HEALTH TIPS

ಪೆರಡಾಲ ಸೇವಾಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಸಹಕಾರ ಭಾರತಿ ಅವಿರೋಧ ಆಯ್ಕೆ- ಜಯದೇವ ಖಂಡಿಗೆ ಅಧ್ಯಕ್ಷರಾಗಿ ಪುನರಾಯ್ಕೆ


      ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬೇಂಕ್‍ನ ಆಡಳಿತ ಮಂಡಳಿಗೆ ಸಹಕಾರ ಭಾರತಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಜಯದೇವ ಖಂಡಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಗಣಪತಿ ಪ್ರಸಾದ ಕುಳಮರ್ವ ಉಪಾಧ್ಯಕ್ಷರಾಗಿಯೂ, ನಿರ್ದೇಶಕರಾಗಿ ಶ್ರೀಕೃಷ್ಣ ಭಟ್ ಪುದುಕೋಳಿ, ಶಂಕರನಾರಾಯಣ ಶರ್ಮ ನಿಡುಗಳ, ಶ್ರೀಕೃಷ್ಣ ಭಟ್ ವಳಕ್ಕುಂಜ, ಸುಬ್ರಹ್ಮಣ್ಯ ಏನಂಕೂಡ್ಲು, ಶ್ಯಾಮಭಟ್ ಕೆ.ಮಲ್ಲಡ್ಕ, ರವಿಕಾಂತ ಕೇಸರಿ ಕಡಾರು, ಸ್ವರ್ಣಲತಾ ಸಿ.ಎಸ್., ಪ್ರೇಮ ಕುಮಾರಿ, ಜಯಂತಿ ವಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ಮಣಿಕಂಠನ್ ಅವರು ಬುಧವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಆಡಳಿತ ಮಂಡಳಿಯ ಆಯ್ಕೆ ಪ್ರಕಟಿಸಿದ್ದರು. ಕಾರ್ಯದರ್ಶಿ ಅಜಿತ ಕುಮಾರಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries