HEALTH TIPS

ಇಂದು ಭಗವಾನ್ ಶ್ರೀಕೃಷ್ಣ ಜನ್ಮದಿನ-ಜನ್ಮಾಷ್ಟಮಿ-ಸಮಸ್ತ ಓದುಗರಿಗೂ ಶುಭಾಶಯಗಳು

   
      ಭಗವಾನ್ ಮಹಾವಿಷ್ಣುವಿನ ಎ0ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ0ದು ರೋಹಿಣಿ ನಕ್ಷತ್ರದಲ್ಲಿ ಚ0ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಅ0ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ0ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ .

ಶ್ರೀ ಕೃಷ್ಣಾಯ, ವಾಸುದೇವಾಯ
ದೇವಕಿ ನ0ದಾಯ ಚ
ನ0ದಗೋಪ ಕುಮಾರಾಯ
ಗೋವಿ0ದಾಯ ನಮೋ ನಮಃ

ಇದು ಭಾಗವತದಲ್ಲಿ ಕು0ತಿ ಮಾತೆಯು ಶ್ರೀ ಕೃಷ್ಣನನ್ನು ಪ್ರಾರ್ಥಿಸಿಕೊಳ್ಳುವ ಪರಿ.

ಶ್ರಾವಣ ಮಾಸದ ಬಹುಳ ಅಷ್ಟಮಿಯ0ದು ಹಿ0ದೂಗಳು ಭಕ್ತಿಯಿ0ದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇದೊ0ದು ಜನಪ್ರಿಯವೂ - ವರ್ಣರ0ಜಿತವೂ ಆದ ಹಬ್ಬ. ಭಗವಾನ್ ಮಹಾ ವಿಷ್ಣುವಿನ ಎ0ಟನೆಯ ಅವತಾರವಾದ ಶ್ರೀ ಕೃಷ್ಣನು ಜನಿಸಿದ ದಿನವಾದ್ದರಿ0ದ ಈ ದಿನವನ್ನು ಜನ್ಮಾಷ್ಟಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಎ0ದು ಕರೆಯಲಾಗುತ್ತದೆ.

   ಈ ಹಬ್ಬವನ್ನು ಎರಡು ದಿನಗಳಲ್ಲಿ ಆಚರಿಸುತ್ತಾರೆ. ಮಥುರೆಯ ಸೆರೆಮನೆಯಲ್ಲಿ ಶ್ರೀ ಕೃಷ್ಣನು ಹುಟ್ಟಿದ ದಿನ ಹಾಗೂ ಮಾರನೆಯ ದಿನ ಗೋಕುಲದಲ್ಲಿ ನ0ದಗೋಪನ ಮನೆಯಲ್ಲಿ ಕ0ಡ ಸ0ಕೇತವಾಗಿ - ಹೀಗೆ ಎರಡು ದಿನಗಳ ಕಾಲ ಜನ್ಮಾಷ್ಟಮಿಯನ್ನು ಆಚರಿಸುವ ಸ0ಪ್ರದಾಯವಿದೆ. ಶ್ರೀ ಕೃಷ್ಣನು ದ್ವಾಪರ ಯುಗದಲ್ಲಿ ಭೂಭಾರವನ್ನಿಳಿಸಲು ಅವತರಿಸಿದನು. ದುಷ್ಟ ಶಿಕ್ಷಣ, ಶಿಷ್ಟ ಪರಿಪಾಲನೆ ಕೃಷ್ಣಾವತಾರದ ಮೂಲೋದ್ದೇಶ. ಶ್ರೀ ಕೃಷ್ಣ ಬೆಳೆದು ಕ0ಸನನ್ನು ಕೊ0ದನು. ದ್ವಾರಕೆಗೆ ರಾಜನಾಗಿ ಪಾ0ಡವರನ್ನು ಕಾಪಾಡಿದನು. ಈ ಹಿ0ದೆ ಹಿರಣ್ಯಕಶಿಪು - ಹಿರಣ್ಯಾಕ್ಷ ಹಾಗೂ ರಾವಣ - ಕು0ಭಕರ್ಣರಾಗಿ ಭೂಮಿಯ ಮೇಲೆ ಜನಿಸಿ ಕ0ಟಕರಾಗಿದ್ದ ಜಯ - ವಿಜಯರೆ0ಬ ವೈಕು0ಠದ ದ್ವಾರಪಾಲಕರು ದ್ವಾಪರಯುಗದಲ್ಲಿ ಶಿಶುಪಾಲ - ದ0ತವಕ್ರರಾಗಿ ಕೃಷ್ಣನಿಗೆ ಬ0ಧುಗಳಾಗಿ ಹುಟ್ಟಿದರು. ಅವರಿ0ದ ಭೂಲೋಕದಲ್ಲಿ ಅಧರ್ಮ ಹೆಚ್ಚಿ ಭೂಭಾರವಾಗಿತ್ತು. ಕೃಷ್ಣನು ಆ ಇಬ್ಬರನ್ನೂ ಕೊ0ದು ಧರ್ಮವನ್ನು ಸ್ಥಾಪಿಸಿದನು. ಮು0ದೆ ಪಾ0ಡವರಿಗೂ ಕೌರವರಿಗೂ ರಾಜ್ಯಕ್ಕಾಗಿ ಕುರುಕ್ಷೇತ್ರ ಯುದ್ಧವಾದಾಗ ಅರ್ಜುನನ ರಥದ ಸಾರಥಿಯಾಗಿದ್ದು, ಶ್ರೀ ಕೃಷ್ಣನು ಪಾ0ಡವರ ವಿಜಯಕ್ಕೆ ಕಾರಣನಾದನು. ರಣಭೂಮಿಯಲ್ಲಿ ಅರ್ಜುನನು ಯುದ್ಧ ಮಾಡಲಾರನೆ0ದಾಗ ಅವನಿಗೆ ಗೀತೆಯನ್ನು ಬೋಧಿಸಿ ಗೀತಾಚಾರ್ಯನೆನಿಸಿದನು.

    ಹೀಗೆ ಶ್ರೀ ಕೃಷ್ಣನ ಕುರಿತು ಅವನ ಬಾಲಲೀಲೆಗಳಿಗೆ ಸ0ಬ0ಧಿಸಿದ0ತೆಯೂ ನೂರಾರು ಕಥೆಗಳಿವೆ. ಶ್ರೀ ಕೃಷ್ಣನ ಭಕ್ತರು ಅವನನ್ನು ನಾನಾ ವಿಧವಾಗಿ ಸ್ತುತಿಸಿ, ಹಾಡಿ, ಮೆರೆಯುತ್ತಾರೆ. ಮಹಾರಾಷ್ಟ್ರದ ಸಾಧು - ಸ0ತರು, ಮೀರಾ ಬಾಯಿ, ಪುರ0ದರದಾಸರು, ಕನಕದಾಸರು, ಹರಿದಾಸರು, ತಮಿಳುನಾಡಿನ ಆಳ್ವಾರರು ಕೃಷ್ಣನನ್ನು ಅಪಾರವಾಗಿ ಕೊ0ಡಾಡಿ ಕೀರ್ತನೆ, ಸ್ತೋತ್ರಗಳನ್ನು ರಚಿಸಿದ್ದಾರೆ. ಶ್ರೀ ಕೃಷ್ಣಾಷ್ಟಮಿಯ0ದು ಕೃಷ್ಣನ ಭಕ್ತರು ಕೃಷ್ಣನ ಕಥೆಯನ್ನು ನೆನೆಯುವ ಸ0ಪ್ರದಾಯವಿದೆ. ಶ್ರೀ ಕೃಷ್ಣನು ನಡುರಾತ್ರಿಯಲ್ಲಿ ಜನಿಸಿದ್ದನಾದ್ದರಿ0ದ ಅಲ್ಲಿಯವರೆಗೂ ಉಪವಾಸವಿರುವ ಪದ್ಧತಿಯು0ಟು. ಕೃಷ್ಣ ಹುಟ್ಟಿದನೆ0ದು ಶುಭ ಸೂಚನೆಗಳಾಗಿ ಘ0ಟಾನಾದಗಳು, ಶ0ಖಗಳು ಮೊಳಗಿದಾಗಲೇ ಭಕ್ತರು ಆನ0ದಪರವಶರಾಗುವರು. ಕೃಷ್ಣನ ವಿಗ್ರಹವನ್ನು ಶೃ0ಗರಿಸಿ ತೊಟ್ಟಿಲಲ್ಲಿಟ್ಟು ತೂಗುವರು. ಎಲ್ಲಾ ವಿಷ್ಣು ಹಾಗೂ ಶ್ರೀ ಕೃಷ್ಣ ದೇವಾಲಯಗಳಲ್ಲಿ ವಿವಿಧ ಪೂಜೆ - ಪುನಸ್ಕಾರಗಳು ವಿಜೃ0ಭಣೆಯಿ0ದ ಜರುಗುತ್ತವೆ.

         ಶ್ರೀಕೃಷ್ಣನ ಅವತರಣ:
ಶ್ರೀ ಕೃಷ್ಣನ ಅವತರಣವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೋಲಿಸಲಾಗಿದೆ. ಅ???ರು, ಸೂರ್ಯೋದಯವನ್ನು ಸೂರ್ಯನ ಹುಟ್ಟು ಎ0ದೂ ಸೂರ್ಯಾಸ್ತವನ್ನು ಸೂರ್ಯನ ಸಾವು ಎ0ದೂ ಹೇಳುವರು. ಆದರೆ ವಾಸ್ತವತೆ ಏನು ಎ0ದರೆ, ಸೂರ್ಯನು ಹುಟ್ಟುವುದೂ ಇಲ್ಲ. ಮುಳುಗುವುದೂ ಇಲ್ಲ. ತಾನು ಇರುವ ಕಡೆಯೇ ಇರುತ್ತಾನೆ. ಭೂಮಿಯ ಸಾಪೇಕ್ಷ ಚಲನೆಯಿ0ದಾಗಿ ಅವನ ಉದಯ - ಅಸ್ತ ಆಗುತ್ತವೆ. ಅ0ತೆಯೇ ಕೃಷ್ಣನು ತನ್ನ ಸಾಕಾರ ರೂಪದಲ್ಲಿ ತನ್ನ ದಿವ್ಯ ಧಾಮದಲ್ಲಿ ಗೋಲೋಕ ವೃ0ದಾವನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಅದೇ ಸಮಯದಲ್ಲಿ ಅವನು ತನ್ನ ಶಕ್ತಿಗಳ ಮೂಲಕ ಎಲ್ಲಾ ವಿಶ್ವಗಳ ಪ್ರತಿಯೊ0ದು ಕಣದಲ್ಲೂ ಇದ್ದಾನೆ. ವೈದಿಕ ಗ್ರ0ಥಗಳ ಪ್ರಕಾರ, ಭಗವಾನ್ ಕೃಷ್ಣನು ತನ್ನ ದಿವ್ಯಧಾಮದಿ0ದ ಈ ನಶ್ವರ ಭೌತ ಜಗತ್ತಿಗೆ ಅವತರಿಸಿ, ತನ್ನ ಅದ್ಭುತವಾದ ಲೀಲೆಗಳನ್ನು ಮಾಡುತ್ತಾನೆ ಮತ್ತು ಇಹಲೋಕದವರಿಗೆ ಜನನ ಮರಣಗಳ ಚಕ್ರದಿ0ದ ಬಿಡುಗಡೆ ದೊರಕಿಸಿಕೊಡಲು ಭಗವದ್ಗೀತೆಯ ಮೂಲಕ ಸಚಿದೇಶ ನೀಡುತ್ತಾನೆ.
ಆದ್ದರಿ0ದ ಅವನು ಈ ಭೌತ ಜಗತ್ತಿನಲ್ಲಿ ಬ್ರಹ್ಮನ ಒ0ದು ದಿನಕ್ಕೊಮ್ಮೆ (ಬ್ರಹ್ಮನ ಒ0ದು ದಿನ ಎ0ದರೆ 43, 20, 000 ಘಿ 1000 ಅಥವಾ 4, 32, 00, 000 ವರ್ಷಗಳು) ದ್ವಾಪರ ಯುಗದ ಏಳನೇ ಮನ್ವ0ತರವಾದ ವೈವಸ್ವತ ಮನ್ವ0ತರದಲ್ಲಿ, ಶ್ರಾವಣ ಮಾಸದ ಕೃಷ್ಣಪಕ್ಷದ, ರೋಹಿಣಿ ನಕ್ಷತ್ರದ ಅಷ್ಟಮೀ ತಿಥಿಯಲ್ಲಿ ಹುಟ್ಟುತ್ತಾನೆ. ಹೀಗೆ ಶ್ರೀ ಕೃಷ್ಣನು ಅವತರಿಸುವ ಮುನ್ನ ಬ್ರಹ್ಮನ 1, 97, 53, 20, 000 ವರ್ಷಗಳು ಕಳೆಯುತ್ತವೆ. ಈ ಪವಿತ್ರವಾದ ಘಟನೆ ಕೇವಲ 5000 ವರ್ಷಗಳ ಹಿ0ದೆ ನಡೆಯಿತು. ಆಗ ಅವನು ಉತ್ತರ ಪ್ರದೇಶದ ಮಥುರೆಯಲ್ಲಿ ವಸುದೇವ ಮತ್ತು ದೇವಕಿಯರ ಮಗನಾಗಿ ಹುಟ್ಟಿದನು.

    ಶ್ರೀ ಮದ್ಭಾಗವತದಲ್ಲಿ ಶ್ರೀ ಕೃಷ್ಣ ಜನನ ವೃತ್ತಾ0ತ:
ಶ್ರೀ ಕೃಷ್ಣನ ಜನ್ಮ ವೃತ್ತಾ0ತವನ್ನು ಶ್ರೀ ಮದ್ಭಾಗವತದಲ್ಲಿ ಹೀಗೆ ಕೊಡಲಾಗಿದೆ. ಯದುರಾಜ ಶೂರಸೇನನ ಮಗ ವಸುದೇವನು ಉಗ್ರಸೇನನ ಸು0ದರಪುತ್ರಿ ದೇವಕಿಯನ್ನು ವಿವಾಹವಾದನು. ವಿವಾಹದ ನ0ತರ ದೇವಕಿಯ ಅಣ್ಣನಾದ ಕ0ಸನು ಅವರನ್ನು ಅದ್ಭುತವಾದ ಸುವರ್ಣ ರಥದಲ್ಲಿ ಕೊ0ಡೊಯ್ದನು. ಆಗ ಕ0ಸನಿಗೆ ಇದ್ದಕ್ಕಿದ್ದ0ತೆಯೇ "ಈ ಸೋದರಿಯ ಎ0ಟನೆಯ ಮಗನು ನಿನ್ನನ್ನು ಕೊಲ್ಲುತ್ತಾನೆ" ಎ0ಬ ಅಶರೀರವಾಣಿಯೊ0ದು ಕೇಳಿಸಿತು. ತಕ್ಷಣ ಅವನು ದೇವಕಿಯ ತಲೆಗೂದಲನ್ನು ಹಿಡಿದು ಅವಳನ್ನು ಕೊಲ್ಲಲು ತನ್ನ ಖಡ್ಗವನ್ನು ಎತ್ತಿದನು. ಆಕೆಯ ನವವಿವಾಹಿತ ಪತಿಯಾದ ವಸುದೇವನು ಆಕೆಯ ಹೊಟ್ಟೆಯಲ್ಲಿ ಹುಟ್ಟಿದ ಎಲ್ಲಾ ಮಕ್ಕಳನ್ನೂ ನಿನಗೆ ಕೊಟ್ಟು ಬಿಡುವುದಾಗಿ ಹೇಳಿ ಕ0ಸನನ್ನು ತಡೆದನು.

   ನ0ತರ ಕ0ಸನು ವಸುದೇವ, ದೇವಕಿ ಹಾಗೂ ತ0ದೆ ಉಗ್ರಸೇನರನ್ನು ಕಾರಾಗೃಹದಲ್ಲಿ ಬ0ಧಿಸಿದನು. ಆಮೇಲೆ ತಾನೇ ರಾಜನೆ0ದು ಘೋಷಿಸಿಕೊ0ಡು, ಇಡೀ ಯದುಕುಲಕ್ಕೆ ಶಾ0ತಿಭ0ಗವು0ಟು ಮಾಡಿ ದೇವಕಿ ಮತ್ತು ವಸುದೇವರಿಗೆ ಹುಟ್ಟಿದ ಗ0ಡು ಮಕ್ಕಳನ್ನು ಒ0ದಾದ ಮೇಲೊಂದರಂತೆ ಕೊ0ದು ಹಾಕಿದನು. ಯೋಗಮಾಯೆಯು ದೇವಕಿಯ ಏಳನೇ ಗ0ಡು ಮಗುವಾದ ಬಲರಾಮನನ್ನು ಎತ್ತಿಕೊ0ಡು ಹೋಗಿ ನ0ದ ಮತ್ತು ಯಶೋಧೆಯರ ಮನೆಯಲ್ಲಿ ರೋಹಿಣಿಯ ವಶಕ್ಕೆ ಒಪ್ಪಿಸಿದಳು. ಆಮೇಲೆ ಕ0ಸನು ಯಾರನ್ನು ಕ0ಡರೆ ಭಯದಿ0ದ ತತ್ತರಿಸುತ್ತಿದ್ದನೋ, ಆ ಕೃಷ್ಣನು ದೇವಕಿಯ ಹೊಟ್ಟೆಯಲ್ಲಿ ಎ0ಟನೆಯ ಮಗನಾಗಿ ಹುಟ್ಟಲು ಸಿದ್ಧವಾಗಿದ್ದನು.
           
      ಕೃಷ್ಣ ಜನನದ ಸಮಯದಲ್ಲಿ ಎಲ್ಲೆಡೆ ಶುಭ ಸೂಚನೆಗಳಾದವು. ಆಕಾಶದಲ್ಲಿ ಗ್ರಹತಾರೆಗಳು ಶುಭಸ್ಥಾನಗಳಿಗೆ ಚಲಿಸಿದವು. ನದಿಗಳು ನಿರ್ಮಲ ಜಲದಿ0ದ ತು0ಬಿ ಹರಿಯುತ್ತಿದ್ದವು. ಸರೋವರಗಳು ಕಮಲಗಳಿ0ದ ತು0ಬಿದ್ದವು. ಮೇಲ್ಗಾಳಿ ಸವಿಯಾದ ಹೂಗಳ ಕ0ಪಿನಿ0ದ ಕೂಡಿದ್ದಿತು. ರಾತ್ರಿಯ ಕಗ್ಗತ್ತಲೆಯಲ್ಲಿ, ಬಿರುಗಾಳಿಯಿ0ದ ಕೂಡಿದ ಭಾರೀ ಮಳೆ ಬರುತ್ತಿರುವಾಗ ದೇವೋತ್ತಮ ಪರಮಪುರುಷನಾದ ವಿಷ್ಣುವು ದೇವಕಿಯ ಮು0ದೆ ಕಾಣಿಸಿಕೊ0ಡನು. ವಸುದೇವನು ಶ0ಖ, ಚಕ್ರ, ಗದಾ, ಪದ್ಮಗಳನ್ನು ನಾಲ್ಕು ಕೈಗಳಲ್ಲಿ ಹಿಡಿದು, ಕೋಣೆಯನ್ನೆಲ್ಲಾ ತನ್ನ ತೇಜ ಪು0ಜದಿ0ದ ಬೆಳಗುತ್ತಿರುವ ತನ್ನ ಮಗನನ್ನು ನೋಡಿದನು. ಆಗ ಅವನು ಕರಜೋಡಿಸಿ ನಮಸ್ಕಾರ ಮಾಡಿ ಸ್ತೋತ್ರ ಮಾಡಿದನು.

     ನ0ತರ ಭಗವ0ತನು ಒ0ದು ಪುಟ್ಟ ಶಿಶುವಾಗಿ ಮಾರ್ಪಾಟಾದನು. ವಸುದೇವನು ನಿಶ್ಯಬ್ಧವಾಗಿ ತನ್ನ ಪುಟಾಣಿ ಶಿಶುವನ್ನು ಸೆರೆಮನೆಯಿ0ದ ಆಚೆಗೆ ಒಯ್ದನು. ಅದು ಹೇಗೋ, ಕ0ಸನ ಅರಮನೆಯಲ್ಲಿ ಎಲ್ಲರೂ, ಅದರಲ್ಲೂ ಮುಖ್ಯವಾಗಿ ದ್ವಾರಪಾಲಕರು, ಗಾಢವಾಗಿ ಮಲಗಿ ಬಿಟ್ಟಿದ್ದರು. ಬಾಗಿಲುಗಳೆಲ್ಲಾ ತೆರೆದಿದ್ದವು. ಆ ರಾತ್ರಿ ಗಾಢಾ0ಧಕಾರಮಯವಾಗಿತ್ತು. ಗುಡುಗು - ಸಿಡಿಲು - ಮಳೆ; ವಸುದೇವನು ಪುಟ್ಟ ಕೃಷ್ಣನನ್ನು ಎತ್ತಿಕೊ0ಡಿರುವಾಗ, ವಸುದೇವನ ತಲೆಯ ಮೇಲೆ ಛತ್ರಿಯ0ತೆ ಅನ0ತಶೇಷನು ತನ್ನ ಹೆಡೆಯನ್ನು ಬಿಚ್ಚಿದನು. ಅವರು ಯಮುನಾ ನದಿಯ ಬಳಿ ಬ0ದಾಗ, ನದಿಯು ಭಾರೀ ಅಲೆಗಳಿ0ದ ಭೋರ್ಗರೆಯುತ್ತಿತ್ತು. ಆದರೆ ನದಿಯು ಭಗವ0ತನಿಗೆ ಆ ದಡಕ್ಕೆ ಹೋಗಲು ಎಡೆ ಮಾಡಿ ಕೊಟ್ಟಿತು. ಆಚೆಯ ದಡದಲ್ಲಿ ವೃ0ದಾವನದಲ್ಲಿ ಎಲ್ಲರೂ ನಿದ್ದೆ ಮಾಡುತ್ತಿದ್ದಾಗ ನ0ದ ಮಹಾರಾಜನ ಮನೆಗೆ ಹೋದನು. ಅವನು ಮನೆಯೊಳಕ್ಕೆ ಶಬ್ದ ಮಾಡದೇ ಹೋಗಿ ಕೃಷ್ಣನನ್ನು ತಾಯಿ ಯಶೋಧೆಯ ಪಕ್ಕ ಬಿಟ್ಟನು. ಆಮೇಲೆ ಯಶೋಧೆಯ ಹೊಟ್ಟೆಯಲ್ಲಿ ಅದೇ ಸಮಯಕ್ಕೆ ಹುಟ್ಟಿದ ಹೆಣ್ಣು ಮಗುವನ್ನು ಎತ್ತಿಕೊ0ಡು ಬ0ದು ಕ0ಸನ ಕಾರಾಗೃಹದಲ್ಲಿದ್ದ ದೇವಕಿಯ ಪಕ್ಕದಲ್ಲಿ ಮಲಗಿಸಿದನು. ಅವನು ಎಲ್ಲಾ ಬಾಗಿಲುಗಳನ್ನೂ ಭದ್ರ ಮಾಡಿದ್ದನು. ಆದ್ದರಿಂದ ಕ0ಸನಿಗೆ ಆ ರಾತ್ರಿ ಅಷ್ಟೊ0ದು ಘಟನೆಗಳು ಆಗಿರುವುದು ತಿಳಿಯಲಿಲ್ಲ. ವೃ0ದಾವನದಲ್ಲಿ, ಯಶೋಧೆಗೆ ಒ0ದು ಗ0ಡು ಮಗು ಆಯಿತು ಎ0ದು ಘೋಷಿಸಲಾಯಿತು. ಗೋಪ - ಗೋಪಿಯರೆಲ್ಲರೂ ಚೆನ್ನಾಗಿ ಸಿ0ಗರಿಸಿಕೊ0ಡು, ನವಜಾತ ಮಗುವಿಗೆ ಉಡುಗೊರೆಗಳನ್ನು ಕೊಟ್ಟರು. ನ0ದ ಮಹಾರಾಜ ಮತ್ತು ಯಶೋಧೆಯರ ಮನೆಗೆ ಹೋಗಿ ಗೋಪಿಯರು ಅರಿಶಿನ, ಮೊಸರು, ಹಾಲು ಮತ್ತು ನೀರನ್ನು ಬೆರೆಸಿ ಮುದ್ದು ಕೃಷ್ಣನ ಮತ್ತು ಇತರರ ಮೇಲೆ ಹಾಕಿ ಹರಸಿದರು.

      ಶ್ರೀ ಕೃಷ್ಣನ ಲೀಲಾ ಪ್ರದರ್ಶನಗಳು:
ಭಾರತದ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣನ ಜೀವಿತಕಾಲದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಸಣ್ಣ ಪುಟ್ಟ ಹುಡುಗರು ತಮ್ಮನ್ನು "ಗೋವಿಂದ" ಅಥವಾ "ಗೋಪಾಲ" ಎಂದು ಹೇಳಿಕೊಂಡು ರಸ್ತೆ ಬೀದಿಗಳಲ್ಲಿ ಓಡಾಡುತ್ತಾ ಮೊಸರು - ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಒಡೆಯುವರು. ಈ ಮಣ್ಣಿನ ಗಡಿಗೆಗಳನ್ನು ಎತ್ತರದ ಕಟ್ಟಡಗಳ ನಡುವೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆಗೆ ಕಾಣಿಕೆ ಹಣವನ್ನು ಕಟ್ಟಿರಲಾಗಿರುವುದರಿಂದ ಗೋವಿಂದನಂತೆ ವೇಷ ಧರಿಸಿದ ಹುಡುಗರು ಮಡಿಕೆಯನ್ನು ಒಡೆದು, ಆ ಹಣವನ್ನು ತಮ್ಮಲ್ಲಿ ಹಂಚಿಕೊಳ್ಳುವರು. ಇನ್ನು ಕೆಲವೆಡೆಗಳಲ್ಲಿ ಕಂಬವೊಂದರ ತುದಿಗೆ ಮಡಿಕೆಯನ್ನು ಕಟ್ಟಿದ್ದು, ಆ ಕಂಬಕ್ಕೆ ಎಣ್ಣೆಯನ್ನು ಸವರಿರಲಾಗುತ್ತದೆ. ಹುಡುಗರು ಮಡಿಕೆಯನ್ನು ಮುಟ್ಟಲು ಯತ್ನಿಸುತ್ತಿರುವಾಗ ಆ ಕೆಲಸ ಕಷ್ಟಕರವಾಗಲೆಂದು ಪ್ರೇಕ್ಷಕರು ಅವರ ಮೇಲೆ ನೀರೆರಚುವರು. ಈ ವಿನೋದದಿಂದ ಎಲ್ಲರೂ ಸಂತೋಷಗೊಳ್ಳುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries