ಕುಂಬಳೆ: ಸಮಸ್ಯೆ ಅನುಭವಿಸುತ್ತಿರುವ ಹಜ್ಜ್ ತೀರ್ಥಾಟಕರಿಗೆ ಒಐಸಿಸಿ ಹಜ್ಜ್ ಸ್ವಯಂಸೇವಕರ ಕಾರ್ಯಾಚರಣೆ ಜಿದ್ದಾ ಮಿನಾಯಿಯಲ್ಲಿ ಪ್ರಗತಿ ಹಂತದಲ್ಲಿದೆ. ದಾರಿ ತಪ್ಪಿದ ಹಲವಾರು ಹಜ್ಜಿಗಳಿಗೆ ಮಾರ್ಗದರ್ಶನ ನೀಡಿ, ವೃದ್ಧಾಪ್ಯ ಕಾರಣ, ಶಾರೀರಿಕ ಅಸ್ವಸ್ಥತೆಗಳಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಗಾಲಿಕುರ್ಚಿಯಲ್ಲಿ ಸೇವೆ ನೀಡಿ, ವೈದ್ಯಕೀಯ ಸೇವೆ ಲಭ್ಯಗೊಳಿಸಿ, ತಂಪುಪಾನೀಯಗಳನ್ನು ವಿತರಿಸಿ, ಸ್ವಯಂಸೇವಕರು ಇನ್ನಿರುವ ಎರಡು ದಿನಗಳಲ್ಲಿ ಮೀನಾಯಿಯಲ್ಲಿ ಇರಲಿದೆ ಎಂದು ಸೌದಿ ರೀಜನಲ್ ಸಮಿತಿ ಅಧ್ಯಕ್ಷ ಕೆಟಿಎ ಮುನೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಹಜ್ ಮಿಶನ್ನ ನಿರ್ದೇಶನಗಳ ಅನುಸಾರ ಸ್ವಯಂಸೇವಕರು ಕಾರ್ಯಾಚರಿಸುತ್ತಿದ್ದಾರೆ. ಒಮ್ಮಾಂ, ರಿಯಾದ್, ಜಿಸಾನ್, ಅಬಹ ಮೊದಲಾದ ಸ್ಥಳಗಳಲ್ಲಿ ಸ್ವಯಂಸೇವಕರ ಸಹಿತ ಮುನ್ನೂರಕ್ಕಿಂತ ಹೆಚ್ಚು ಮಂದಿ ಒಐಸಿಸಿ ಕಾರ್ಯಕರ್ತರು ಸೆಲ್ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವಾಗ ನೂರಾರು ಮಂದಿ ವಿವಿಧ ಸಂಘಟನೆಗಳ ಒಕ್ಕೂಟವಾದ ಹಜ್ಜ್ ವೆಲ್ಫೇರ್ ಫಾರಂನ ಅಧೀನದಲ್ಲಿ ಸೇವಾ ರಂಗದಲ್ಲಿರುವುದಾಗಿ ಒಐಸಿಸಿ ಹಜ್ಜ್ ಸಎಲ್ ಅಧ್ಯಕ್ಷ ಮುನೀರ್ ತಿಳಿಸಿದ್ದಾರೆ. ಮುಖ್ಯ ಸಂಯೋಜಕ ಶುಕೂರು ವಕ್ಕಂ, ಸಂಚಾಲಕ ಸಹೀರ್ ಮಾತ್ತಾಲಿ, ಸಂಯೋಜಕರಾದ ರಫೀಖ್ ಮೂಸಾ ಇರಿಕ್ಕೂರು, ಸಿ. ಸಿ. ಶಂಶು, ಜನರಲ್ ಕ್ಯಾಪ್ಟನ್ ಹಾಶಿಂ ಕೋಝಿಕ್ಕೊಡು, ಸಮೀರ್ ನದ್ವಿ, ಹರ್ಷಾದ್ ಹೇರೂರು, ಎಂ. ಎಚ್. ಆರಿಸ್ ಶೇಣಿ, ನಿಶಾದ್ ಕೊಪ್ಪರಂಬಿಲ್, ಕೆ. ವಹಾಬ್, ಕೆ. ಅಬ್ದುಲ್ ಜಲೀಲ್, ಅರ್ಶಾದ್, ಶಾಹುಲ್, ದಮ್ಮಾಂ ಒಐಸಿಸಿಯ ಎ. ಮುಹಮ್ಮದ್ ಅಜಾಸ್, ಎಂ. ಫಝಲುದ್ದೀನ್, ಹೊರರಾಜ್ಯಗಳ ಸಂಯೋಜಕರಾದ ಅಶ್ರಫ್ ಯಾಕೂಬ್, ಮುಬೀನ್ ಅಬ್ದುಲ್ ಹಮೀದ್, ಹುಸೈನ್ ಮುಲ್ಲ, ಅಬ್ದುಲ್ಲ ಬೋರ, ಮುಹಮ್ಮದ್ ಆಸಿಫ್ ಖಾನ್, ಶಾನವಾಜ್ ಹುಸೈನ್, ಮುಹಮ್ಮದ್ ಸಿರಾಜ್ ಮೊದಲಾದವರ ನೇತೃತ್ವದಲ್ಲಿ 24 ಗಂಟೆಗಳ ಕಾಲ ವಿವಿಧ ಶಿಫ್ಟ್ಗಳಲ್ಲಾಗಿ ಒಐಸಿಸಿ ಸ್ವಯಂಸೇವಕರು ಮೀನಯಿಯಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಹಜ್ಜ್ ವೆಲ್ಫೇರ್ ಫಾರಂನ ಅಧೀನದಲ್ಲಿರುವ ಒಐಸಿಸಿ ಸ್ವಯಂಸೇವಕರು ಪ್ರಧಾನ ಕಾರ್ಯದರ್ಶಿ ಮಮ್ಮದ್ ಪೊನ್ನಾನಿ, ಟಿ. ಕೆ. ಅಶ್ರಫ್, ಕೆ. ಮುರ್ಶಾದ್, ಸಿಯಾನ್ ವಲ್ಲಾಂಚಿರ ಎಂಬಿವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಈ ಹಿಂದೆ ಜಿದ್ದಾದಲ್ಲಿ ಇವರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಜೋಶಿ ವರ್ಗೀಸ್, ಶಿನೋಯ್ ಕಡಲುಂಡಿ, ಇಸ್ಮಾಯಿಲ್ ಚೋಕ್ಕೋಡ್, ಅಫಾನ್ ಎಂಬಿವರು ನೇತೃತ್ವ ನೀಡಿದರು. ವಿವಿಧ ಆಸ್ಪತ್ರೆಗಳನ್ನು ಕೇಂದ್ರೀಕರಿಸಿ ಒಐಸಿಸಿ ಮೆಡಿಕಲ್ ವಿಂಗ್ಗೆ ಸೌದಿ ಒಐಸಿಸಿ ಹಜ್ಜ್ ಸೆಲ್ ಪ್ರಧಾನ ಸಂಚಾಲಕ ಶನಿಯಾಸ್ ಕುನ್ನಿಕ್ಕೋಡು, ಸಂಚಾಲಕ ಶಾಜಿ ಚುನಕ್ಕೆರೆ ಎಂಬಿವರು ಸಏವೆ ಸಲ್ಲಿಸುತ್ತಿದ್ದಾರೆ.


