HEALTH TIPS

ಕನ್ನಡ ಪುಸ್ತಕಗಳ ಹಸ್ತಾಂತರ

                     
         ಕಾಸರಗೋಡು:   ಕನ್ನಡ ಮಾಧ್ಯಮ ಹೈಯರ್ ಸೆಕೆಂಡರಿ ತತ್ಸಮಾನ ತರಗತಿಯ ಪುಸ್ತಕಗಳ ಹಸ್ತಾಂತರ ನಡೆಸಲಾಯಿತು. ಜಿಲ್ಲಾ ಪಂಚಾಯತ್, ರಾಜ್ಯ ಸಾಕ್ಷರತಾ ಮಿಷನ್ ಜಂಟಿನೇತೃತ್ವದಲ್ಲಿ ನಡೆಸಲಾಗುವ ತತ್ಸಮಾನ ತರಗತಿಯ ದ್ವಿತೀಯ ವರ್ಷದ ಪುಸ್ತಕಗಳನ್ನು ಈ ರೀತಿ ಹಸ್ತಾಂತರಿಸಲಾಗಿದೆ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ಅವರು ರಾಜ್ಯ ಸಾಕ್ಷರತಾ ಮಿಷನ್ ಸಹಾಯಕ ನಿರ್ದೇಶಕ ಕೆ.ಅಯ್ಯಪ್ಪನ್ ನಾಯರ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಸಂಚಾಲಕ ಷಾಜು ಜಾನ್, ಸಹಾಯಕ ಸಂಚಾಲಕ ಪಿ.ಎನ್.ಬಾಬು, ಕಾರ್ಯಾಗಾರ ಸಮಿತಿ ಸಂಚಾಲಕ ಸತ್ಯನಾರಾಯಣ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries