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries