HEALTH TIPS

ಕೋಳಿ ತ್ಯಾಜ್ಯ ಸಂಸ್ಕರಣೆ ಘಟಕದ ವಿರುದ್ಧ ಸ್ಥಳೀಯರ ಪ್ರತಿಭಟನೆ

     
       ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ಬೆರಿಪದವು ಬಳ್ಳೂರು ಅಂಗನವಾಡಿ ಬಳಿಯಲ್ಲಿ ಕೋಳಿ ತ್ಯಾಜ್ಯ ಸಂಸ್ಕರಣೆ ಘಟಕದಿಂದ ಪರಿಸರ ನಿವಾಸಿಗಳ ಆರೋಗ್ಯಕ್ಕೆ ಮಾರಕವಾಗಿದ್ದು ಇದನ್ನು ಮುಚ್ಚ ಬೇಕೆಂದು ಸ್ಥಳೀಯರು ಇತ್ತೀಚೆಗೆ ಪೈವಳಿಕೆ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ ಉದ್ಘಾಟಿಸಿ ಮಾತನಾಡಿದರು.
      ಸಾರ್ವಜಕರ ಆರೋಗ್ಯಕ್ಕೆ ಮಾರಕವಾಗಿರುವ ಈ ಘಟಕವನ್ನು ತಕ್ಷಣ ಮುಚ್ಚಬೇಕು.ಇಲ್ಲದಿದ್ದಲ್ಲಿ ಘಟಕದ ಮುಂದೆ ಮುಚ್ಚುವ ತನಕ ಸರಣಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
     ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ಆರ್. ಜಯಾನಂದ ಮಾತನಾಡಿ ಸಂಸ್ಕರಣೆ ಘಟಕದ ಪರವಾನಿಗೆ ರದ್ದುಪಡಿಸಿ ಸ್ಥಳೀಯರ ಆರೋಗ್ಯವನ್ನು ಕಾಪಾಡ ಬೇಕೆಂಉ ಅಧಿಕಾರಿಗಳಲ್ಲಿ ವಿನಂತಿಸಿದರು.
     ಗಾ.ಪಂ. ಸದಸ್ಯೆ ಕೆ. ಜಯಲಕ್ಷ್ಮೀ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸದಸ್ಯ ಪ್ರಸಾದ್ ರೈ ಕಯ್ಯಾರ್, ಗ್ರಾ.ಪಂ. ಸದಸ್ಯರಾದ ಬಶೀರ್ ದೇವಕಾನ, ಚನಿಯ ಕೊಮ್ಮಂಗಳ, ಹರೀಶ್ ಬೊಟ್ಟಾರಿ, ಎಸ್.ಸುಬ್ರಹ್ಮಣ್ಯ ಭಟ್, ಕಿಶೊರ್ ಕುಮಾರ್ ಪೆರ್ವಡಿ, ಗಣೇಶ ಕುಲಾಲ್, ರಹೀಂ ನಡುಮನೆ, ತಾರಾ ವಿ. ಶೆಟ್ಟಿ, ಭವ್ಯಾ ಬಾಯಾರು ಪ್ರತಿಭಟನೆಗೆ ನೇತೃತ್ವ ನೀಡಿದರು. ರಾಮಪ್ರಕಾಶ್ ಭಟ್ ಸ್ವಾಗತಿಸಿ, ಪುರುಷೋತ್ತಮ ಬಳ್ಳೂರು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries