HEALTH TIPS

ಗಮನ ಸೆಳೆದ ವಿಶ್ವ ದೃಷ್ಟಿ ದಿನಾಚರಣೆ

         ಕಾಸರಗೋಡು:  ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮಗಳು ಗಮನಸೆಳೆದಿವೆ.
            ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕೆ.ಕೆ.ಪುರಂ ಮದ್ರಸಾದಲ್ಲಿ ನಡೆದ ಸಮಾರಂಭಗಳು ಆಕರ್ಷಣೆ ಪಡೆದಿವೆ. ಜನಜಾಗೃತಿ, ದೃಷ್ಟಿ, ಸಿಹಿಮೂತ್ರರೋಗ ಇತ್ಯಾದಿಗಳ ತಪಾಸಣೆ ನಡೆದುವು. ಚೆಂಗಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಕ್ಕಳಿಗಾಗಿ ಕಣ್ಣುದಾನ ಸಂಬಂಧ ಘೋಷಣೆ ರಚನೆ ಸ್ಪರ್ಧೆ ಜರುಗಿತು.
     ಡಾ.ಮೊಯ್ದೀನ್ ಜಾಸರ್ ಆಲಿ ದಿನಾಚರಣೆಯನ್ನು ಉದ್ಘಾಟಿಸಿದರು. ಹೆಲ್ತ್ ಇನ್ಸ್ ಪೆಕ್ಟರ್ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಆಪ್ಟೋ ಮೆಟ್ರಿಸ್ಟ್ ಕೆ.ಎಸ್.ಶಶಿಕಲಾ ತರಗತಿ ನಡೆಸಿದರು. ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಅಫೀಝ್ ಷಾಫಿ, ಜೆ.ಪಿ.ಎಚ್.ಎನ್. ಗಳಾದ ಪಿ.ಟಿ.ಜಲಜಾ, ಕೆ.ವಿ.ನಿಷಾ, ಎಸ್.ಆಶಾಮೋಹನ್, ಆಶಾ ಕಾರ್ಯಕರ್ತರಾದ ಸಿ.ವಿ.ಶ್ರೀಜಾಕುಮಾರಿ, ಕೆ.ಜಯಕುಮಾರಿ, ಪಿ.ರೋಹಿಣಿ, ಎಸ್.ಭವಾನಿ, ಕಬೀರ್ ಚೆರ್ಕಳಂ, ಸಿ.ಎಂ.ಅಬ್ದುಲ್ಲ ಕುಂ?? ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries